8ನೇ ವಯಸ್ಸಿನಲ್ಲೇ ವಿಶ್ವದ ಗಮನ ಸೆಳೆದಿದ್ದ ʼಭಾರತದ ಭರವಸೆʼ ಪ್ರಗ್ನಾನಂದ್‌ ಅತ್ಯತ್ತಮ ಸಾಧನೆಗಳು..!

R Praggnanandhaa life history : ಪ್ರಗ್ನಾನಂದ FIDE ವಿಶ್ವಕಪ್ ಫೈನಲ್‌ನಲ್ಲಿ ಸೋತಿರಬಹುದು. ಆದರೆ ಅವರು ಭಾತರದ ಭರವಸೆಯಾಗಿ ಹೊರಹೊಮ್ಮಿದ್ದಾರೆ. FIDE ವಿಶ್ವಕಪ್ ಫೈನಲ್‌ಗೆ ತಲುಪಿದ ಎರಡನೇ ಭಾರತೀಯರಾಗಿದ್ದಾರೆ. ಪ್ರಗ್ನಾನಂದ ಅವರ ಅತ್ಯುತ್ತಮ ಸಾಧನೆಗಳು ಒಮ್ಮೆ ನೋಡೋಣ ಬನ್ನಿ...

Written by - Krishna N K | Last Updated : Aug 27, 2023, 01:48 PM IST
  • ಪ್ರಗ್ನಾನಂದ FIDE ವಿಶ್ವಕಪ್ ಫೈನಲ್‌ನಲ್ಲಿ ಸೋತಿರಬಹುದು.
  • ಆದರೆ ಅವರು ಭಾತರದ ಭರವಸೆಯಾಗಿ ಹೊರಹೊಮ್ಮಿದ್ದಾರೆ.
  • ಪ್ರಗ್ನಾನಂದ ಅವರ ಅತ್ಯುತ್ತಮ ಸಾಧನೆಗಳು ಒಮ್ಮೆ ನೋಡೋಣ ಬನ್ನಿ..
8ನೇ ವಯಸ್ಸಿನಲ್ಲೇ ವಿಶ್ವದ ಗಮನ ಸೆಳೆದಿದ್ದ ʼಭಾರತದ ಭರವಸೆʼ ಪ್ರಗ್ನಾನಂದ್‌ ಅತ್ಯತ್ತಮ ಸಾಧನೆಗಳು..! title=

R Praggnanandhaa achievements : ಬಾಕುದಲ್ಲಿ ನಡೆದ ಫಿಡೆ ಚೆಸ್ ವಿಶ್ವಕಪ್‌ನ ಫೈನಲ್‌ನಲ್ಲಿ ಗೆಲುವು ಸಾಧಿಸಲು ವಿಫಲವಾದರೂ, ರಮೇಶ್‌ಬಾಬು ಪ್ರಗ್ನಾನಂದ ಅವರು ಇತಿಹಾಸ ನಿರ್ಮಿಸಿದರು. ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ಫೈನಲ್‌ವರೆಗಿನ ಅವರ ಪ್ರಯಾಣದ ಅನೇಕ ಸಾಧನೆಗಳನ್ನು ಇಲ್ಲಿವೆ ನೋಡಿ..

ಆರ್ ಪ್ರಗ್ನಾನಂದ ಅವರು ಮಧ್ಯಮ ವರ್ಗದ ಕುಟುಂಬದಲ್ಲಿ, ರಮೇಶ್‌ಬಾಬು ಮತ್ತು ನಾಗಲಕ್ಷ್ಮಿ ಎಂಬ ದಂಪತಿಗೆ ಜನಿಸಿದ 18 ವರ್ಷದ ಪ್ರಗ್ನಾನಂದ ವಿಶ್ವವಿಖ್ಯಾತ ಚೆಸ್ ದಂತಕಥೆಯಾಗಿ ಬೆಳೆಯುತ್ತಿದ್ದಾರೆ. ಆಗಸ್ಟ್ 10, 2005 ರಂದು ಚೆನ್ನೈನಲ್ಲಿ ಪ್ರಗ್ನಾನಂದ ಜನಿಸಿದರು. ಅವರ ಸಹೋದರಿ ವೈಸಾಲಿಯೂ ಸಹ ಚೆಸ್‌ನಲ್ಲಿ ಮಿಂಚಿದ್ದರು. ಆರ್. ವೈಸಾಲಿ ಗ್ರ್ಯಾಂಡ್ ಮಾಸ್ಟರ್ ಆಗಿದ್ದರು.

