PM Kisan: ಪತಿ-ಪತ್ನಿ ಇಬ್ಬರಿಗೂ ಸಿಗುತ್ತದೆ PM Kisan Samman Nidhi ಯೋಜನೆಯ ರೂ.6000? ಈ ನಿಯಮ ನಿಮಗೆ ತಿಳಿದಿರಲಿ

PM Kisan Samman Nidhi Update: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10 ನೇ ಕಂತು ಶೀಘ್ರದಲ್ಲಿಯೇ ರೈತರ ಖಾತೆ ಸೇರಲಿದೆ. ಆದರೆ ಕೆಲವು ರೈತರಿಗೆ ಅದರ ಅರ್ಹತೆಯ ಬಗ್ಗೆ ಇನ್ನೂ  ಅನುಮಾನಗಳಿವೆ. ಅರ್ಹತೆಯ ವಿವರಗಳನ್ನು ಮತ್ತೊಮ್ಮೆ ತಿಳಿದುಕೊಳ್ಳೋಣ ಬನ್ನಿ,

Written by - Nitin Tabib | Last Updated : Oct 9, 2021, 08:08 PM IST
  • PM ಕಿಸಾನ್ ಅಡಿಯಲ್ಲಿ ಅರ್ಹತೆ ಕುರಿತು ನಿಮಗೆ ಸರಿಯಾಗಿ ತಿಳಿದಿದೆಯೇ?
  • 9 ನೇ ಕಂತು ಈಗಾಗಲೇ ರೈತರ ಖಾತೆ ಸೇರಿದೆ.
  • ಈ ಯೋಜನೆಗೆ ಸಂಬಂಧಿಸಿದ ಕೆಲವು ವಿಶೇಷ ನಿಯಮಗಳನ್ನು ತಿಳಿದುಕೊಳ್ಳೋಣ ಬನ್ನಿ.
PM Kisan: ಪತಿ-ಪತ್ನಿ ಇಬ್ಬರಿಗೂ ಸಿಗುತ್ತದೆ PM Kisan Samman Nidhi ಯೋಜನೆಯ ರೂ.6000? ಈ ನಿಯಮ ನಿಮಗೆ ತಿಳಿದಿರಲಿ title=
PM Kisan Samman Nidhi Rules (File Photo)

ನವದೆಹಲಿ: PM Kisan Samman Nidhi Update - ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಸರ್ಕಾರವು ರೈತರ ಖಾತೆಗೆ ವಾರ್ಷಿಕವಾಗಿ ಮೂರು ಕಂತುಗಳಲ್ಲಿ ರೂ.6000 ರೂಪಾಯಿಗಳನ್ನು ವರ್ಗಾಯಿಸುತ್ತದೆ. 10 ನೇ ಕಂತು (PM Kisan 10th Installment) ರೈತರ ಖಾತೆಗೆ ಶೀಘ್ರದಲ್ಲಿಯೇ ಬರಲಿದೆ. ಆದರೆ, ಇದುವರೆಗೆ ಕೆಲ ರೈತರ ಖಾತೆಗೆ 9 ನೇ ಕಂತು ಸೇರಿಲ್ಲ. ಏಕೆಂದರೆ ಇದುವರೆಗೆ  ಈ ಯೋಜನೆಯ ಅರ್ಹತೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿವೆ. ಉದಾಹರಣೆಗೆ, ಪತಿ ಮತ್ತು ಪತ್ನಿ ಇಬ್ಬರೂ PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪಡೆಯಬಹುದೇ? ಇತ್ಯಾದಿ. ಈ ಕುರಿತಾದ ನಿಯಮ ಏನು ಹೇಳುತ್ತದೆ ತಿಳಿಯೋಣ ಬನ್ನಿ.

ಯಾರಿಗೆ ಸಿಗುತ್ತದೆ ಈ ಯೋಜನೆಯ ಲಾಭ?
ಪತಿ ಮತ್ತು ಪತ್ನಿ ಇಬ್ಬರೂ PM ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Benefits) ಲಾಭ ಪಡೆಯಲು ಸಾಧ್ಯವಿಲ್ಲ. ಯಾರಾದರೂ ಹೀಗೆ ಮಾಡಿದರೆ, ಸರ್ಕಾರ ಅದನ್ನು ವಂಚನೆ ಎಂದು ಭಾವಿಸಿ, ಅವರ ಬಳಿಯಿಂದ ಹಣ ವಸೂಲಿ ಮಾಡುತ್ತದೆ. ಇದಲ್ಲದೇ, ಇಂತಹ ಅನೇಕ ನಿಬಂಧನೆಗಳಿವೆ, ಅದು ರೈತರನ್ನು ಅನರ್ಹರನ್ನಾಗಿಸುತ್ತವೆ. . ರೈತ ಕುಟುಂಬದಲ್ಲಿ ಯಾರಾದರೂ ತೆರಿಗೆ ಪಾವತಿಸುತ್ತಿದ್ದರೆ, ಈ ಯೋಜನೆಯ ಲಾಭವು ಅವರಿಗೆ ಅಂತಹ ರೈತರಿಗೆ ಸಿಗುವುದಿಲ್ಲ. ಅಂದರೆ, ಸಂಗಾತಿಗಳಲ್ಲಿ ಯಾರಾದರೂ ಕಳೆದ ವರ್ಷ ಆದಾಯ ತೆರಿಗೆಯನ್ನು ಪಾವತಿಸಿದ್ದರೆ, ಅವರು ಈ ಯೋಜನೆಯ ಲಾಭವನ್ನು ಪಡೆಯುವುದು ಸಾಧ್ಯವಿಲ್ಲ.

