ʼತತ್ಸಮ ತದ್ಭವʼ ರಿಲೀಸ್‌ : ಮತ್ತೇ ದೊಡ್ಡ ಪರದೆಯಲ್ಲಿ ಮೇಘನಾ ರಾಜ್‌, ಇಲ್ಲಿದೆ ಸಿನಿಮಾ ವಿಮರ್ಶೆ

Tatsma Tadbhava : ಮೇಘನಾ ರಾಜ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ʼತತ್ಸಮ ತದ್ಭವʼ ಸಿನಿಮಾ ಇಂದು (ಸೆ.15) ರಂದು ತೆರೆಕಂಡಿದ್ದು, ಸಿನಿಮಾ ವಿಮರ್ಶೆ ಇಲ್ಲಿದೆ ನೋಡಿ

Written by - Zee Kannada News Desk | Last Updated : Sep 15, 2023, 11:41 AM IST
  • ಮೇಘನಾ ರಾಜ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ʼತತ್ಸಮ ತದ್ಭವʼ ಸಿನಿಮಾ ಇಂದು (ಸೆ.15) ರಂದು ತೆರೆಕಂಡಿದೆ.
  • ಸಿನಿಮಾ ರಿಲೀಸ್‌ ಆಗುವುದುದಕ್ಕಿಂತ ಮೊದಲು ʼದೂರಿ ಲಾಲಿʼ ಎಂಬ ಹಾಡು ಅಭಿಮಾನಿಗಳ ಮನಗೆದ್ದಿತ್ತು.
  • ಪ್ರಜ್ವಲ್‌ದೇವರಾಜ್ ಅರವಿಂದ್ ಅಶ್ವತ್ಥಾಮನ ಪಾತ್ರದಿಂದ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ʼತತ್ಸಮ ತದ್ಭವʼ ರಿಲೀಸ್‌ : ಮತ್ತೇ ದೊಡ್ಡ ಪರದೆಯಲ್ಲಿ ಮೇಘನಾ ರಾಜ್‌, ಇಲ್ಲಿದೆ ಸಿನಿಮಾ ವಿಮರ್ಶೆ title=

Movie Review : ಸ್ಯಾಂಡಲ್‌ವುಡ್‌ನಲ್ಲಿ ಇಂದು ನಾಲ್ಕು ಸಿನಿಮಾಗಳು ತೆರೆಕಂಡಿದ್ದು, ಆ ಸಿನಿಮಾಗಳಲ್ಲಿ ಮೇಘನಾ ರಾಜ್‌ ನಟನೆಯ ʼತತ್ಸಮ ತದ್ಭವʼ ಸಿನಿಮಾ ಕೂಡ ಒಂದು. ವಿಶಾಲ್‌ ಅತ್ರೇಯ ಅವರ ನಿರ್ದೇಶನದಲ್ಲಿ ಹೊರಬಂದ ಕ್ರೈಮ್‌ ಥ್ರಿಲ್ಲರ್‌ ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಈ ಸಿನಿಮಾದ ಮೂಲಕ ಮೇಘನಾ ರಾಜ್‌ ಮತ್ತೇ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ. 

