Akshaya Tritiya 2021: ಅಕ್ಷಯ ತೃತೀಯದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಶುಭ ಹಾರೈಸಿ

ಅಕ್ಷಯ ತೃತೀಯವನ್ನು ಬಂಧು-ಬಾಂಧವರೊಂದಿಗೆ ಆಚರಿಸಿದರೆ ಅದರ ಪ್ರಾಮುಖ್ಯತೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.  

Written by - Zee Kannada News Desk | Last Updated : May 14, 2021, 07:55 AM IST
  • ಅಕ್ಷಯ ತೃತೀಯವನ್ನು ಹಿಂದೂ ಧರ್ಮದಲ್ಲಿ ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗಿದೆ
  • ಅಕ್ಷಯ ತೃತೀಯದಲ್ಲಿ ನಾವು ನಿಮಗಾಗಿ ಅಂತಹ ವಿಶೇಷ ಸಂದೇಶಗಳನ್ನು ತಂದಿದ್ದೇವೆ
  • ಅಕ್ಷಯ ತೃತೀಯಾದಂದು ಮಾತ್ರವಲ್ಲ ಇಡೀ ನಿನ್ನ ಬಾಳಿನಲ್ಲಿ ಆರೋಗ್ಯ, ಸಂಪತ್ತು ತುಂಬಿರಲಿ
Akshaya Tritiya 2021: ಅಕ್ಷಯ ತೃತೀಯದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಶುಭ ಹಾರೈಸಿ title=
Happy Akshaya Tritiya 2021 Wishes

Happy Akshaya Tritiya 2021 Wishes: ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನವೇ ಅಕ್ಷಯ ತೃತೀಯ. ಈ ದಿನ ಹಿಂದೂಗಳಿಗೆ ತುಂಬಾನೇ ಪ್ರಾಮುಖ್ಯವಾದ ದಿನ. ಚಿನ್ನ ಬೆಳ್ಳಿ ಕೊಳ್ಳಲು, ಆಸ್ತಿ ಖರೀದಿಸಲು, ವಾಹನ ಖರೀದಿಸಲು, ಯಾವುದಾದರು ಹೊಸ ವ್ಯವಹಾರಕ್ಕೆ ಕೈ ಹಾಕಲು, ರೈತರು ಹೊಲದಲ್ಲಿ ಹೊಸ ಬೆಳೆಗೆ ಕೆಲಸ ಪ್ರಾರಂಭಿಸಲು, ತುಂಬಾ ಶುಭವೆಂದು ಈ ದಿನವನ್ನು ಪರಿಗಣಿಸಲಾಗಿದೆ.

ಅಕ್ಷಯ ತೃತೀಯದಂದು (Akshaya Tritiya 2021) ಯಾವುದೇ ಶುಭ ಕಾರ್ಯ ಮಾಡಿದರೂ ಅದರ ಫಲ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ. ಈ ಅಕ್ಷಯ ತೃತೀಯಾದಂದು ಏನೇ ಮಾಡಿದರೂ ಅದು ಅಕ್ಷಯವಾಗಿರುತ್ತದೆ. ಈ ಶುಭ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಶುಭ ಕೋರಲು ಇಲ್ಲಿದೆ ಉತ್ತಮ ಶುಭಾಶಯಗಳು...

1. ಅಕ್ಷಯ ತೃತೀಯ ಶುಭಾಶಯಗಳು

2. ಈ ಅಕ್ಷಯ ತೃತೀಯ ನಿಮ್ಮ ಸಂಪತ್ತು, ಆರೋಗ್ಯ (Health) ವೃದ್ಧಿಸಲಿ, ಮನೆಯಲ್ಲಿ ಖುಷಿ ತುಂಬಲಿ...ಅಕ್ಷಯ ತೃತೀಯ ಶುಭಾಶಯಗಳು

ಇದನ್ನೂ ಓದಿ - Akshaya Tritiya 2021: ಅಕ್ಷಯ ತೃತೀಯ ದಿನದಂದು ಈ ಕೆಲಸ ಮಾಡಿದರೆ ವರ್ಷಪೂರ್ತಿ ಹಣ ಬರಲಿದೆ

