Surya Grahan 2023: ಸೂರ್ಯಗ್ರಹಣದ ದಿನಾಂಕ, ಸಮಯ & ಪರಿಣಾಮಗಳ ಬಗ್ಗೆ ತಿಳಿಯಿರಿ

ಸೂರ್ಯಗ್ರಹಣದ ಪರಿಣಾಮಗಳು: ವರ್ಷದ ಮೊದಲ ಸೂರ್ಯಗ್ರಹಣವು 3 ರಾಶಿಗಳ ಜನರಿಗೆ ಸುವರ್ಣ ದಿನಗಳನ್ನು ತರುತ್ತಿದೆ. ಸೂರ್ಯಗ್ರಹಣದ ದಿನದಂದು ರೂಪುಗೊಳ್ಳುತ್ತಿರುವ ಶುಭ ಯೋಗವು ಈ ಜನರ ಅದೃಷ್ಟವನ್ನು ಚಿನ್ನದಂತೆ ಹೊಳೆಯುವಂತೆ ಮಾಡುತ್ತದೆ. 

Written by - Puttaraj K Alur | Last Updated : Apr 17, 2023, 05:02 PM IST
  • ಸೂರ್ಯಗ್ರಹಣ & ಮಂಗಳಕರ ಯೋಗವು ಕರ್ಕಾಟಕ ರಾಶಿಯವರಿಗೆ ಬಹಳಷ್ಟು ಪ್ರಯೋಜನ ನೀಡುತ್ತದೆ
  • ಸೂರ್ಯಗ್ರಹಣದಿಂದ ಮಿಥುನ ರಾಶಿಯವರಿಗೆ ಶುಭವಾಗಲಿದ್ದು, ಧನಲಾಭವಾಗಲಿದೆ
  • ಸೂರ್ಯಗ್ರಹಣವು ಧನು ರಾಶಿಯವರಿಗೆ ಭರ್ಜರಿ ಲಾಭ ನೀಡಲಿದ್ದು, ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗಲಿದೆ
Surya Grahan 2023: ಸೂರ್ಯಗ್ರಹಣದ ದಿನಾಂಕ, ಸಮಯ & ಪರಿಣಾಮಗಳ ಬಗ್ಗೆ ತಿಳಿಯಿರಿ title=
ಸೂರ್ಯಗ್ರಹಣದ ಪರಿಣಾಮಗಳು

ನವದೆಹಲಿ: ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 20ರ ಗುರುವಾರ ಸಂಭವಿಸಲಿದೆ. ಹಿಂದೂ ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಸೂರ್ಯಗ್ರಹಣವನ್ನು ಮಂಗಳಕರವೆಂದು ಪರಿಗಣಿಸದಿದ್ದರೂ, ಈ ದಿನದಂದು 5 ಮಂಗಳಕರ ಯೋಗಗಳು ರೂಪುಗೊಳ್ಳುತ್ತವೆ. ಈ ಸೂರ್ಯಗ್ರಹಣವು ಕೆಲವು ರಾಶಿಗಳಿಗೆ ತುಂಬಾ ಪ್ರಯೋಜನಕಾರಿ. ಸೂರ್ಯಗ್ರಹಣದ ದಿನ ಸರ್ವಾರ್ಥ ಸಿದ್ಧಿ ಮತ್ತು ಪ್ರೀತಿಯಂತಹ ಮಂಗಳಕರ ಯೋಗವು ರೂಪುಗೊಳ್ಳುತ್ತದೆ.

ಇದಲ್ಲದೆ ಸೂರ್ಯನು ಈ ದಿನ ಮೇಷ ರಾಶಿಯಲ್ಲಿ ಬುಧ ಮತ್ತು ರಾಹು ಜೊತೆ ಮೈತ್ರಿ ಮಾಡಿಕೊಳ್ಳುತ್ತಾನೆ. ಈ ವಿಶೇಷ ಗ್ರಹಗಳ ಸ್ಥಾನಗಳು ಎಲ್ಲಾ ರಾಶಿಗಳ ಜನರ ಮೇಲೆ ಪರಿಣಾಮ ಬೀರುತ್ತವೆ, ಆದರೆ 3 ರಾಶಿಯ ಜನರಿಗೆ ಇದು ತುಂಬಾ ಮಂಗಳಕರವಾಗಿರುತ್ತದೆ. ಯಾವ ರಾಶಿಯವರಿಗೆ ಸೂರ್ಯಗ್ರಹಣವು ಶುಭ ಮತ್ತು ಫಲಪ್ರದವಾಗಿದೆ ಎಂಬುದನ್ನು ತಿಳಿಯಿರಿ. 

