ಮನೆಯಂಗಳದ ತುಳಸಿ ಒಣಗುತ್ತಿದ್ದರೆ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮನೆಗೆ ಹೀಗಾಗುತ್ತದೆ ಎಂದರ್ಥ!

ನಿತ್ಯ ತುಳಸಿಗೆ ನೀರು ಹಾಕಿದರೂ ಬಾಡುತ್ತಿದ್ದರೆ ಅದು ನಿಮ್ಮ ಜೀವನದಲ್ಲಿ ಹೀಗಾಗುತ್ತಿದೆ ಎನ್ನುವುದನ್ನು ತಿಳಿಸುತ್ತದೆ. 

Written by - Ranjitha R K | Last Updated : Aug 13, 2024, 04:36 PM IST
  • ಮನೆಯಂಗಳದ ತುಳಸಿ ಲಕ್ಷ್ಮೀಗೆ ಸಮಾನ
  • ಮನೆಯಂಗಳದಲ್ಲಿ ತುಳಸಿ ಇದ್ದರೆ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ
  • ಇದ್ದಕ್ಕಿದ್ದಂತೆ ತುಳಸಿ ಬಾಡುತ್ತಿದ್ದರೆ ಅಶುಭ ಘಟನೆಯ ಸಂಕೇತ
ಮನೆಯಂಗಳದ ತುಳಸಿ ಒಣಗುತ್ತಿದ್ದರೆ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮನೆಗೆ ಹೀಗಾಗುತ್ತದೆ ಎಂದರ್ಥ!  title=

ಬೆಂಗಳೂರು : ನಮ್ಮ ಜೀವನದ ಅವಿಭಾಜ್ಯ ಅಂಗ ತುಳಸಿ. ಹಿಂದೂಗಳ ಮನೆಯ ಮುಂದೆ ತುಳಸಿ ಇದ್ದೇ ಇರುತ್ತದೆ.ತುಳಸಿ ಕಟ್ಟೆಯಲ್ಲಿಯಾದರೂ ಸರಿ ಅಥವಾ ಮನೆಯ ಮುಂದೆಯಾದರೂ ಸರಿ ತುಳಸಿಗೆ ಒಂದು ಸ್ಥಾನ ಇದ್ದೇ ಇರುತ್ತದೆ. ತುಳಸಿಯನ್ನು ಲಕ್ಷ್ಮೀಯ ರೂಪವೆಂದೇ ಕರೆಯಲಾಗುತ್ತದೆ.ಹಾಗಾಗಿಯೇ ನಮ್ಮ ಜೀವನದಲ್ಲಿ ನಮ್ಮ ಮನೆಯ ಮುಂದೆ ತುಳಸಿಗೆ ವಿಶೇಷ ಸ್ಥಾನ. ಇನ್ನು ಮನೆ ಮುಂದೆ ಇರುವ ತುಳಸಿಗೆ ಬೆಳಿಗ್ಗೆ, ಸಂಜೆ ಪೂಜೆ ನೆರವೇರಿಸುವುದು ಪದ್ಧತಿ. 

ಮುಂಜಾನೆ ಎದ್ದ ಕೂಡಲೇ ತುಳಸಿ ಗಿಡಕ್ಕೆ ನೀರು ಹಾಕಿ,ದೀಪ ಬೆಳಗಿಸಿ,ತುಳಸೀ ಪೂಜೆ ಮಾಡಲಾಗುತ್ತದೆ. ಪ್ರತಿ ನಿತ್ಯ ಶೃದ್ದಾ ಭಕ್ತಿಯಿಂದ ತುಳಸಿ ಪೂಜೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.ನಿತ್ಯ ತುಳಸಿ ಸಸ್ಯಕ್ಕೆ ನೀರು ಹಾಕಿದರೂ ಮನೆಯಂಗಳದ ತುಳಸಿ ಇದ್ದಕ್ಕಿದ್ದಂತೆ ಬಾಡುವುದನ್ನು ನೀವು ಕೂಡಾ ಗಮನಿಸಿರಬಹುದು.ಹೀಗೆ ಯಾಕೆ ಆಗುತ್ತಿದೆ ಎನ್ನುವುದು ನಮಗೆ ತಿಳಿಯುವುದಿಲ್ಲ.ಮನೆ ಮುಂದೆ ಇರುವ ಎಲ್ಲಾ ಸಸ್ಯಗಳು ಚೆನ್ನಾಗಿಯೇಅರಳಿ ನಿಂತಿದ್ದರೂ ತುಳಸಿ ಮಾತ್ರ ಬಾಡುತ್ತಿದ್ದರೆ ಇದು ಭವಿಷ್ಯದಲ್ಲಿ ಎದುರಾಗಲಿರುವ ಸಮಸ್ಯೆಗಳನ್ನು ಸೂಚಿಸುತ್ತದೆ.ತುಳಸಿ ಗಿಡ ಒಣಗುತ್ತಿದ್ದರೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳ ಮುನ್ಸೂಚನೆ ಎಂದೇ ಹೇಳಲಾಗುತ್ತದೆ.  

