ಕತ್ತಿ ಹಿಡಿದ ಶಿವಣ್ಣನ ಮುಂದೆ ಕಲ್ಲು ಹಿಡಿದು ನಿಂತ ಅದಿತಿ : ರಕ್ತಸಿಕ್ತ ಕಥೆಯಲ್ಲಿ ಅರುಣ್‌ ಸಾಗರ್‌ ಪುತ್ರಿ

ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ಇತ್ತೀಚಿಗೆ ಸಿನಿಮಾದ ಟೀಸರ್ ರಿಲೀಸ್ ಆಗಿ ಹೈಪ್ ಕ್ರಿಯೆಟ್‌ ಮಾಡಿತ್ತು. ಚಿತ್ರತಂಡ ಶಿವಣ್ಣ ಅವರನ್ನು ಬಿಟ್ಟರೆ ಬೇರೆ ಯಾವ ಪಾತ್ರ ಪರಿಚಯ ಮಾಡಿಸಿರಲಿಲ್ಲ. ಸದ್ಯ ಬಿಡುಗಡೆಯಾಗಿರುವ ಪೋಸ್ಟರ್‌ ಸಿನಿಮಾದ ಮೇಲೆ ಮತ್ತಷ್ಟು ಕುತೂಹಲ ಹಚ್ಚಿಸಿದೆ.

Written by - Krishna N K | Last Updated : Nov 19, 2022, 10:03 AM IST
  • ಕತ್ತಿ ಹಿಡಿದ ಶಿವಣ್ಣನ ಮುಂದೆ ಕಲ್ಲು ಹಿಡಿದು ನಿಂತ ಅದಿತಿ
  • ನಿರ್ದೇಶಕ ಹರ್ಷ ರಕ್ತಸಿಕ್ತ ಕಥೆಯಲ್ಲಿ ಅರುಣ್‌ ಸಾಗರ್‌ ಪುತ್ರಿ
  • ಹೈಪ್ ಕ್ರಿಯೆಟ್‌ ಮಾಡುತ್ತಿದೆ ಚಿತ್ರದ ಹೊಸ ಫೋಸ್ಟರ್‌
ಕತ್ತಿ ಹಿಡಿದ ಶಿವಣ್ಣನ ಮುಂದೆ ಕಲ್ಲು ಹಿಡಿದು ನಿಂತ ಅದಿತಿ : ರಕ್ತಸಿಕ್ತ ಕಥೆಯಲ್ಲಿ ಅರುಣ್‌ ಸಾಗರ್‌ ಪುತ್ರಿ title=

ಬೆಂಗಳೂರು : ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ಇತ್ತೀಚಿಗೆ ಸಿನಿಮಾದ ಟೀಸರ್ ರಿಲೀಸ್ ಆಗಿ ಹೈಪ್ ಕ್ರಿಯೆಟ್‌ ಮಾಡಿತ್ತು. ಚಿತ್ರತಂಡ ಶಿವಣ್ಣ ಅವರನ್ನು ಬಿಟ್ಟರೆ ಬೇರೆ ಯಾವ ಪಾತ್ರ ಪರಿಚಯ ಮಾಡಿಸಿರಲಿಲ್ಲ. ಸದ್ಯ ಬಿಡುಗಡೆಯಾಗಿರುವ ಪೋಸ್ಟರ್‌ ಸಿನಿಮಾದ ಮೇಲೆ ಮತ್ತಷ್ಟು ಕುತೂಹಲ ಹಚ್ಚಿಸಿದೆ.