ಕರ್ಕಾಟಕ ರಾಶಿ: ಈ ದಿನ ಸೂರ್ಯಗ್ರಹಣ ಮತ್ತು ಮಂಗಳಕರ ಯೋಗವು ಕರ್ಕಾಟಕ ರಾಶಿಯವರಿಗೆ ಬಹಳಷ್ಟು ಪ್ರಯೋಜನ ನೀಡುತ್ತದೆ. ಈ ಜನರ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವೃತ್ತಿಯಲ್ಲಿ ಉನ್ನತಿ ಕಂಡುಬರಲಿದೆ. ಉದ್ಯೋಗ ಬದಲಾವಣೆಗೆ ಅವಕಾಶ ಸಿಗಲಿದೆ. ವ್ಯಾಪಾರವೂ ಚೆನ್ನಾಗಿ ನಡೆಯಲಿದೆ. ವಿತ್ತೀಯ ಪ್ರಯೋಜನಗಳನ್ನು ಪಡೆಯುವ ಬಲವಾದ ಅವಕಾಶಗಳಿವೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ನೀವು ಪ್ರವಾಸಕ್ಕೆ ಹೋಗಬಹುದು.

ಇದನ್ನೂ ಓದಿ: Money remedies: ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಹಾಗಿದ್ರೆ ಈಗಲೇ ಈ ಕೆಲಸ ಮಾಡಿ

ಮಿಥುನ ರಾಶಿ: ಸೂರ್ಯಗ್ರಹಣದಿಂದ ಮಿಥುನ ರಾಶಿಯವರಿಗೆ ಶುಭವಾಗಲಿದೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಇದು ನಿಮ್ಮ ಆತ್ಮವಿಶ್ವಾಸವನ್ನು ಬಲಪಡಿಸುತ್ತದೆ. ಸೃಜನಶೀಲತೆ ಉತ್ತುಂಗದಲ್ಲಿರುತ್ತದೆ. ನೀವು ಕೆಲವು ದೊಡ್ಡ ಸಾಧನೆಗಳನ್ನು ಸಾಧಿಸಬಹುದು. ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮ ಕ್ರಿಯಾಶೀಲತೆ ಹೆಚ್ಚಲಿದೆ. ನೀವು ಸ್ಥಾನ ಮತ್ತು ಪ್ರತಿಷ್ಠೆಯನ್ನು ಪಡೆಯುತ್ತೀರಿ. ಹಣದ ಪ್ರಯೋಜನ ದೊರೆಯಲಿದೆ.

ಧನು ರಾಶಿ: ಸೂರ್ಯಗ್ರಹಣವು ಧನು ರಾಶಿಯವರಿಗೆ ಭರ್ಜರಿ ಲಾಭ ನೀಡುತ್ತದೆ. ನಿಮ್ಮ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಹೊಸ ಮನೆ ಅಥವಾ ಕಾರು ಖರೀದಿಸಬಹುದು. ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ಸಂಬಳ ಹೆಚ್ಚಾಗಬಹುದು. ವ್ಯಾಪಾರಿಗಳ ಹೊಸ ಒಪ್ಪಂದಗಳು ಸಿಗಬಹುದು. ನೀವು ಸಾಕಷ್ಟು ಹಣ ಉಳಿಸಲು ಸಹ ಸಾಧ್ಯವಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ.

ಇದನ್ನೂ ಓದಿ: ವೈಶಾಖ ಅಮಾವಾಸ್ಯೆ 2023: ಈ ಕೆಲಸ ಮಾಡಿದ್ರೆ 3 ದೊಡ್ಡ 'ಮಹಾದೋಷ'ಗಳಿಂದ ಮುಕ್ತಿ ಸಿಗುತ್ತದೆ!

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News