3. ಅಕ್ಷಯ ತೃತೀಯದಂದು ನೀವು ಕೈಗೊಂಡ ಕಾರ್ಯ ಅಕ್ಷಯವಾಗಲಿ, ಅದೃಷ್ಟದ ಲಕ್ಷ್ಮಿ ನಿಮಗೆ ಒಲಿಯಲಿ ಎಂದು ಹಾರೈಸುವೆ.ಅಕ್ಷಯ ತೃತೀಯ ಶುಭಾಶಯಗಳು

4. ನಿಮ್ಮ ಹಾಗೂ ಮನೆಯವರ ಆರೋಗ್ಯ ಅಕ್ಷಯವಾಗಿರಲಿಅದೃಷ್ಟ ನಿಮ್ಮ ಜೊತೆಗಿರಲಿನೀವು ಮಾಡುತ್ತಿರುವ ಕಾರ್ಯದಲ್ಲಿ ಯಶಸ್ವಿ ಕಾಣಲಿ ಎಂದು ಹಾರೈಸುವೆಅಕ್ಷಯ ತೃತೀಯ ಶುಭಾಶಯಗಳು

5. ಈ ಅಕ್ಷಯ ತೃತೀಯ ಶುಭ ದಿನದಂದು ನಿಮ್ಮ ಎಲ್ಲಾ ಕನಸುಗಳು ನೆರವೇರಲಿ, ಆ ದೇವರು ಆರೋಗ್ಯ, ಆಯುಸ್ಸು, ಐಶ್ವರ್ಯ ಕೊಟ್ಟು ನಿಮ್ಮನ್ನು, ನಿಮ್ಮ ಮನೆಯವರನ್ನು ಸಂರಕ್ಷಿಸಲಿ ಎಂದು ಮನ ತುಂಬಿ ಹಾರೈಸುವೆ.

ಇದನ್ನೂ ಓದಿ -  ಅಕ್ಷಯ ತೃತೀಯದ ದಿನ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ; ಲಕ್ಷ್ಮೀ ಮುನಿದುಕೊಳ್ಳುತ್ತಾಳೆ

6. ನಿನ್ನ ಕಾರ್ಯದಲ್ಲಿ ಯಶಸ್ವಿ ದೊರೆಯಲಿ, ಅದೃಷ್ಟ ಲಕ್ಷ್ಮಿ ಸದಾ ನಿನ್ನ ಜೊತೆಗಿರಲಿ...ನಿನ್ನ ಮುಖದಲ್ಲಿ ನಗು ಅಕ್ಷಯವಾಗಿರಲಿ ಎಂಬುವುದೇ ನನ್ನಾಸೆಅಕ್ಷಯ ತೃತೀಯ ಶುಭಾಶಯಗಳು

7. ಅಕ್ಷಯ ತೃತೀಯಾದಂದು ಮಾತ್ರವಲ್ಲ ಇಡೀ ನಿನ್ನ ಬಾಳಿನಲ್ಲಿ ಆರೋಗ್ಯ, ಸಂಪತ್ತು ತುಂಬಿರಲಿ. ಬೇಡಿದ್ದನ್ನು ಕೊಡುವ ನಿನ್ನ ಕೈಗಳು ಸದಾ ಅಕ್ಷಯವಾಗಿರಲಿ, ನಿಮ್ಮಿಂದ ಮತ್ತಷ್ಟು ಉಪಕಾರ ಈ ಸಮಾಜಕ್ಕೆ ಆಗುವಂತಾಗಲಿ. ನಿಮಗೆ, ನಿಮ್ಮ ಕುಟುಂಬಕ್ಕೆ ಅಕ್ಷಯ ತೃತೀಯಾ ಶುಭಾಶಯಗಳು. ದೇವರ ಕೃಪೆ ಸದಾ ನಿಮ್ಮ ಮೇಲಿರಲಿ.

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News