ಇದನ್ನೂ ಓದಿ-PM Kisan Samman Yojana: ಇಂದು ಈ ಕೆಲಸವನ್ನು ಮಾಡಿಲ್ಲ ಎಂದಾದರೆ ಖಾತೆಗೆ ಬರುವುದಿಲ್ಲ 4000 ರೂ. ಇಂದೇ ಕೊನೆಯ ದಿನ

ಯಾರು ಅನರ್ಹರು? (PM Kisan Samman Nidhi Rules)
ಒಬ್ಬ ರೈತ ತನ್ನ ಕೃಷಿ ಭೂಮಿಯನ್ನು ಕೃಷಿ ಕೆಲಸಕ್ಕೆ ಬಳಸದೆ, ಇತರ ಕೆಲಸಗಳಿಗೆ ಬಳಸುತ್ತಿದ್ದಾರೆ,  ಅಥವಾ ಬೇರೆಯವರ ಹೊಲಗಳಲ್ಲಿ ಕೃಷಿ ಕೆಲಸ ಮಾಡುತ್ತಿದ್ದರೆ ಮತ್ತು ಹೊಲವು ಆತನಿಗೆ ಸೇರಿಲ್ಲ. ಅಂತಹ ರೈತರಿಗೂ ಈ ಯೋಜನೆಯ ಲಾಭ ಪಡೆಯಲು ಅರ್ಹತೆ ಇರುವುದಿಲ್ಲ. ಒಬ್ಬ ರೈತ ಬೇಸಾಯ ಮಾಡುತ್ತಿದ್ದರೆ, ಆದರೆ ಹೊಲವು ಅವನ ಹೆಸರಿನಲ್ಲಿಲ್ಲ ಆದರೆ ಅವನ ತಂದೆ ಅಥವಾ ಅಜ್ಜನ ಹೆಸರಿನಲ್ಲಿ ಇದ್ದರೆ, ಅವನು ಕೂಡ ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ.

ಇದನ್ನೂ ಓದಿ-PM Kisan ಯೋಜನೆಯಲ್ಲಿ ಧನವೃಷ್ಟಿ! 6000 ವಾರ್ಷಿಕ ಕಂತಿನ ಜೊತೆಗೆ ಸಿಗಲಿದೆ 5000 ರೂ.ಗಳ ಮಾಸಿಕ ಪಿಂಚಣಿ

ಇವರಿಗೂ ಕೂಡ ಈ ಯೋಜನೆಯ ಲಾಭ ಸಿಗುವುದಿಲ್ಲ
ಯಾರಾದರೂ ಕೃಷಿ ಭೂಮಿಯ ಮಾಲೀಕರಾಗಿದ್ದು ಮತ್ತು ಅವರು ಸರ್ಕಾರಿ ಉದ್ಯೋಗಿಯಾಗಿದ್ದರೆ ಅಥವಾ ನಿವೃತ್ತರಾಗಿದ್ದಾರೆ, ಹಾಲಿ ಅಥವಾ ಮಾಜಿ ಸಂಸದ, ಎಂಎಲ್‌ಎ, ಸಚಿವರಾಗಿದ್ದರೆ, ಅಂತಹ ಜನರು ಕೂಡ ರೈತ ಯೋಜನೆಯ ಲಾಭ ಪಡೆಯಲು ಅನರ್ಹರು. ವೃತ್ತಿಪರ ನೋಂದಾಯಿತ ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಅಥವಾ ಅವರ ಕುಟುಂಬದ ಸದಸ್ಯರು ಕೂಡ ಅನರ್ಹರ ಪಟ್ಟಿಗೆ ಸೇರುತ್ತಾರೆ. ಆದಾಯ ತೆರಿಗೆ ಪಾವತಿಸುವ ಕುಟುಂಬಗಳು ಕೂಡ ಈ ಯೋಜನೆಯ ಲಾಭವನ್ನು ಪಡೆಯುವ ಹಾಗಿಲ್ಲ.

ಇದನ್ನೂ ಓದಿ-PM Kisan FPO Yojana : ಕೇಂದ್ರ ಸರ್ಕಾರವು ರೈತರಿಗೆ ₹15 ಲಕ್ಷ ಸಹಾಯ ನೀಡುತ್ತಿದೆ : ನೀವು ಈ ರೀತಿ ಅರ್ಜಿ ಸಲ್ಲಿಸಬಹುದು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News