ಯೋಗಿ ಆದಿತ್ಯನಾಥ ಬಿಜೆಪಿಗೆ ಮೈನಸ್ ಪಾಯಿಂಟ್ -ಸಿದ್ದರಾಮಯ್ಯ

        

Last Updated : Apr 27, 2018, 04:49 PM IST
ಯೋಗಿ ಆದಿತ್ಯನಾಥ ಬಿಜೆಪಿಗೆ ಮೈನಸ್ ಪಾಯಿಂಟ್ -ಸಿದ್ದರಾಮಯ್ಯ  title=

ಬೆಂಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಿಜೆಪಿ ಪರ ರಾಜ್ಯದಲ್ಲಿ ಚುನಾವಣಾ ಪ್ರಚಾರ ಮಾಡಿದರೆ ಅದು  ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ "ಆದಿತ್ಯನಾಥ್ ಅವರು ಇಲ್ಲಿಗೆ ಬಂದರೆ ಬಿಜೆಪಿಗೆ ಒಂದು ಮೈನಸ್ ಪಾಯಿಂಟ್ ಆಗುತ್ತದೆ. ಇವರೆಗೆಗೂ ಅವರು ಉತ್ತರಪ್ರದೇಶದಲ್ಲಿ ಏನು ಮಾಡಿದ್ದಾರೆ? ಕಳೆದ ಒಂದು ವರ್ಷದಲ್ಲಿ ಅಲ್ಲಿ ಅವರುಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅವರ ಕ್ಷೇತ್ರದಲ್ಲೇ ಬಿಜೆಪಿಯು ಸೋಲನುಭವಿಸಿದೆ. ಇಲ್ಲಿ ಬಂದು ಅದೇನು ಮಾಡುತ್ತಾರೋ" ಎಂದು ಸಿದ್ದರಾಮಯ್ಯ  ರಾಜ್ಯದಲ್ಲಿನ ಯೋಗಿ ಪ್ರವಾಸದ ಕುರಿತಾಗಿ ಪ್ರತಿಕ್ರಿಯಿಸಿದರು.

ಬಿಜೆಪಿ ಮೂಲಗಳ ಪ್ರಕಾರ ಯೋಗಿ ಆದಿತ್ಯನಾಥ ರಾಜ್ಯದಲ್ಲಿ  ಸುಮಾರು 35ರ್ಯಾಲಿ ಮತ್ತು ರೋಡ್ ಶೋ ಗಳಲ್ಲಿ ಭಾಗವಹಿಸಲಿದ್ದಾರೆ.

Trending News