Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು & ಬಡ್ತಿ ಸಿಗುತ್ತದೆ

Today Astrology (05-03-2023): ಮಿಥುನ ರಾಶಿಯವರ ಕುಟುಂಬ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಕರ್ಕಾಟಕ ರಾಶಿಯವರ ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಸಿಂಹ ರಾಶಿಯವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಡಿ.

Written by - Puttaraj K Alur | Last Updated : Mar 5, 2023, 05:46 AM IST
  • ಮಿಥುನ ರಾಶಿಯವರ ಕುಟುಂಬ ಸಮಸ್ಯೆಗಳು ಕೊನೆಗೊಳ್ಳುತ್ತವೆ
  • ಕರ್ಕಾಟಕ ರಾಶಿಯವರ ಆರೋಗ್ಯದಲ್ಲಿ ಸುಧಾರಣೆಯಾಗುವ ಸಾಧ್ಯತೆ
  • ಸಿಂಹ ರಾಶಿಯವರ ಕುಟುಂಬದಲ್ಲಿ ಶುಭ ಕಾರ್ಯಕ್ರಮಗಳು ನಡೆಯಲಿವೆ
Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು & ಬಡ್ತಿ ಸಿಗುತ್ತದೆ title=
ಇಂದಿನ ರಾಶಿ ಭವಿಷ್ಯ

Horoscope Today (05-03-2023): ವೃಷಭ ರಾಶಿಯವರಿಗೆ ಉತ್ತಮ ಉದ್ಯೋಗ ಅವಕಾಶಗಳು ದೊರೆಯುತ್ತವೆ. ಮೇಷ ರಾಶಿಯವರ ವ್ಯವಹಾರ ಮೊದಲಿಗಿಂತ ಹೆಚ್ಚು ಲಾಭದಾಯಕವಾಗಿರುತ್ತದೆ. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಈ ರಾಶಿಯವರ ವ್ಯವಹಾರವು ಮೊದಲಿಗಿಂತ ಹೆಚ್ಚು ಲಾಭದಾಯಕವಾಗಿರುತ್ತದೆ. ನಿಮ್ಮ ಹಿರಿಯರನ್ನು ಗೌರವಿಸಿ. ಅಗತ್ಯವಿದ್ದರೆ ಸಹೋದರನ ಸಹಾಯ ತೆಗೆದುಕೊಳ್ಳಿ. ಸೂರ್ಯನಿಗೆ ನೀರನ್ನು ಅರ್ಪಿಸಿ.

ಅದೃಷ್ಟದ ಬಣ್ಣ: ಆಕಾಶ ನೀಲಿ

ವೃಷಭ ರಾಶಿ: ಈ ರಾಶಿಯವರಿಗೆ ಉತ್ತಮ ಉದ್ಯೋಗ ಅವಕಾಶಗಳು ದೊರೆಯುತ್ತವೆ. ನಿಮ್ಮ ಹಿರಿಯರ ಸಲಹೆಯನ್ನು ತೆಗೆದುಕೊಳ್ಳಿ. ಸಂಜೆಯ ತನಕ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ. ಗುಲಾಬಿ ವಸ್ತುಗಳನ್ನು ದಾನ ಮಾಡಿ.

ಅದೃಷ್ಟದ ಬಣ್ಣ: ಕಿತ್ತಳೆ

ಮಿಥುನ ರಾಶಿ: ನಿಮ್ಮ ಕುಟುಂಬ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಹೊಸ ವಾಹನ ಖರೀದಿಸುವ ಸಾಧ್ಯತೆ ಇದೆ. ಪ್ರಮುಖ ಕೆಲಸದಲ್ಲಿ ಯಶಸ್ಸು ಕಾಣುವಿರಿ. ಗಣಪತಿಗೆ ಮೋದಕವನ್ನು ಅರ್ಪಿಸಿ.

ಅದೃಷ್ಟ ಬಣ್ಣ: ನೇರಳೆ

ಕರ್ಕಾಟಕ ರಾಶಿ: ನಿಮ್ಮ ಆರೋಗ್ಯದಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ಅಧ್ಯಯನದಲ್ಲಿ ಯಾವುದೇ ನಿರ್ಲಕ್ಷ್ಯ ಮಾಡಬೇಡಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಅಕ್ಕಿ ಮತ್ತು ಸಕ್ಕರೆ ಮಿಠಾಯಿ ದಾನ ಮಾಡಿ.

ಅದೃಷ್ಟ ಬಣ್ಣ: ಹಳದಿ

ಇದನ್ನೂ ಓದಿ: Rajyog: 30 ವರ್ಷಗಳ ಬಳಿಕ 3 ರಾಶಿಗಳ ಕುಂಡಲಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಈ ಶುಭಯೋಗ, ಆಕಸ್ಮಿಕ ಧನಲಾಭದ ಜೊತೆಗೆ ಬಡ್ತಿ ಭಾಗ್ಯ!

ಸಿಂಹ ರಾಶಿ: ಸಾಲವಾಗಿ ನೀಡಿದ ಹಣವನ್ನು ನೀವು ವಾಪಸ್ ಪಡೆಯುತ್ತೀರಿ.   ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಡಿ. ಕುಟುಂಬದಲ್ಲಿ ಶುಭ ಕಾರ್ಯಕ್ರಮಗಳು ನಡೆಯಲಿವೆ. ಸೂರ್ಯ ಮಂತ್ರವನ್ನು ಪಠಿಸಿ.