ಇದನ್ನೂ ಓದಿ : ತಿಂಗಳೊಳಗೆ ಜಾಮೀನು ಸಿಗದಿದ್ದರೆ ಕ್ರಿಕೆಟಿಗ ಮೊಹಮ್ಮದ್ ಶಮಿ ಬಂಧನ..!

ಆರ್ ಪ್ರಗ್ನಾನಂದ ಅವರು 2ನೇ ವಯಸ್ಸಿನಲ್ಲಿ ಚೆಸ್ ಆಡಲು ಪ್ರಾರಂಭಿಸಿದರು. ಅಲ್-ಐನ್ (ಯುಎಇ) ನಲ್ಲಿ ನಡೆದ ಯೂತ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಮೊದಲ ಟ್ರೋಫಿಯನ್ನು ಗೆದ್ದು, ಎಲ್ಲರನ್ನು ಅಚ್ಚರಿಗೊಳಿಸಿದರು. 2013ರಲ್ಲಿ ವಿಶ್ವದ ಗಮನ ಸೆಳೆದಾಗ ಅವರಿಗೆ ಕೇವಲ 8 ವರ್ಷ.

ಆರ್. ಪ್ರಗ್ನಾನಂದ ಅವರು 2016 ರಲ್ಲಿ ಇಂಟರ್ನ್ಯಾಷನಲ್ ಮಾಸ್ಟರ್ ಆದರು. ಆಗ ಆತನಿಗೆ ಕೇವಲ 10 ವರ್ಷ ವಯಸ್ಸು. ನಾರ್ವೆಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಆರ್ ಪ್ರಗ್ನಾನಂದ ಅವರ ದೊಡ್ಡ ಗೆಲುವು. ಅದು ಕಳೆದ ವರ್ಷ, 2022 ರಲ್ಲಿ. ಪ್ರಗ್ನಾನಂದ ಅವರು ವಿಶ್ವ ನಂ.1 ಶ್ರೇಯಾಂಕವನ್ನು ಗೆದ್ದ ಮೂರನೇ ಭಾರತೀಯರಾದರು.

ಇದನ್ನೂ ಓದಿ : ಆಟಗಾರ್ತಿಯ ತುಟಿಗೆ ಚುಂಬಿಸಿದ್ದ ಸ್ಪೇನ್ ಫುಟ್ಬಾಲ್ ಫೆಡರೇಷನ್ ಅಧ್ಯಕ್ಷ ಸಸ್ಪೆಂಡ್..!

ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಸೋಲಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪ್ರಗ್ನಾನಂದ ಪಾತ್ರರಾಗಿದ್ದಾರೆ. ಪ್ರಗ್ನಾನಂದರು ವಿಶ್ವನಾಥನ್ ಆನಂದರನ್ನು ತಮ್ಮ ಮಾರ್ಗದರ್ಶಕರಾಗಿ ಪರಿಗಣಿಸುತ್ತಾರೆ. ವಿಶ್ವನಾಥನ್ ಆನಂದ್ ನಂತರ, ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ ಏಕೈಕ ಭಾರತೀಯ ಪ್ರಗ್ನಾನಂದ.  

ಪ್ರಗ್ನಾನಂದ FIDE ವಿಶ್ವಕಪ್ ಫೈನಲ್‌ನಲ್ಲಿ ಸೋತಿರಬಹುದು. ಆದರೆ ಅವರು ಭಾತರದ ಭರವಸೆಯಾಗಿ ಹೊರಹೊಮ್ಮಿದ್ದಾರೆ. ಪ್ರಗ್ನಾನಂದ FIDE ವಿಶ್ವಕಪ್ ಫೈನಲ್‌ಗೆ ತಲುಪಿದ ಎರಡನೇ ಭಾರತೀಯರಾಗಿದ್ದಾರೆ. 2016 ರಿಂದ ಅಭ್ಯರ್ಥಿಗಳ ಸ್ಪರ್ಧೆಗೆ ಅರ್ಹತೆ ಪಡೆದ ಮೊದಲ ಭಾರತೀಯರಾಗಿದ್ದಾರೆ. ವಿಶ್ವನಾಥನ್ ಆನಂದ್ ಮತ್ತು ಪ್ರಗ್ನಾನಂದ ಇಬ್ಬರೂ ತಮಿಳರು, ಇದು ತಮಿಳುನಾಡಿನ ಎಲ್ಲಾ ಜನರಿಗೆ ಹೆಮ್ಮೆಯ ವಿಷಯವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News