ದಿನಭವಿಷ್ಯ 14-11-2022 : ಇಂದು ಕಾರ್ತಿಕ ಸೋಮವಾರದಂದು ಈಶ್ವರನ ಆರಾಧನೆ ಬಹಳ ವಿಶೇಷವಾಗಿದ್ದು ಈ ದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
ಮೇಷ ರಾಶಿ: ಮೇಷ ರಾಶಿಯವರಿಗೆ ಸಮಯ ತುಂಬಾ ಚೆನ್ನಾಗಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಇದು ಒಳ್ಳೆಯ ಸಮಯವಾಗಿದ್ದು, ಎಲ್ಲಾ ರೀತಿಯಲ್ಲಿಯೂ ಅನುಕೂಲವಾಗಲಿದೆ.
ವೃಷಭ ರಾಶಿ: ಈ ರಾಶಿಯವರಿಗೆ ಇಷ್ಟು ದಿನ ಸ್ಥಗಿತಗೊಂಡಿದ್ದ ಕೆಲಸಗಳು ಮತ್ತೆ ಆರಂಭವಾಗಲಿವೆ. ಆದರೆ, ಕೋರ್ಟು-ಕಚೇರಿಗೆ ಸಂಬಂಧಿಸಿದ ಯಾವುದೇ ಕೆಲಸಗಳಿದ್ದರೂ ಅದರ ಬಗ್ಗೆ ಜಾಗೃತಿವಹಿಸಿ.
ಮಿಥುನ ರಾಶಿ: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಪ್ರಯಾಣ ಸಾಧ್ಯತೆ ಇದೆ. ಕೆಲಸದಲ್ಲಿ ಒತ್ತಡ ಹೆಚ್ಚಲಿದ್ದು, ಈ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ.
ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಹಾಗಾಗಿ, ಅವಿವಾಹಿತರು ಈ ಸಮಯದಲ್ಲಿ ನಿಮ್ಮ ಮದುವೆಯ ಬಗ್ಗೆ ಮಾತುಕತೆ ಮುಂದುವರೆಸಬಹುದು.
ಇದನ್ನೂ ಓದಿ- Budhaditya Yog: ಸೂರ್ಯ-ಬುಧ ಯುತಿ, ನವೆಂಬರ್ 16ರಿಂದ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಈ ದಿನ ಖುಷಿಯ ದಿನ. ಗ್ರಹಾಚಾರಗಳು ಬದಲಾದಂತೆ ಜೀವನವೂ ಬದಲಾಗುತ್ತದೆ. ಇಂದು ನಿಮಗೆ ಸಹೋದರ ವರ್ಗದವರಿಂದ ಸಹಾಯ ದೊರೆಯಲಿದೆ. ಈ ಸಮಯದಲ್ಲಿ ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಿ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕಿವಿ ನೋವು, ಕಾಲು ನೋವು ಅಥವಾ ತಲೆ ನೋವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಬಗ್ಗೆ ಹುಷಾರಾಗಿರಿ.
ತುಲಾ ರಾಶಿ: ತುಲಾ ರಾಶಿಯವರಿಗೆ ಸುಖ-ಸಂತೋಷ, ನೆಮ್ಮದಿಯನ್ನು ಕಾಣುವಂತಹ ದಿನ. ಗ್ರಹಗತಿಗಳು ನಿಮಗೆ ಅನುಕೂಲಕರವಾಗಿವೆ. ಆದರೆ, ಮಾನಸಿಕವಾಗಿ ಶಾಂತವಾಗಿರಲು ಪ್ರಯತ್ನಿಸಿ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಅವಕಾಶಗಳು ಹುಡುಕಿ ಬರಲಿದ್ದು, ಈ ಸಮಯದಲ್ಲಿ ನೀವು ಜ್ಯೋತಿಷಿಗಳ ಮಾರ್ಗದರ್ಶನದಲ್ಲಿ ಸೂಕ್ತ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ನಿಮ್ಮ ಕುಟುಂಬ ವರ್ಗದವರಿಂದಲೂ ಲಾಭವಿದೆ.
ಇದನ್ನೂ ಓದಿ- Shani Gochar 2023: ಹೊಸ ವರ್ಷದಲ್ಲಿ ಶನಿ ಕಾಟದಿಂದ ಮುಕ್ತಿ ಪಡೆಯಲಿದ್ದಾರೆ ಈ ರಾಶಿಯವರು
ಧನು ರಾಶಿ: ಈ ರಾಶಿಯವರಿಗೆ ವಿದೇಶ ಪ್ರಯಾಣ ಸಾಧ್ಯತೆ ಇದೆ. ದೂರ ದೇಶದ ಸ್ನೇಹಿತರು, ಸಂಬಂಧಿಕರು ನಿಮ್ಮನ್ನು ಭೇಟಿಯಾಗಬಹುದು. ಸಂಬಂಧಿಕರನ್ನು ಗೌರವಿಸಿ.
ಮಕರ ರಾಶಿ: ಮಕರ ರಾಶಿಯವರಿಗೆ ಈ ದಿನ ಲಾಭದ ಜೊತೆ=ಜೊತೆಗೆ ಸ್ವಲ್ಪ ಸವಾಲುಗಳನ್ನು ಸಹ ಎದುರಿಸಬೇಕಾದಂತಹ ದಿನ. ಸುಬ್ರಹ್ಮಣ್ಯನ ಆರಾಧನೆಯಿಂದ ನಿಮ್ಮ ಕೆಲಸ-ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯಬಹುದು.
ಕುಂಭ ರಾಶಿ: ಈ ದಿನ ನೀವು ಹಣದ ವಿಷಯದಲ್ಲಿ ಹುಷಾರಾಗಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳು ದೊರೆಯಲಿದೆ. ಸಮಯ ಮತ್ತು ಕೆಲಸದ ಒತ್ತಡಗಳು ಹೆಚ್ಚಾಗಿರಲಿದೆ. ಆದರೆ, ಸಮಯ ನಿರ್ವಹಣೆ ಬಗ್ಗೆ ಹೆಚ್ಚು ಗಮನ ಕೊಡಿ.
ಮೀನ ರಾಶಿ: ನಿಮ್ಮ ಕೆಟ್ಟ ಸಮಯ ಕಳೆದು ಅನುಕೂಲಕರ ಸಮಯ ಆರಂಭವಾಗುತ್ತಿದೆ. ಈ ಸಮಯದಲ್ಲಿ ನಿಮ್ಮ ಆಸೆ-ಆಕಾಂಕ್ಷೆಗಳು ಈಡೇರಲಿವೆ. ಈ ದಿನ ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಅಚ್ಚರಿವೊಂದು ನಡೆಯುವ ಸಾಧ್ಯತೆಯಿದೆ.
- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.