DKD6 ವಿಜೇತರಾಗಿ 'ಪವರ್ ಸ್ಟಾರ್ ಟ್ರೋಫಿ' ಪಡೆದ ಸಧ್ವಿನ್-ಶಾರಿಕಾ

Dance Karnataka Dance 6 : ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6 ಇಡೀ ಕರ್ನಾಟಕವೇ ಮೆಚ್ಚಿ ಮೆರೆಸಿದ ಅದ್ಧೂರಿ ಡ್ಯಾನ್ಸ್ ಶೋ. ಡ್ಯಾನ್ಸಿಂಗ್ ಮಹಾಗುರು ಕರುನಾಡ ಚಕ್ರವರ್ತಿ ಡಾ . ಶಿವರಾಜ್ ಕುಮಾರ್ ಅವರ ಸಾರಥ್ಯದಲ್ಲಿ ಯಶಸ್ವಿಗೊಂಡ ಈ ಕಾರ್ಯಕ್ರಮ ಕಳೆದ ಶನಿವಾರವಷ್ಟೇ ಭರ್ಜರಿಯಾಗಿ ಫಿನಾಲೆ ಮುಗಿಸಿದೆ.

Written by - Chetana Devarmani | Last Updated : Sep 27, 2022, 10:02 AM IST
  • ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6
  • DKD6 ವಿಜೇತರಾಗಿ ಸಧ್ವಿನ್-ಶಾರಿಕಾ
  • 'ಪವರ್ ಸ್ಟಾರ್ ಟ್ರೋಫಿ' ಪಡೆದ ಸಧ್ವಿನ್-ಶಾರಿಕಾ
DKD6 ವಿಜೇತರಾಗಿ 'ಪವರ್ ಸ್ಟಾರ್ ಟ್ರೋಫಿ' ಪಡೆದ ಸಧ್ವಿನ್-ಶಾರಿಕಾ  title=
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6

Dance Karnataka Dance 6 : ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6 ಇಡೀ ಕರ್ನಾಟಕವೇ ಮೆಚ್ಚಿ ಮೆರೆಸಿದ ಅದ್ಧೂರಿ ಡ್ಯಾನ್ಸ್ ಶೋ. ಡ್ಯಾನ್ಸಿಂಗ್ ಮಹಾಗುರು ಕರುನಾಡ ಚಕ್ರವರ್ತಿ ಡಾ . ಶಿವರಾಜ್ ಕುಮಾರ್ ಅವರ ಸಾರಥ್ಯದಲ್ಲಿ ಯಶಸ್ವಿಗೊಂಡ ಈ ಕಾರ್ಯಕ್ರಮ ಕಳೆದ ಶನಿವಾರವಷ್ಟೇ ಭರ್ಜರಿಯಾಗಿ ಫಿನಾಲೆ ಮುಗಿಸಿದೆ. ಈ ಸೀಸನ್ ನ ಆರಂಭದಿಂದಲೂ ನೃತ್ಯದ ಅನೇಕ ಪ್ರಯೋಗಗಳಿಂದ ವೀಕ್ಷಕರ ಮನಸೆಳೆದಿದ್ದ ಈ ಶೋ ಕೊನೆಯ ಹಂತದಲ್ಲೂ ಅದನ್ನು ಮುಂದುವರೆಸಿ ದೊಡ್ಡ ಮಟ್ಟದ ಚಪ್ಪಾಳೆ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ವಾರದಿಂದ ವಾರಕ್ಕೆ ಸ್ಪರ್ಧಿಗಳ ಧೈರ್ಯ , ಶಿಸ್ತು ಮತ್ತು ಛಲದಿಂದ ಸ್ಪರ್ಧೆ ಕಠಿಣವಾಗುತ್ತಿದ್ದಿದ್ದು ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. 

ಇದನ್ನೂ ಓದಿ : Bigg Boss Kannada Season 9 : ಮೊದಲ ವಾರವೇ 12 ಮಂದಿ ನಾಮಿನೇಟ್.!