ನಾಲ್ಕು ವರ್ಷಗಳ ನಂತರ ನಟಿ ಮೇಘನಾ ರಾಜ್‌ ʼತತ್ಸಮ ತದ್ಭವʼ ಮೂಲಕ ಪುನಾರಾಗಮನ ಮಾಡಿರುವುದು ಖುಷಿ ತಂದು ಕೊಟ್ಟಿದೆ, ಸಿನಿಮಾ ರಿಲೀಸ್‌ ಆಗುವುದುದಕ್ಕಿಂತ ಮೊದಲು ʼದೂರಿ ಲಾಲಿʼ ಎಂಬ ಹಾಡು ಅಭಿಮಾನಿಗಳ ಮನಗೆದ್ದಿತ್ತು. ಈಗಾಗಲೇ ಸಿನಿಮಾ ತೆರೆ ಕಂಡಿದ್ದು, ವಿಮರ್ಶೆ ಸುರಿದು ಬರುತ್ತಿದೆ. ಪ್ರಮುಖ ಪಾತ್ರದಲ್ಲಿ ಮೇಘನಾ ರಾಜ್‌, ಪ್ರಜ್ವಲ್‌ ದೇವರಾಜ್‌ ಮಾತ್ರ ನಟಿಸಿದ್ದಲ್ಲದೇ ಬಾಲಾಜಿ ಮನೋಹರ್‌, ಶ್ರುತಿ, ಮಹತಿ, ಗಿರಿಜಾ ಲೋಕೇಶ್‌, ಅರವಿಂದ ಅಯ್ಯರ್‌ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಇದನ್ನು ಓದಿ - ಟಗರು ಪಲ್ಯ ಸಿನಿಮಾದ ಎರಡನೇ ಹಾಡು ರಿಲೀಸ್...ಸೂರ್ಯಕಾಂತಿ ನಾನು ಎಂದು ಕುಣಿದ ಲವ್ಲಿಸ್ಟಾರ್ ಪುತ್ರಿ

ಸಿನಿಮಾ ವೀಕ್ಷಿಸಿದವರಿಗೆ ಸಿನಿಮಾದ ಕುರಿತಾಗಿ ಸಕಾರಾತ್ಮಕ ಮಾತುಗಳು ಮೂಡಿಸಿದೆ.  ಸಿನಿಮಾದಲ್ಲಿ ಪತಿ ನಾಪತ್ತೆಯಾದ ನಂತರ ಪೊಲೀಸ್‌ರಿಂದ ಸಹಾಯ ಪಡೆಯುವ ಮಹಿಳೆಯ ಕುರಿತಾಗಿ ಸಿನಿಮಾ ವಿವರಿಸುತ್ತದೆ. ಇದೆಲ್ಲದರ ಮಧ್ಯದಲ್ಲಿ ಅವಳು ಆಘಾತಕಾರಿ ಪರಿಸ್ಥಿತಿಗಳನ್ನು ಎದುರಿಸತೊಡಗುತ್ತಾಳೆ.  "ಒಬ್ಬ ಅನುಭವಿ ಪೊಲೀಸ್ ಇನ್ಸ್‌ಪೆಕ್ಟರ್ ರಹಸ್ಯಗಳು, ಸುಳ್ಳುಗಳು ಮತ್ತು ನಿಗೂಢತೆಯ ಜಾಲವನ್ನು ಬಹಿರಂಗಪಡಿಸುವ ಗೊಂದಲಕ್ಕೊಳಗಾದ ಕಾಣೆಯಾದ ವ್ಯಕ್ತಿಯ ತನಿಖೆಯನ್ನು ಪರಿಶೀಲಿಸುತ್ತಾನೆ. ಪ್ರಜ್ವಲ್‌ದೇವರಾಜ್ ಅರವಿಂದ್ ಅಶ್ವತ್ಥಾಮನ ಪಾತ್ರದಿಂದ ಉನ್ನತೀಕರಿಸಿದ ಪೋಲೀಸ್ ವಿಚಾರಣೆಯ ಕಾರ್ಯವಿಧಾನಗಳ ಚಿತ್ರಣ, ವಿಶೇಷವಾಗಿ ಅರಿಕಾ ಅವರೊಂದಿಗಿನ ಅವರ ವಿನಿಮಯದಲ್ಲಿ ಅವರು ಜೀವ ತುಂಬಿದ್ದಾರೆ.

ಚೊಚ್ಚಲ ನಟ ವಿಶಾಲ್ ಆತ್ರೇಯ ಅವರು ತತ್ಸಮ ತದ್ಭವವನ್ನು ನಿರ್ದೇಶಿಸಿ ಮತ್ತು ಬರೆದಿದ್ದಾರೆ. ಇದರ ಸಂಗೀತವನ್ನು ವಾಸುಕಿ ವೈಭವ್ ಸಂಯೋಜಿಸಿದ್ದಾರೆ, ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಶ್ರೀನಿವಾಸ್ ರಾಮಯ್ಯ ಮತ್ತು ರವಿ ಆರಾಧ್ಯ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News