ಮಂಗಳನ ರಾಶಿ ಪರಿವರ್ತನೆಯಿಂದ ಈ ನಾಲ್ಕು ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

ಜೂನ್ 2 ಅಂದರೆ ನಾಳೆ ಮಂಗಳ ಮಿಥುನ ರಾಶಿಯಿಂದ ಕರ್ಕ ರಾಶಿ ಪ್ರವೇಶಿಸಲಿದ್ದಾನೆ. ಜೂನ್ 2ರಿಂದ ಜುಲೈ 20ರವರೆಗೆ ಮಂಗಳ ಈ ರಾಶಿಯಲ್ಲೇ ಇರಲಿದ್ದಾನೆ

Written by - Ranjitha R K | Last Updated : Jun 1, 2021, 03:32 PM IST
  • ನಾಳೆ ಅಂದರೆ ಜೂನ್ 2ರಂದು ಮಂಗಳ ರಾಶಿ ಪರಿವರ್ತನೆ
  • ಮಿಥುನ ರಾಶಿಯಿಂದ ಕರ್ಕ ರಾಶಿ ಪ್ರವೇಶಿಸಲಿರುವ ಮಂಗಳ
  • ಯಾವ ರಾಶಿಗೆ ಅದೃಷ್ಟ ತಿಳಿಯಿರಿ
ಮಂಗಳನ ರಾಶಿ ಪರಿವರ್ತನೆಯಿಂದ ಈ ನಾಲ್ಕು ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ title=
ಜೂನ್ 2ರಂದು ಮಂಗಳ ರಾಶಿ ಪರಿವರ್ತನೆ (file photo)

ನವದೆಹಲಿ : ಜೂನ್ ತಿಂಗಳಲ್ಲಿ ಮಂಗಳನ ರಾಶಿ ಪರಿವರ್ತನೆಯಾಗಲಿದೆ. ಜೂನ್ 2 ಅಂದರೆ ನಾಳೆ ಮಂಗಳ ಮಿಥುನ ರಾಶಿಯಿಂದ ಕರ್ಕ ರಾಶಿ ಪ್ರವೇಶಿಸಲಿದ್ದಾನೆ. ಜೂನ್ 2ರಿಂದ ಜುಲೈ 20ರವರೆಗೆ ಮಂಗಳ ಈ ರಾಶಿಯಲ್ಲೇ ಇರಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಶಿ ಪರಿಚಲನೆ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ. 

ಮೇಷ : ಮಂಗಳನ ರಾಶಿ ಪರಿವರ್ತನೆ (Mars trasit) ಮೇಷ ರಾಶಿಯವರಿಗೆ ಶುಭ ಫಲ ನೀಡಲಿದೆ. ಚರಾಚರ ಸಂಪತ್ತು ಹೆಚ್ಚಾಗಲಿದೆ. ಪರಿವಾರದ ನೆರವು ಸಿಗಲಿದೆ.  ವಿವಾದಗಳಲ್ಲಿ ಸಿಲುಕಲು ಹೋಗಬೇಡಿ

ಇದನ್ನೂ ಓದಿ Budh Vakri 2021: ಈ ದಿನದ ಮಧ್ಯರಾತ್ರಿಯಿಂದ ಈ ರಾಶಿಯ ಜನರು ಎಚ್ಚರದಿಂದಿರಬೇಕಾಗಲಿದೆ

ವೃಷಭ: 
ಗೆಳೆಯರೊಡನೆ ಮತಬೇಧ ಉಂಟಾಗುತ್ತದೆ.  ವಿವಾದಗಳಿಂದ ದೂರವೇ ಇರಿ.  ಎಲ್ಲವನ್ನೂ ಧೈರ್ಯದಿಂದಲೇ  ಎದುರಿಸಿ. ಕಾರ್ಯ ಸ್ಥಳದಲ್ಲಿ ಹಿರಿಯ  ಅಧಿಕಾರಿಗಳ ನೆರವು ಸಿಗುತ್ತದೆ

ಮಿಥುನ:
ವಾಹನ ಚಲಾಯಿಸುವಾಗ ಎಚ್ಚರವಾಗಿರಿ. ವೈವಾಹಿಕ ಜೀವನ (Married life) ಸುಗಮವಾಗಿರುತ್ತದೆ. ನಾಲಗೆ ಮೇಲೆ ನಿಯಂತ್ರಣ ಇಡಿ.

