ಈ ಪದಾರ್ಥ ಬೆರೆಸಿದ ನೀರು ಕುಡಿದ್ರೆ ಸಾಕು.. ಹೊಟ್ಟೆ ಫುಲ್ ಕ್ಲೀನ್‌ ಆಗುತ್ತೆ!! ಯಾವ ಸಮಸ್ಯೆನೂ ಬರಲ್ಲ..

Benefits of Jeera Water: ಅಜೀರ್ಣ, ಹುಳಿ ತೇಗು ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರು ಜೀರಿಗೆ ನೀರನ್ನು ಸೇವಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಜೀರಿಗೆ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

Stomach problems: ತಿಂದ ಆಹಾರವು ಸರಿಯಾಗಿ ಜೀರ್ಣವಾಗದಿದ್ದರೆ ಆ ನೋವು ಅಥವಾ ಕಿರಿಕಿರಿ ಹೇಗಿರುತ್ತದೆ ಅನ್ನೋದು ಅನುಭವಿಸಿದ ವ್ಯಕ್ತಿಗೆ ಮಾತ್ರ ಗೊತ್ತಿರುತ್ತೆ. ಮಲಬದ್ಧತೆಯು ಮಾನಸಿಕ ಆತಂಕವನ್ನು ಉಂಟುಮಾಡುತ್ತದೆ. ತಿಂದ 2 ರಿಂದ 3 ಗಂಟೆಗಳಲ್ಲಿ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಹುಳಿ ತೇಗು ಉಂಟಾಗುತ್ತದೆ. ಕೆಲವೊಮ್ಮೆ ತಿನ್ನುವ ಆಹಾರವೂ ಗಂಟಲಿಗೆ ಬಂದು ವಾಕರಿಕೆ ಅನುಭವ ಸಹ ಆಗುತ್ತದೆ. ಇದಲ್ಲದೆ ಕೆಲವರಿಗೆ ಬೆಳಗ್ಗೆ ಹಲ್ಲುಜ್ಜುವಾಗ ದದ್ದುಗಳು ಕೂಡು ಬರುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ನಾವು ಸೇವಿಸುವ ಆಹಾರವನ್ನು ಜೀರ್ಣಿಸಿಕೊಳ್ಳಲು ಜೀರ್ಣಕಾರಿ ರಸದೊಂದಿಗೆ ಕೆಲವು ರೀತಿಯ ಕಿಣ್ವಗಳು ಸಹ ಬಹಳ ಅವಶ್ಯಕ. ಪಿತ್ತರಸ ಮತ್ತು ಮೇದೋಜ್ಜೀರಕ ಗ್ರಂಥಿಯ ರಸದೊಂದಿಗೆ ಅಮೈಲೇಸ್, ಪ್ರೋಟೀಸ್​ ಮತ್ತು ಲಿಪೇಸ್ ಕಿಣ್ವಗಳು ಸಹ ಆಹಾರದ ಜೀರ್ಣಕ್ರಿಯೆಗೆ ಬಹಳ ಅವಶ್ಯಕ. ಇವುಗಳು ಸರಿಯಾದ ಪ್ರಮಾಣದಲ್ಲಿ ಬಿಡುಗಡೆಯಾದರೆ ನಾವು ಸೇವಿಸಿದ ಆಹಾರವು ಹುಳಿಯಾಗದೆ ಬೇಗ ಜೀರ್ಣವಾಗುತ್ತದೆ. ಇವುಗಳ ಕೊರತೆಯಾದರೆ ಅಜೀರ್ಣ ಸಮಸ್ಯೆ ಕಾಡುತ್ತದೆ.

2 /5

ಅಜೀರ್ಣ, ಹುಳಿ ತೇಗು ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರು ಜೀರಿಗೆ ನೀರನ್ನು ಸೇವಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಜೀರಿಗೆ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಜೀರಿಗೆಯಲ್ಲಿ ಥೈಮೋಲ್ ಎಂಬ ರಾಸಾಯನಿಕ ಸಂಯುಕ್ತವಿದ್ದು, ಇದು ಆಹಾರದ ಜೀರ್ಣಕ್ರಿಯೆಗೆ ಅಗತ್ಯವಾದ ಕಿಣ್ವಗಳು ಮತ್ತು ಜೀರ್ಣಕಾರಿ ರಸಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.