ಇದನ್ನೂ ಓದಿ : ಈ ಶಾಪಗ್ರಸ್ತ ಪುಸ್ತಕವನ್ನು ಇಂದಿಗೂ ಯಾರೂ ಓದಲು ಸಾಧ್ಯವಾಗಿಲ್ಲ...! ಅದರಲ್ಲಿರುವ ರಹಸ್ಯ ಏನು ಗೊತ್ತೇ?

ತುಳಸಿ ಒಣಗುವುದು ಅಶುಭ : 
ಹಿಂದೂ ಧರ್ಮದ ಗ್ರಂಥಗಳ ಪ್ರಕಾರ,ತುಳಸಿ ಸಸ್ಯ ಒಣಗುವುದು ಮತ್ತು ಸೊರಗುವುದು ಅಶುಭ. ನಾವಿರುವ ಮನೆಗೆ ಏನಾದರೂ ಸಮಸ್ಯೆಗಳು ಎದುರಾದರೆ, ಆ ಸಮಸ್ಯೆಯ ತಾಪವನ್ನು ಮೊದಲು ತುಳಸಿ ತನ್ನತ್ತ ಸೆಳೆದುಕೊಳ್ಳುತ್ತಾಳಂತೆ. ಹಾಗಾಗಿ ಇದ್ದಕ್ಕಿದ್ದಂತೆ ತುಳಸಿ ಒಣಗಿ ಹೋಗುತ್ತದೆ ಎನ್ನಲಾಗಿದೆ.ಇನ್ನೊಂದು ನಂಬಿಕೆಯ ಪ್ರಕಾರ,ಮನೆಗೆ ಸಮಸ್ಯೆಗಳು ಎದುರಾಗುವುದಾದರೆ ಮೊದಲು ಲಕ್ಷ್ಮೀ ಸಮಾನಳಾಗಿರುವ ತುಳಸಿ ಎದ್ದು ಹೊರ ನಡೆಯುತ್ತಾಳೆ ಎನ್ನುವುದು.ಹಾಗಾಗಿ ಇದ್ದಕ್ಕಿದ್ದಂತೆ ತುಳಸಿ ಒಣಗಲು ಆರಂಭಿಸಿದರೆ ಏನೋ ಅಶುಭ ಸಂಭವಿಸಲಿದೆ ಎಂದೇ ಅರ್ಥ. 

ಇದಲ್ಲದೆ,ತುಳಸಿ ಸಸಿ ಒಣಗುವುದಕ್ಕೂ ಬುಧ ಗ್ರಹಕ್ಕೂ ಸಂಬಂಧವಿದೆ.  ಜ್ಯೋತಿಷ್ಯದ ಪ್ರಕಾರ,ಬುಧದ ಬಣ್ಣವು ಹಸಿರು.ಇದನ್ನು ಮರ ಮತ್ತು ಸಸ್ಯಗಳ ಅಂಶವೆಂದು ಪರಿಗಣಿಸಲಾಗುತ್ತದೆ.ಮಾತ್ರವಲ್ಲ,ಬುಧ ಇತರ ಗ್ರಹಗಳ ಒಳ್ಳೆಯ ಮತ್ತು ಕೆಟ್ಟ ಫಲಗಳನ್ನು ವ್ಯಕ್ತಿಗೆ ರವಾನಿಸುತ್ತದೆ.ಒಂದು ಗ್ರಹವು ಅಶುಭ ಫಲಗಳನ್ನು ನೀಡುವುದಾದರೆ,ಇದರ ಪ್ರಭಾವ ಬುಧ ಗ್ರಹಕ್ಕೆ ಸಂಬಂಧಿಸಿದ ವಸ್ತುಗಳ ಮೇಲೆ ಮೊದಲು ಆಗುತ್ತದೆ.ತುಳಸಿ ಕೂಡಾ ಬುಧ ಗ್ರಹಕ್ಕೆ ಸಂಬಂಧಿಸಿದ್ದು  ಎನ್ನುವುದನ್ನು ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶ.  

ಇದನ್ನೂ ಓದಿ : ಈ ರಾಶಿಯಲ್ಲಿ ಕುಬೇರ ರಾಜ ಯೋಗ !ಕೈ ಇಟ್ಟಲೆಲ್ಲಾ ಹಣ ಉಕ್ಕುವ ಕಾಲ !ಯಶಸ್ಸು, ಕೀರ್ತಿ ಗೌರವಕ್ಕೆ ಕೊನೆಯೇ ಇಲ್ಲ

ಒಣಗಿದ ತುಳಸಿ ಗಿಡವನ್ನು ಅಂಗಳದಲ್ಲಿ ಇಡುವುದು ಕೂಡಾ ಅಶುಭವೇ.ಹಾಗಾಗಿ, ತುಳಸಿ ಗಿಡ ಒಣಗಿದೆ ಎನ್ನುವುದು ಗಮನಕ್ಕೆ ಬಂದ ಕೂಡಲೇ ಅದನ್ನು ತೆಗೆದು ನೀರಿನಲ್ಲಿ ಬಿಡಿ.ಹೊಸ ತುಳಸಿ ಸಸ್ಯವನ್ನು ನೆಡಿ. ಮತ್ತೆ ಎಂದಿನಂತೆ ಪೂಜೆ ಪುನಸ್ಕಾರ ಆರಂಭಿಸಿ.

 

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

Trending News