ಕರ್ಕ:
ತುಂಬಾ ಎಚ್ಚರಿಕೆಯಿಂದ ಡ್ರೈವಿಂಗ್ (Driving) ಮಾಡಬೇಕು. ಮಾತು ಮಧುರವಾಗಿರಬೇಕು.  ಕುಟುಂಬದೊಂದಿಗೆ ಇರಿ.

ಇದನ್ನೂ ಓದಿ : ದೇವರ ಕೋಣೆಯ ವಿಚಾರದಲ್ಲಿ ಈ ತಪ್ಪುಗಳು ಆಗದಿರಲಿ ಎಚ್ಚರ..!

ಸಿಂಹ :
ಶುಭಫಲ.  ಹಣದ ವಿಚಾರದಲ್ಲಿ ವಿಮರ್ಶೆ ಮಾಡಿ ನಿರ್ಧಾರಕ್ಕೆ ಬನ್ನಿ.  ಹಿರಿಯ ಅಧಿಕಾರಿಗಳ ನೆರವು ಸಿಗುತ್ತಿರುತ್ತದೆ

ಕನ್ಯಾ :
ಸಂತಾನ ಪ್ರಾಪ್ತಿಗೆ ಸುಸುಮಯ.  ಆರೋಗ್ಯದ ಮೇಲೆ ನಿಗಾ ಇಡಿ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ

ತುಲಾ :
ಕುಟುಂಬದೊಂದಿಗೆ ಹರ್ಷೊಲ್ಲಾಸ  ಇರುತ್ತದೆ. ಧನಲಾಭದ ಯೋಗ. ನಿಮಗಿದು ಸಾಮಾನ್ಯ ಸಮಯ

ಇದನ್ನೂ ಓದಿ : ದೇವಾನುದೇವತೆಗಳ ಅನುಗ್ರಹಕ್ಕಾಗಿ ಕೇವಲ ಈ ಕೆಲಸ ಮಾಡಿ

ವೃಶ್ಚಿಕ :
ಕಠಿಣ ಪರಿಶ್ರಮ ಅಗತ್ಯವಿದೆ. ಶಾರೀರಿಕ ಮತ್ತು ಮಾನಸಿಕ ಕಷ್ಟ  ಎದುರಿಸಬೇಕಾಗುತ್ತದೆ.

ಧನು :
ಆರೋಗ್ಯ (Health) ಕಡೆ ಗಮನ ಇಡಿ. ಕೌಟುಂಬಿಕ ಜೀವನ ಸಾಮಾನ್ಯವಾಗಿರುತ್ತದೆ. ಅನಗತ್ಯ ಖರ್ಚು ಬೇಡ

ಮಕರ :
ವಿವಾದ ಹುಡುಕಿಕೊಂಡು ಬರುತ್ತದೆ. ಪರಿವಾರದೊಂದಿಗೆ ಸೌಹಾರ್ದತೆಯಿಂದಿರಿ. ಆರ್ಥಿಕ ಸ್ಥಿತಿ ಸಾಮಾನ್ಯ

ಇದನ್ನೂ ಓದಿ : Vastu Tips for Sleep : ಸರಿಯಾಗಿ ರಾತ್ರಿ ನಿದ್ದೆ ಬರ್ತಿಲ್ವಾ? ಹಾಗಿದ್ರೆ ಇಲ್ಲಿದೆ ಅದಕ್ಕೆ ಪರಿಹಾರ!

ಕುಂಭ :
ಯಶಸ್ಸು ನಿಮ್ಮದಾಗುತ್ತದೆ. ಕೋಪದ ಕೈಗೆ ಬುದ್ದಿ ಕೊಡಬೇಡಿ. ಅನಗತ್ಯ ಖರ್ಚು ಬೇಡ. ಆರೋಗ್ಯದ ಬಗ್ಗೆ ಗಮನ ಇರಲಿ

ಮೀನಾ :
ಹಣಕಾಸು ಲಾಭ ಇದೆ. ನೌಕರಿ ಪರಿವರ್ತನೆ ಯೋಗ  ಇದೆ. ಕುಟುಂಬದೊಂದಿಗೆ ಇರಿ. 

ಇದನ್ನೂ ಓದಿ : ಈ ದಿನ ನಡೆಯಲಿದೆ ವರ್ಷದ ಮೊದಲ ಸೂರ್ಯಗ್ರಹಣ : ಇಲ್ಲಿದೆ ಸಂಪೂರ್ಣ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News