Rudraksha Benefit: ನವಗ್ರಹಗಳ ಅಶುಭ ಪ್ರಭಾವಗಳಿಂದ ರಕ್ಷಿಸುತ್ತದೆ ಈ ಅದ್ಭುತ ರುದ್ರಾಕ್ಷ

Rudraksha Benefit: ಸಾಮಾನ್ಯವಾಗಿ ರುದ್ರಾಕ್ಷಿಯನ್ನು ಶಿವಸ್ವರೂಪಿ ಎಂದು ಪರಿಗಣಿಸಲಾಗುತ್ತದೆ. ರುದ್ರಾಕ್ಷಿಯಲ್ಲಿ ಹಲವು ವಿಧಗಳಿವೆ, ಅವುಗಳಲ್ಲಿ ದಶ ಮುಖಿ ಅಂದರೆ, ಹತ್ತು ಮುಖಗಳ ರುದ್ರಾಕ್ಷಿಯನ್ನು ಅತ್ಯಂತ ಅದ್ಭುತವೆಂದು ಪರಿಗಣಿಸಲಾಗುತ್ತದೆ. ಈ ರುದ್ರಾಕ್ಷಿಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Nov 25, 2022, 05:36 PM IST
  • ಶ್ರೀಮದ್ ದೇವಿ ಭಗವತ್ ಪುರಾಣದ ಪ್ರಕಾರ,
  • ಹತ್ತು ಮುಖಿ ರುದ್ರಾಕ್ಷಿಯು ವಿಷ್ಣುವಿನಿಂದ ಆಶೀರ್ವದಿಸಲ್ಪಟ್ಟಿದೆ.
  • ಇದನ್ನು ಧರಿಸಿದವರ ಮೇಲೆ ವಾಮಾಚಾರದ ಪ್ರಭಾವ ಉಂಟಾಗುವುದಿಲ್ಲ ಎಂದು ನಂಬಲಾಗಿದೆ.
Rudraksha Benefit: ನವಗ್ರಹಗಳ ಅಶುಭ ಪ್ರಭಾವಗಳಿಂದ ರಕ್ಷಿಸುತ್ತದೆ ಈ ಅದ್ಭುತ ರುದ್ರಾಕ್ಷ title=
10 Face Rudraksha Benefits

Rudraksha Benefit:  ಶ್ರೀಮದ್ ದೇವಿ ಭಗವತ್ ಪುರಾಣದ ಪ್ರಕಾರ, ಹತ್ತು ಮುಖಿ ರುದ್ರಾಕ್ಷಿಯು ವಿಷ್ಣುವಿನಿಂದ ಆಶೀರ್ವದಿಸಲ್ಪಟ್ಟಿದೆ. ಇದನ್ನು ಧರಿಸಿದವರ ಮೇಲೆ ವಾಮಾಚಾರದ ಪ್ರಭಾವ ಉಂಟಾಗುವುದಿಲ್ಲ ಎಂದು ನಂಬಲಾಗಿದೆ. ಆದರೆ ಇದನ್ನು ಧರಿಸುವ ಮುನ್ನ ತಜ್ಞರ ಸಲಹೆಯನ್ನು ಪಡೆದುಕೊಳ್ಳಬೇಕು. 

ಅಶಾಂತ ಗ್ರಹಗಳ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ವಾಸ್ತು ದೋಷಗಳನ್ನು ತೊಡೆದುಹಾಕಲು 10 ಮುಖಿ ರುದ್ರಾಕ್ಷಿಯು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಇದು ಎಲ್ಲಾ ನವಗ್ರಹಗಳನ್ನು ಶಾಂತಗೊಳಿಸುವ ಸಾಮರ್ಥ್ಯ ಹೊಂದಿದೆ.