ಅದೃಷ್ಟ ಬಣ್ಣ: ಬಿಳಿ

ಕನ್ಯಾ ರಾಶಿ: ಈ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸಿನ ಸಿಗುತ್ತದೆ. ಹೊಸ ಮನೆ ಖರೀದಿ ಸಾಧ್ಯತೆ ಇದೆ. ಮಹಿಳೆಯರಿಗೆ ಸಹಾಯ ಮಾಡಿ. ಗಣೇಶನ ಮಂತ್ರವನ್ನು ಪಠಿಸಿ.

ಅದೃಷ್ಟದ ಬಣ್ಣ: ಕಿತ್ತಳೆ

ತುಲಾ ರಾಶಿ: ಈ ರಾಶಿಯವರ ಮದುವೆ ನಿಶ್ಚಯವಾಗುವ ಸಾಧ್ಯತೆ ಇದೆ. ಯಾವುದೇ ಕೆಲಸದಲ್ಲಿ ನಿರ್ಲಕ್ಷ್ಯ ತೋರಬೇಡಿ. ನಿಮ್ಮ ರಹಸ್ಯವನ್ನು ಯಾರಿಗೂ ಹೇಳಬೇಡಿ. ವಿಷ್ಣುವಿಗೆ ಕುಂಕುಮವನ್ನು ಅರ್ಪಿಸಿ.

ಅದೃಷ್ಟದ ಬಣ್ಣ: ಕ್ಯಾರೆಟ್

ವೃಶ್ಚಿಕ ರಾಶಿ: ಈ ರಾಶಿಯವರ ಆಸ್ತಿ ವಿಚಾರಗಳು ಬಗೆಹರಿಯಲಿವೆ. ಉದ್ಯೋಗದಲ್ಲಿ ಬದಲಾವಣೆ ಕಂಡುಬರಲಿದೆ. ನಿಮ್ಮ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಿ. ಮಧ್ಯಾಹ್ನ ಸಿಹಿ ಪದಾರ್ಥಗಳನ್ನು ದಾನ ಮಾಡಿ.

ಅದೃಷ್ಟದ ಬಣ್ಣ: ಕಿತ್ತಳೆ

ಇದನ್ನೂ ಓದಿ: Chanakya Niti : ನಿಮ್ಮ ಜೀವನದ ಈ ರಹಸ್ಯಗಳನ್ನು  ಅಪ್ಪಿತಪ್ಪಿಯೂ ಯಾರಿಗೂ ಹೇಳಬೇಡಿ, ಇಲ್ಲದಿದ್ದರೆ ಜೀವನವೇ ಹಾಳಾಗುತ್ತೆ!

ಧನು ರಾಶಿ: ನಿಮಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ. ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಲು ಬಿಡಬೇಡಿ. ಸಣ್ಣ ಪ್ರಯಾಣದ ಸಾಧ್ಯತೆ ಇದೆ. ಅಗತ್ಯವಿರುವವರಿಗೆ ಬಾಳೆ ಹಣ್ಣನ್ನು ನೀಡಿ.

ಅದೃಷ್ಟ ಬಣ್ಣ: ಕೆಂಪು

ಮಕರ ರಾಶಿ: ಈ ರಾಶಿಯವರ ಪ್ರಮುಖ ಕೆಲಸಗಳು ಮಧ್ಯಾಹ್ನದ ನಂತರ ನಡೆಯಲಿದೆ. ಇಂದು ಸಾಲವಾಗಿ ಕೊಟ್ಟ ಹಣ ವಾಪಸ್ ಬರಲಿದೆ. ಸಂತಾನ ಪ್ರಾಪ್ತಿಯಾಗುವ ಸಂಭವವಿದೆ. ದುರ್ಗಾ ಕವಚವನ್ನು ಪಠಿಸಿ.

ಅದೃಷ್ಟ ಬಣ್ಣ: ಓಚರ್

ಕುಂಭ ರಾಶಿ: ಈ ರಾಶಿಯವರು ಬಯಸಿದ ಸ್ಥಳ ಬದಲಾವಣೆ ಇರುತ್ತದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುತ್ತೀರಿ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ಹನುಮಂತನ ಆರಾಧನೆ ಮಾಡಿ.  

ಅದೃಷ್ಟ ಬಣ್ಣ: ನೀಲಿ

ಮೀನ ರಾಶಿ: ಈ ದಿನವು ನಿಮಗೆ ಸೋಮಾರಿತನದಿಂದ ಕೂಡಿರುತ್ತದೆ. ನಿಮ್ಮ ಕೆಲಸವನ್ನು ಮಧ್ಯಾಹ್ನ ಮಾಡಿ. ಇಂದು ಯಾರೊಂದಿಗೂ ವಾದ ಮಾಡಬೇಡಿ. ನಾರಾಯಣ ಕವಚವನ್ನು ಪಠಿಸಿ.

ಅದೃಷ್ಟ ಬಣ್ಣ: ಚಿನ್ನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News