ಶುಗರ್ ಇರುವವರು ಈ ಆಹಾರವನ್ನು ತಪ್ಪಿಯೂ ತಿನ್ನಬಾರದು

ಒಣದ್ರಾಕ್ಷಿಯಲ್ಲಿ ಗ್ಲೂಕೋಸ್ ಗಮನಾರ್ಹ ಪ್ರಮಾಣದಲ್ಲಿ ಕಂಡುಬರುತ್ತವೆ. ಈ ಕಾರಣದಿಂದಾಗಿ, ದೇಹದಲ್ಲಿನ ಗ್ಲೂಕೋಸ್ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹಾಗಿರುವಾಗ ಮಧುಮೇಹ ರೋಗಿಗಳು ಒಣದ್ರಾಕ್ಷಿಗಳನ್ನು ಸೇವಿ

Written by - Ranjitha R K | Last Updated : Nov 30, 2021, 02:35 PM IST
  • ಮಧುಮೇಹ ರೋಗಿಗಳಿಗೆ ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ಅಗತ್ಯ
  • ಇದರಿಂದಾಗಿ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
  • ಖರ್ಜೂರದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಿರುತ್ತದೆ.
ಶುಗರ್ ಇರುವವರು ಈ ಆಹಾರವನ್ನು ತಪ್ಪಿಯೂ ತಿನ್ನಬಾರದು  title=
ಖರ್ಜೂರದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಿರುತ್ತದೆ. (file photo)

ನವದೆಹಲಿ : ಭಾರತದಲ್ಲಿ ಮಧುಮೇಹ ರೋಗಿಗಳ (Diabetes) ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅವಶ್ಯಕ. ಮಧುಮೇಹ ರೋಗಿಗಳು ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದಾಗಿ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು (Blood sugar) ನಿಯಂತ್ರಣದಲ್ಲಿರುತ್ತದೆ. ಚಳಿಗಾಲದಲ್ಲಿ, ಸಕ್ಕರೆ ರೋಗಿಗಳು ತಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಚಳಿಗಾಲದಲ್ಲಿ, ಜನರು ಹೆಚ್ಚು ಒಣ ಹಣ್ಣುಗಳನ್ನು ಸೇವಿಸುತ್ತಾರೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಕೆಲವು ಒಣ ಹಣ್ಣುಗಳಿವೆ.

ಖರ್ಜೂರ : 
ಖರ್ಜೂರದಲ್ಲಿ (Dates) ಸಕ್ಕರೆಯ ಪ್ರಮಾಣ ಹೆಚ್ಚಾಗಿರುತ್ತದೆ. ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗುವ ಅಪಾಯವಿದೆ. ಮಧುಮೇಹ ರೋಗಿಗಳು (Side effects of dates) ಖರ್ಜೂರವನ್ನು ಸೇವಿಸುವುದನ್ನು ತಪ್ಪಿಸಬೇಕು. 

ಇದನ್ನೂ ಓದಿ : Cauliflower: ಹೂಕೋಸು ಈ ಜನರಿಗೆ ವಿಷವಿದ್ದಂತೆ, ಸೇವಿಸಿದರೆ ವ್ಯತಿರಿಕ್ತ ಪರಿಣಾಮ ಗ್ಯಾರೆಂಟಿ..!

ಒಣ ದ್ರಾಕ್ಷಿ : ಒಣದ್ರಾಕ್ಷಿಯಲ್ಲಿ ಗ್ಲೂಕೋಸ್ ಗಮನಾರ್ಹ ಪ್ರಮಾಣದಲ್ಲಿ ಕಂಡುಬರುತ್ತವೆ. ಈ ಕಾರಣದಿಂದಾಗಿ, ದೇಹದಲ್ಲಿನ ಗ್ಲೂಕೋಸ್ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹಾಗಿರುವಾಗ ಮಧುಮೇಹ ರೋಗಿಗಳು (Diabetec patient) ಒಣದ್ರಾಕ್ಷಿಗಳನ್ನು ಸೇವಿಸಬಾರದು. 

ಚಿಕೂ : ಮಧುಮೇಹ ಇರುವವರು ಹಣ್ಣುಗಳಲ್ಲಿ ಚಿಕೂ ಹಣ್ಣನ್ನು ತಿನ್ನುವುದನ್ನು ತಪ್ಪಿಸಬೇಕು . ಚಿಕೂ ತಿನ್ನಲು ತುಂಬಾ ಸಿಹಿಯಾಗಿರುತ್ತದೆ ಮತ್ತು ಅದರ ಗ್ಲೈಸೆಮಿಕ್ ಇಂಡೆಕ್ಸ್ ಕೂಡ ತುಂಬಾ ಹೆಚ್ಚಾಗಿರುತ್ತದೆ. ಆದ್ದರಿಂದ, ಸಕ್ಕರೆ ರೋಗಿಗಳು ಚಿಕೂ ತಿನ್ನಬಾರದು.

ಬಿಳಿ ಬ್ರೆಡ್ : ಮಧುಮೇಹ ರೋಗಿಗಳು ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ವೈಟ್ ಬ್ರೆಡ್ (Side effects of white bread) ಅನ್ನು ತಪ್ಪಿಯೂ ತಿನ್ನಬಾರದು. ಪಿಷ್ಟ ಹೆಚ್ಚಿರುವ ಆಹಾರವನ್ನು ಸೇವಿಸಬಾರದು.

ಇದನ್ನೂ ಓದಿ : Weight Loss : ನಿಮ್ಮ ದೇಹದ ಬೊಜ್ಜು ಕರಗಿಸಬೇಕಾ? ಹಾಗಿದ್ರೆ, ಪ್ರತಿ ದಿನ ರಾತ್ರಿ ಈ ಜ್ಯೂಸ್ ಸೇವಿಸಿ

ಆಲೂಗೆಡ್ಡೆ: ಮಧುಮೇಹ ರೋಗಿಗಳು ಕೂಡ ಆಲೂಗಡ್ಡೆಯನ್ನು (Potato) ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಹೆಚ್ಚು ಆಲೂಗಡ್ಡೆ ತಿನ್ನುವುದು ಸಕ್ಕರೆ ರೋಗಿಗಳಿಗೆ ಹಾನಿಕಾರಕವಾಗಿದೆ. ಆಲೂಗೆಡ್ಡೆಯಲ್ಲಿ ಕಾರ್ಬೋಹೈಡ್ರೇಟ್ ಹಾಗೂ ಗ್ಲೈಸೆಮಿಕ್ ಇಂಡೆಕ್ಸ್ ಅಧಿಕವಾಗಿದೆ. ಆಲೂಗಡ್ಡೆ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ (Sugar level) ಹೆಚ್ಚಾಗುವ ಅಪಾಯವಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News