/kannada/photo-gallery/smartphones-selling-for-just-8k-in-amazon-great-indian-festival-bumper-sale-249412 ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ ಕೇವಲ 8 ಸಾವಿರಕ್ಕೆ ಮಾರಾಟವಾಗುತ್ತಿರುವ ಫೋನ್‌ಗಳು! ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ ಕೇವಲ 8 ಸಾವಿರಕ್ಕೆ ಮಾರಾಟವಾಗುತ್ತಿರುವ ಫೋನ್‌ಗಳು! 249412

ಕರ್ನಾಟಕದ 'ಜನಾಶಿರ್ವಾದ'ಕ್ಕೆ ಮನಸೋತ ರಾಹುಲ್ ಗಾಂಧಿ

     

Last Updated : Feb 27, 2018, 06:25 PM IST
ಕರ್ನಾಟಕದ 'ಜನಾಶಿರ್ವಾದ'ಕ್ಕೆ ಮನಸೋತ ರಾಹುಲ್ ಗಾಂಧಿ title=

ಬೆಂಗಳೂರು: ಮುಂಬೈ ಕರ್ನಾಟಕದಲ್ಲಿ ಹಮ್ಮಿಕೊಂಡಿದ್ದ ಎರಡನೇ ಹಂತದ  ಜನಾಶಿರ್ವಾದ ಯಾತ್ರೆಗೆ ಸಿಕ್ಕಿರುವ ಜನಸ್ಪಂದನೆಗೆ ರಾಹುಲ್ ನಿಜಕ್ಕೂ ಮನಸೋತಿದ್ದಾರೆ. ಈ ಕುರಿತಾಗಿ ಅವರು ಟ್ವಿಟ್ಟರ್ ನಲ್ಲಿ 'ಥ್ಯಾಂಕ್ಯೂ ಕರ್ನಾಟಕ' ಎನ್ನುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯಿಂದ ಪ್ರಾರಂಭಿಸಿದ್ದ ಜನಾಶಿರ್ವಾದ ಯಾತ್ರೆ ವಿಜಯಪುರ ಮತ್ತು ಹುಬ್ಬಳ್ಳಿ-ಧಾರವಾಡ ಭಾಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ತಮ್ಮ ಈ ಯಾತ್ರೆಗೆ ಸಿಕ್ಕ ಜನರ ಪ್ರತಿಕ್ರಿಯೆಗೆ  ಸಂತಸಗೊಂಡಿದ್ದಾರೆ. ಈ ಕುರಿತಾಗಿ ತಮ್ಮ ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡಿರುವ ಅವರು " ನಿನ್ನೆ ಮುಗಿದ ಕರ್ನಾಟಕದಲ್ಲಿನ ನಮ್ಮ ಎರಡನೇ ಹಂತದ ಜನಾಶಿರ್ವಾದ್ ಯಾತ್ರೆಯಲ್ಲಿ  ಇಲ್ಲಿನ ಜನರು ತೋರಿಸಿದ ಪ್ರೀತಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಶ್ರಮ ಈ ಯಾತ್ರೆಯನ್ನು ಯಶಸ್ಹ್ವಿಗೊಳಿಸಲು ಸಾಧ್ಯವಾಗಿದೆ"ಎಂದು ರಾಹುಲ್ ಗಾಂಧಿ ತಮ್ಮ ಯಾತ್ರೆಯ ವಿಡಿಯೋ ಜೊತೆಗೆ ಟ್ವೀಟ್ ಮಾಡಿದ್ದಾರೆ.