3 /5

ಜೀರಿಗೆ ನೀರನ್ನು ಕುಡಿಯುವುದರಿಂದ ಜೀರ್ಣಕಾರಿ ರಸಗಳು ಮತ್ತು ಕಿಣ್ವಗಳು ಹೆಚ್ಚು ಉತ್ಪತ್ತಿಯಾಗುತ್ತವೆ. ತಿಂದ ಆಹಾರವು ಹುದುಗುವಿಕೆ ಇಲ್ಲದೆ ತ್ವರಿತವಾಗಿ ಜೀರ್ಣವಾಗುತ್ತದೆ. ಇದರಿಂದ ಅಜೀರ್ಣ, ಹುಳಿ ತೇಗು ಮತ್ತು ಭೇದಿಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಈ ನೀರು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ. 

4 /5

ಅಜೀರ್ಣ ಸಮಸ್ಯೆಯನ್ನು ಕಡಿಮೆ ಮಾಡುವ ಈ ಜೀರಿಗೆ ನೀರನ್ನು ಹೇಗೆ ಮಾಡುವುದು ಅಂತಾ ತಿಳಿಯಿರಿ. ಈ ನೀರನ್ನು ತಯಾರಿಸಲು ಒಂದು ಬಟ್ಟಲಿನಲ್ಲಿ ಒಂದು ಲೋಟ ನೀರನ್ನು ಸುರಿಯಿರಿ. ಅದಕ್ಕೆ ಒಂದು ಚಮಚ ಜೀರಿಗೆ ಪುಡಿಯನ್ನು ಸೇರಿಸಿ ಮತ್ತು ನೀರನ್ನು ಚೆನ್ನಾಗಿ ಕುದಿಸಿ. ಈ ನೀರನ್ನು 3/4 ಗ್ಲಾಸ್ ಆಗುವವರೆಗೆ ಕುದಿಸಿ ಮತ್ತು ಸ್ಟವ್ ಆಫ್ ಮಾಡಿ. ನಂತರ ಈ ನೀರನ್ನು ಸೋಸಿ ಉಗುರು ಬೆಚ್ಚಗಾಗುವವರೆಗೆ ಇಡಿ. ನಂತರ ಕುಡಿಯಿರಿ.

5 /5

ಹೀಗೆ ತಯಾರಿಸಿದ ಜೀರಿಗೆ ನೀರನ್ನು ಪ್ರತಿದಿನ ಬೆಳಗ್ಗೆ ತೆಗೆದುಕೊಳ್ಳಬೇಕು. ಸಮಸ್ಯೆ ತುಂಬಾ ತೀವ್ರವಾಗಿರುವವರು ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಬೇಕು. ಬೆಳಗ್ಗೆ ಮತ್ತು ಸಂಜೆ ಒಂದು ಕಪ್ ತೆಗೆದುಕೊಳ್ಳಬಹುದು. ಇದನ್ನು ಒಂದು ವಾರದಿಂದ ಹತ್ತು ದಿನಗಳ ಕಾಲ ಸೇವಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಜೀರಿಗೆ ನೀರನ್ನು ಸೇವಿಸುವುದರಿಂದ ತಿಂದ ಆಹಾರ ಹುದುಗದೆ ಜೀರ್ಣವಾಗುತ್ತದೆ. ಹುಳಿ ತೇಗು ಹಾಗೂ ಅಜೀರ್ಣ ಸಮಸ್ಯೆಗಳು ಕಡಿಮೆಯಾಗಿ ಹೊಟ್ಟೆ ಚೆನ್ನಾಗಿ ಸ್ವಚ್ಛವಾಗುತ್ತದೆ ಅಂತಾ ಆರೋಗ್ಯ ತಜ್ಞರು ಹೇಳುತ್ತಾರೆ. (ಗಮನಿಸಿರಿ: ಈ ಲೇಖನದಲ್ಲಿ ನೀಡಿರುವ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇಲ್ಲಿನ ಸಲಹೆಗಳನ್ನು ಪಾಲಿಸುವ ಮೊದಲು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ. Zee Kannada News ಇದನ್ನು ದೃಢಪಡಿಸುವುದಿಲ್ಲ.)