ಯಾರ ಜಾತಕದಲ್ಲಿ ಶನಿಯು ಅಶುಭ ಸ್ಥಾನದಲ್ಲಿ ವಿರಾಜಮಾನನಾಗಿರುತ್ತಾನೆಯೋ  ಅಥವಾ ವ್ಯಕ್ತಿ ಸಾಡೆಸಾತಿ ಮತ್ತು ಶನಿಯ ಎರಡೂವರೆ ವರ್ಷಗಳ ಕಾಟ ಎದುರಿಸುತ್ತಿರುತ್ತಾನೋ, ಆ ವ್ಯಕ್ತಿ ಹತ್ತು ಮುಖಿ ರುದ್ರಾಕ್ಷವನ್ನು ಧರಿಸಬೇಕು ಎಂದು ಹೇಳಲಾಗುತ್ತದೆ. ಇದರಿಂದ ಶನಿಯ ಶುಭಫಲ ಪ್ರಾಪ್ತಿಯಾಗುತ್ತದೆ. ನೆನಪಿನಲ್ಲಿಡಿ, ಧರಿಸುವ ಮೊದಲು ನಿಯಮಗಳನ್ನು ತಿಳಿದುಕೊಳ್ಳಿ.

ದೀರ್ಘಕಾಲದಿಂದ ನ್ಯಾಯಾಲಯದ ಯಾವುದೇ ಒಂದು ಖಟ್ಲೆಯಲ್ಲಿ ನೀವು ಸಿಲುಕಿಕೊಂಡಿದ್ದರೆ, ಅಥವಾ ಆಸ್ತಿ ವಿಷಯಗಳ ಬಗ್ಗೆ ಚಿಂತೆ ಮಾಡುತ್ತಿದ್ದರೆ, ನೀವು ಹತ್ತು ಮುಖಿ ರುದ್ರಾಕ್ಷವನ್ನು ಬಳಸಬಹುದು. ಇದು ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಸಹಾಯಕ ಎಂದು ಸಾಬೀತುಪಡಿಸುತ್ತದೆ.

ಶಾಸ್ತ್ರಗಳ ಪ್ರಕಾರ, ಹತ್ತು ಮುಖಿ ರುದ್ರಾಕ್ಷವನ್ನು ಬಳಸುವುದರಿಂದ ಹತ್ತು ದಿಕ್ಕುಗಳ ಮತ್ತು ಹತ್ತು ಮಹಾವಿದ್ಯೆಗಳ ಅಧಿಪತಿಯ ಆಶೀರ್ವಾದವನ್ನು ಲಭಿಸುತ್ತದೆ ಎನ್ನಲಾಗುತ್ತದೆ.

ಶಾಸ್ತ್ರಗಳ ಪ್ರಕಾರ, ಮನೆಯಿಂದ ವಾಸ್ತು ದೋಷಗಳನ್ನು ತೊಡೆದುಹಾಕಲು, ಹರಳಿನ ಮಣಿಗಳಿಂದ ಹತ್ತು ಮುಖದ ರುದ್ರಾಕ್ಷದ ಮಾಲೆಯನ್ನು ಮಾಡಿ ಮತ್ತು ಅದನ್ನು ಸ್ವಲ್ಪ ಖಾಲಿ ಜಾಗವಿರುವಂತಹ ಸ್ಥಳದಲ್ಲಿ ಮನೆ ಅಥವಾ ಕೆಲಸದ ಸ್ಥಳದಲ್ಲಿ ನೇತುಹಾಕಿ. ಇದು ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ ಮತ್ತು ಮನೆಯ ವಾತಾವರಣವನ್ನು ಶುದ್ಧಗೊಳಿಸುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ-Astrology : ಆರೋಗ್ಯದ ಜೊತೆಗೆ ಅದೃಷ್ಟವನ್ನು ಬೆಳಗಿಸುತ್ತೆ ಹಿತ್ತಾಳೆ ಪಾತ್ರೆ.!

ಒಂಟಿತನದ ಭಯವನ್ನು ತೊಡೆದುಹಾಕಲು ಮತ್ತು ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಹತ್ತು ಮುಖಿ ರುಡಾಕ್ಷವನ್ನು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ-ಮನೆಯ ದಕ್ಷಿಣ ದಿಕ್ಕಿನಲ್ಲಿ ಈ 3 ವಸ್ತುಗಳನ್ನು ಇರಿಸಿ, ಅದೃಷ್ಟಿ ನಿಮ್ಮದಾಗಲಿದೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News