ಇನ್ನು ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ "ಪವರ್ ಸ್ಟಾರ್ ಟ್ರೋಫಿ". ಇಡೀ ರಾದ್ಯಂತ ಸಂಚರಿಸಿ ಅಭಿಮಾನಿಗಳ ಅಪ್ಪುಗೆ ಪಡೆದು ಬಂದಿದ್ದ ಈ ಟ್ರೋಫಿಯನ್ನು ಹಾಗು ಅಪ್ಪು ಅವರ ಆಶೀರ್ವಾದವನ್ನು ಪಡೆದಿದ್ದಾರೆ "ಸಧ್ವಿನ್ - ಶಾರಿಕಾ" ಜೋಡಿ. ಶಿವಣ್ಣ ಅವರ ಕೈಯಿಂದ ಈ ಪ್ರಶಸ್ತಿಯನ್ನು ಪಡೆದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ ಆರರ ವಿಜೇತರಾಗಿದ್ದಾರೆ. 

ಈ ಫಿನಾಲೆ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆಗಟ್ಟಿದವರು ಎಂದರೆ ಇದೇ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗುತ್ತಿರುವ ನವರಸನಾಯಕ ಜಗ್ಗೇಶ್  , ಅದಿತಿ ಪ್ರಭುದೇವ ಮತ್ತು ನಟ ರಾಕ್ಷಸ ಡಾಲಿ ಧನಂಜಯ ಅಭಿನಯದ " ತೋತಾಪುರಿ " ಚಿತ್ರತಂಡ .  ಸೂಪರ್ ಹಿಟ್ ಸಿನಿಮಾ ಸಿದ್ಲಿಂಗು ಖ್ಯಾತಿಯ ಎಂ . ಸಿ . ವಿಜಯ್ ಪ್ರಸಾದ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಸುರೇಶ್ .ಕೆಎ  ಅವರು ಹಣಹೂಡಿಕೆ ಮಾಡಿದ್ದಾರೆ.

ಇದನ್ನೂ ಓದಿ : Bigg Boss Kannada Season 9: ಕಾವ್ಯಶ್ರೀ ಮನೆಯವರಿಗೆಲ್ಲಾ ರೈಲ್ ಬಿಡ್ತಿದ್ದಾರೆ!

ಫಿನಾಲೆ ಕಾರ್ಯಕ್ರಮದ ವೇದಿಕೆಯಲ್ಲೊಂದು ಸಾರ್ಥಕ ಕ್ಷಣಕ್ಕೆ ಕಾರಣರಾದ ಈ ತಂಡ ಹಾಗು ನಿರ್ಮಾಪಕ ಸುರೇಶ್ ಅವರು ನವರಸ ನಾಯಕ ಜಗ್ಗೇಶ್ ಮತ್ತು ಡಾ . ಶಿವರಾಜ್ ಕುಮಾರ್ ಹಾಗು "ತೋತಾಪುರಿ " ಚಿತ್ರ ತಂಡದ ಸಮ್ಮುಖದಲ್ಲಿ ಡಿಕೆಡಿ -6 ಕಾರ್ಯಕ್ರಮದ ವಿಶೇಷ ಪ್ರತಿಭೆಗಳಾದ ಹೃಷಿಕೇಶ್ ಮತ್ತು ಸಹನಾ ಜೋಡಿಗೆ ತಲಾ 1 ಲಕ್ಷ ರೂ ವನ್ನು ಬಹುಮಾನವಾಗಿ ನೀಡಿ ಪ್ರೋತ್ಸಾಹಿಸಿದ್ದಾರೆ.  

ಇದೇ ಸೆಪ್ಟೆಂಬರ್ 30 ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗಿತ್ತಿರುವ ಈ ವಿಶೇಷ ಸಿನಿಮಾಕ್ಕೆ ಅದ್ಧೂರಿಯಾದ ಯಶಸ್ಸು ಸಿಗಲಿ ಕನ್ನಡ ಚಿತ್ರೋದ್ಯಮ, ಚಿತ್ರಪ್ರೇಮಿಗಳು ಇದನ್ನು ಪ್ರೀತಿಯಿಂದ ಒಪ್ಪಿಕೊಂಡು ಅಪ್ಪಿಕೊಳ್ಳಲಿ ಎಂದು ಜೀ ಕನ್ನಡ ವಾಹಿನಿ ಈ ಮೂಲಕ ಆಶಿಸಿ, ಹಾರೈಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News