ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮೂರು ಆಯಾಮಗಳಲ್ಲಿ ಚುರುಕುಗೊಂಡ ಎಸ್ಐಟಿ ತನಿಖೆ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ರಾತ್ರಿ ಹಗಲ್ಲೆನ್ನದೆ ತನಿಖೆ ಚುರುಕುಗೊಳಿಸಿರುವ ಎಸ್ಐಟಿ.

Last Updated : Sep 7, 2017, 12:24 PM IST
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮೂರು ಆಯಾಮಗಳಲ್ಲಿ ಚುರುಕುಗೊಂಡ   ಎಸ್ಐಟಿ ತನಿಖೆ title=

ಬೆಂಗಳೂರು: ಮಂಗಳವಾರ ರಾತ್ರಿ ಹತ್ಯೆಗೊಂಡ ಗೌರಿ ಲಂಕೇಶ್ ಅವರ ಪ್ರಕರಣವನ್ನು ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ತನಿಖಾ ತಂಡವು ಹಗಲು ರಾತ್ರಿ ಎನ್ನದೆ ಶೋಧ ಕಾರ್ಯ ಕೈಗೊಂಡಿದೆ. 

ಕೆಲವು ಸಂಶಯಗಳ ಆಧಾರದ ಮೇರೆಗೆ ಮೂರು ಆಯಾಮಗಳಲ್ಲಿ ಎಸ್ಐಟಿ ತನಿಖೆ ಕೈಗೊಂಡಿದೆ.

1. ನಕ್ಸಲ್ ಪ್ರತೀಕಾರ, 2. ಸೈದಾಂತಿಕ ಹಿನ್ನೆಲೆ, 3. ವೈಯುಕ್ತಿಕ ಕಾರಣಗಳ ಆಧಾರದಮೇಲೆ ತನಿಖೆ ನಡೆಸುತ್ತಿರುವ ತನಿಖಾ ತಂಡ

ನಕ್ಸಲ್ ಪ್ರತೀಕಾರ : ಕ್ಷೀಣಿಸಿರುವ ನಕ್ಸಲ್ ಸಂಘಟನೆಯ ಬಲವನ್ನು ಮತ್ತಷ್ಟು ಕಡಿಮೆ ಮಾಡಲು ಗೌರಿ ಲಂಕೇಶ್ ಮಾಡುತ್ತಿದ್ದ ಪ್ರಯತ್ನದಿಂದ ಈ ಹತ್ಯೆ ಸಂಭವಿಸಿರುವುದೆಂಬ ಸಂಶಯದ ತನಿಖಾ ತಂಡದಲ್ಲಿ ಮೂಡಿದೆ.

ನಕ್ಸಲಿಸಂನ ವಾಸ್ತವಿಕತೆಯನ್ನು ಅರಿತಿದ್ದ ಗೌರಿ, ನಕ್ಸಲರನ್ನು ಮುಖ್ಯ ವಾಹಿನಿಗೆ ಕರೆತರುವ ಪ್ರಯತ್ನ ಮಾಡುತ್ತಿದ್ದರು. ಮಲೆನಾಡು ಭಾಗದಲ್ಲಿ ಸರ್ಕಾರದ ಮಧ್ಯವರ್ತಿಯಂತೆ ನಕ್ಸಲರನ್ನು ಪರಿವರ್ತಿಸುವ ಪ್ರಯತ್ನವನ್ನು ಗೌರಿ ಲಂಕೇಶ್ ಮಾಡುತ್ತಿದ್ದರು.

ಸೈದಾಂತಿಕ ಹಿನ್ನೆಲೆ : ಓರ್ವ ಜವಾಬ್ದಾರಿಯುತ ಪರ್ತಕರ್ತೆ, ಚಿಂತಕಿ, ಹೋರಾಟಗಾರ್ತಿಯಾಗಿ ಗೌರಿ ಲಂಕೇಶ್ ಅವರ ನಿಲುವು ವ್ಯವಸ್ಥೆಯ ಹುಳುಕುಗಳನ್ನು ನಿಷ್ಠುರವಾಗಿ ಟೀಕಿಸುತ್ತಿದ್ದ ಅವರ ಗುಣ ಅವರ ಹತ್ಯೆಗೆ ಕಾರಣವಾಗಿರಬಹುದು.

ಕೆಲ ಸಂಘಟನೆಗಳ ಕಾರ್ಯವೈಕರಿ, ನಿಲುವು, ಸೈದಾಂತಿಕ ನೆಲೆಘಟ್ಟನ್ನು ಕಟುವಾಗಿ ಟೀಕಿಸುತ್ತಿದ್ದ ಅವರ ಹರಿತವಾದ ಲೇಖನ ಈ ಘಟನೆಗೆ ಕಾರಣ ಎಂಬುದು ವಿಶೇಷ ತನಿಖಾ ತಂಡದ ಅನುಮಾನವಾಗಿದೆ.

ವೈಯುಕ್ತಿಕ ಕಾರಣ :  ಬರಹ, ಲೇಖನಿಗಳ ಮೂಲಕ ಕೆಲವು ವ್ಯಕ್ತಿಗಳ ಬಗ್ಗೆ ಬರೆಯುತ್ತಿದ್ದ ಗೌರಿ ಅವರಿಗೆ ಅಂತಹ ವ್ಯಕ್ತಿಗಳಿಂದ ಬೆದರಿಕೆ ಬಂದಿದೆಯಾ ಎಂಬುದು ಅಧಿಕಾರಿಗಳ ಮತ್ತೊಂದು ಆಯಾಮವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿರೋ ಸುದ್ದಿಗಳ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಗೌರಿ ಲಂಕೇಶ್ ಅವರ ಕುಟುಂಬ, ಸ್ನೇಹಿತರು, ಒಡನಾಡಿಗಳ ವಿಚಾರಣೆ ನದೆಸುತ್ತಿದ್ದಾರೆ. 

ಗೌರಿ ಲಂಕೇಶ್ ಅವರ ವ್ಯವಹಾರ, ಹಣಕಾಸು ಮತ್ತು ಆಸ್ತಿಯ ಸಂಬಂಧ ಇರೋ ಸಮಸ್ಯೆಗಳ ಬಗ್ಗೆಯೂ ಸಹ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. 

Trending News