ನವದೆಹಲಿ: ಉತ್ತರಪ್ರದೇಶದ ಚಂದೌಲಿಯಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಮಾಯಾವತಿ ಮಹಿಳೆ ಮತ್ತು ಪುರುಷ ಎರಡು ಅಲ್ಲ ಎಂದು ವಿವಾದಾತ್ಮಕ ಹೇಳಿಕೆ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದ ಬಿಜೆಪಿ ಶಾಸಕಿ ಸಾಧನಾ ಸಿಂಗ್ ಈಗ ತಮ್ಮ ಹೇಳಿಕೆ ವಿಚಾರವಾಗಿ ಕ್ಷಮೆಯಾಚನೆ ಕೋರಿದ್ದಾರೆ.
BJP MLA Sadhna Singh on her statement on BSP chief Mayawati: I had no intentions of disrespecting anyone, I express regret if someone was hurt by my words. pic.twitter.com/k4PRoaSpS4
— ANI UP (@ANINewsUP) January 20, 2019
#WATCH:BJP MLA Sadhna Singh says about BSP chief Mayawati, "jis din mahila ka blouse, petticoat, saari phat jaaye, wo mahila na satta ke liye aage aati hai. Usko pure desh ki mahila kalankit maanti hai.Wo to kinnar se bhi jyada badtar hai, kyunki wo to na nar hai, na mahila hai." pic.twitter.com/w3Cdizd8eR
— ANI UP (@ANINewsUP) January 19, 2019
ಸಾಧನಾ ಸಿಂಗ್ ಅವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾದ ಹಿನ್ನಲೆಯಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು " ನನಗೆ ಯಾವುದೇ ಅಗೌರವದಿಂದ ಕಾಣುವ ಯಾವುದೇ ಉದ್ದೇಶವಿದ್ದಿರಲಿಲ್ಲ,ನನ್ನ ಹೇಳಿಕೆಯಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ" ಎಂದಿದ್ದಾರೆ.
Uttar Pradesh MLA Sadhana Singh is "mentally ill", said BSP leader Satish Chandra Mishra, after the MLA from Mughalsarai called Mayawati "a person worse than an eunuch"
Read @ANI Story | https://t.co/MxFBQ1fn4h pic.twitter.com/yWEW1wkGvk
— ANI Digital (@ani_digital) January 19, 2019
ಶಾಸಕಿ ಸಾಧನಾ ಸಿಂಗ್ ಅವರು " ನನಗೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಇತ್ತ ಮಹಿಳೆ ಮತ್ತು ಪುರುಷ ಎನಿಸುವುದಿಲ್ಲ,ಅವರಿಗೆ ಸ್ವಾಭಿಮಾನದ ಪರಿಕಲ್ಪನೆಯ ಅರ್ಥವಾಗುವುದಿಲ್ಲ,ಅವರು ಅಧಿಕಾರಕ್ಕಾಗಿ ಸ್ವಾಭಿಮಾನವನ್ನು ಸೇರಿ ಎಲ್ಲವನ್ನು ಮಾರಿಕೊಂಡಿದ್ದಾರೆ"ಎಂದು ಹೇಳಿದರು.ಇನ್ನು ಮುಂದುವರೆದು"ಈ ಅವಕಾಶವನ್ನು ನಾನು ಮಾಯವತಿಯವರನ್ನು ಖಂಡಿಸುವುದಕ್ಕಾಗಿ ಬಳಸಿಕೊಳ್ಳುತ್ತೇನೆ, ಅವರು ಇಡೀ ಹೆಣ್ಣುತನಕ್ಕೆ ಅವಮಾನ,ಬಿಜೆಪಿ ನಾಯಕರು ಅವರ ಸ್ವಾಭಿಮಾನವನ್ನು ರಕ್ಷಿಸಿದರು,ಆದರೆ ತನ್ನ ಅನೂಕೂಲ ಮತ್ತು ಅಧಿಕಾರಕ್ಕಾಗಿ ಅವರು ಎಲ್ಲವನ್ನು ಮಾರಿಕೊಂಡರು.ಆದ್ದರಿಂದ ಇಡೀ ದೇಶವು ಅವರನ್ನು ಖಂಡಿಸಬೇಕೆಂದು ಹೇಳಿದರು.
मुगलसराय से भाजपा की महिला विधायक ने जिस तरह के आपत्तिजनक अपशब्द सुश्री मायावती जी के लिए प्रयोग किए हैं वे घोर निंदनीय हैं. ये भाजपा के नैतिक दिवालियापन और हताशा का प्रतीक है. ये देश की महिलाओं का भी अपमान है.
— Akhilesh Yadav (@yadavakhilesh) January 19, 2019
ಇನ್ನೊಂದೆಡೆ ಇವರ ಹೇಳಿಕೆಯನ್ನು ಖಂಡಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ " ಮುಘಲ್ ಸರಾಯಿ ನ ಬಿಜೆಪಿ ಶಾಸಕಿಯರೊಬ್ಬರು ಮಾಯಾವತಿಯವರ ಬಗ್ಗೆ ಬಳಸಿರುವ ಪದಗಳು ನಿಜಕ್ಕೂ ಆಕ್ಷೇಪಾರ್ಹ. ನಾನು ಈ ಹೇಳಿಕೆಯನ್ನು ಖಂಡಿಸುತ್ತೇನೆ,ಬಿಜೆಪಿ ನೈತಿಕ ಅಂಧಪತನ ಕಂಡಿದೆ,ಅವರು ನಿರಾಶರಾಗಿದ್ದಾರೆ.ಈ ಹೇಳಿಕೆ ಈ ದೇಶದ ಮಹಿಳೆಗೆ ಮಾಡಿರುವ ಅವಮಾನ" ಎಂದು ಯಾದವ್ ಖಂಡಿಸಿದ್ದರು.