ಹೌದು..  ಸೆಂಚುರಿ ಸ್ಟಾರ್ ಶಿವಣ್ಣ ಅಭಿನಯದ ವೇದ ಸಿನಿಮಾ ಪ್ಯಾನ್‌ ಇಂಡಿಯಾ ಲೆವಲ್‌ನಲ್ಲಿ ಬಾಕ್ಸ್‌ ಆಫೀಸ್‌ ಗಡಗಡ ನಡುಗಿಸಲು ಎಲ್ಲಾ ರೀತಿಯಿಂದ ಸಿದ್ಧವಾಗುತ್ತಿದೆ. ವೇದ 100 ಡೇಸ್ ಪಕ್ಕಾ ಒಡುತ್ತೆ ಎನಿಸುತ್ತಿದೆ. ಏಕೆಂದ್ರೆ ಅದ್ಭುತ ಟೀಸರ್‌ ಸಿನಿಮಾದ ಮೇಲೆ ಕ್ಯೂರಿಯಾಸಿಟಿ ಹುಟ್ಟುವಂತೆ ಮಾಡಿದೆ. ಇನ್ನು ಟೀಸರ್‌ನಲ್ಲಿ ಬರೀ ಶಿವಣ್ಣ ಅವರನ್ನು ತೋರಿಸಲಾಗಿತ್ತು. ಸದ್ಯ ವೇದ ಚಿತ್ರತಂಡ ಹೊಸ ಪೋಸ್ಟರ್‌ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಅಧಿತಿ ಸಾಗರ್‌ ಶಿವಣ್ಣನ ಮುಂದೆ ಕಲ್ಲ ಹಿಡಿದು ನಿಂತಿದ್ದಾರೆ.

ಇದನ್ನೂ ಓದಿ: ಮರೆಯಲಾಗದ ನೆನಪು ಅಪ್ಪು : ಯವರತ್ನನನ್ನು ಅಜ್ಜಿಯೊಬ್ಬರು ಮುದ್ದಾಡಿದ್ದ ವಿಡಿಯೋ ವೈರಲ್‌..!

ಅದಿತಿ ನಟ ಅರುಣ್ ಸಾಗರ್ ಪುತ್ರಿ. ವೇದ ಸಿನಿಮಾದಲ್ಲಿ ಶಿವಣ್ಣನ ಜೊತೆ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಅಧಿತಿ ಕನಕ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಈ ಫಸ್ಟ್ ಲುಕ್ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್ ಆಗುತ್ತಿದೆ. ಅದಿತಿ ರಾಂಬೋ 2 ನಲ್ಲಿ ʼದಮ್ ಮಾರೋ ದಮ್ʼ ಹಾಡಿನ ಮೂಲಕ ಕನ್ನಡಿಗರ ಮನಗೆದ್ದಿದ್ದರು. ಗಾಯಕಿಯಾಗಿ ಕರುನಾಡಿಗೆ ಪರಿಚಿತರಾದವರು ಸದ್ಯ ನಟನೆ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಇನ್ನು ಚಾಪ್ಟರ್​ 2’ ಸಿನಿಮಾದ ಎಲ್ಲ ಹಾಡುಗಳು ಧೂಳೆಬ್ಬಿಸಿದ್ದವರು. ಈ ಸಾಲಿಗೆ ʼದಿ ಮಾನ್​ಸ್ಟರ್​ ಸಾಂಗ್​..ʼ ಕೂಡ ಸೇರ್ಪಡೆ ಆಗುತ್ತದೆ. ಪ್ರಮೋಷನಲ್​ ಹಾಡು ಅಭಿಮಾನಿಗಳ ಪಾಲಿಗೆ ಒಂದು ರೀತಿಯ ಸರ್ಪ್ರೈಸ್​ ಆಗಿತ್ತು. ಚಿತ್ರದ ಎಂಡ್​ ಕ್ರೆಡಿಟ್ಸ್​ ವೇಳೆ ಬರುವ ಈ ಹಾಡನ್ನು ಅದಿತಿ ಸಾಗರ್​ ಅವರು ಸಾಹಿತ್ಯ ಬರೆದು, ಧ್ವನಿ ನೀಡಿದ್ದರು. ಅಲ್ಲದೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಒಂದೇ ದಿನದಲ್ಲಿ 4.7 ಮಿಲಿಯನ್​, ಅಂದರೆ 46 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News