ಪತಿ ಪತ್ನಿ ಈ ನಿಯಮಗಳನ್ನು ಅನುಸರಿಸಿದರೆ ದಾಂಪತ್ಯದಲ್ಲಿ ಬಿರುಕು ಮೂಡುವುದೇ ಇಲ್ಲ ..!

 ಚಾಣಕ್ಯ ನೀತಿಯಲ್ಲಿ ಹೇಳಲಾಗಿರುವ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಪತಿ-ಪತ್ನಿಯರ ನಡುವಿನ  ಅಳವಡಿಸಿಕೊಂಡರೆ ಅವರ ನಡುವಿನ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ. 

Written by - Ranjitha R K | Last Updated : Jul 22, 2022, 12:34 PM IST
  • ಸುಖ ಸಂಸಾರಕ್ಕೆ ಚಾಣಕ್ಯ ಸೂತ್ರಗಳು
  • ಗಂಡ ಮತ್ತು ಹೆಂಡತಿ ಅನುಸರಿಸಬೇಕಾದ ಅಂಶಗಳು
  • ನೆಲೆಸುತ್ತದೆ ಶಾಶ್ವತ ಪ್ರೀತಿ ಗೌರವ
ಪತಿ ಪತ್ನಿ  ಈ ನಿಯಮಗಳನ್ನು ಅನುಸರಿಸಿದರೆ ದಾಂಪತ್ಯದಲ್ಲಿ ಬಿರುಕು ಮೂಡುವುದೇ ಇಲ್ಲ ..!  title=
Chanakya niti for life (file photo)

ಬೆಂಗಳೂರು : Chanakya Niti for Couples: ಶ್ರೇಷ್ಠ ಅರ್ಥಶಾಸ್ತ್ರಜ್ಞ, ಚಾಣಕ್ಯ ಅವರು ತಮ್ಮ ನೀತಿ ಶಾಸ್ತ್ರದಲ್ಲಿ ದಂಪತಿಗಳಿಗಾಗಿ ಅನೇಕ ವಿಷಯಗಳನ್ನು ಹೇಳಿದ್ದಾರೆ. ನೆಮ್ಮದಿಯ ದಾಂಪತ್ಯ ಜೀವನಕ್ಕಾಗಿ ಪತಿ-ಪತ್ನಿಯರು ಅನುಸರಿಸಬೇಕಾದ ಕೆಲವು ನಿಯಮಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಪತಿ ಪತ್ನಿಯರಲ್ಲಿ ಯಾರಾದರೂ ಗಲಾಟೆ ಮಾಡಿಕೊಂಡರೆ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಮನೆಯ ಶಾಂತಿ ಕದಡುತ್ತದೆ. ಚಾಣಕ್ಯ ನೀತಿಯಲ್ಲಿ ಹೇಳಲಾಗಿರುವ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಪತಿ-ಪತ್ನಿಯರ ನಡುವಿನ  ಅಳವಡಿಸಿಕೊಂಡರೆ ಅವರ ನಡುವಿನ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ. 

ಗಂಡ ಮತ್ತು ಹೆಂಡತಿ  ಅನುಸರಿಸಬೇಕಾದ ಅಂಶಗಳು :  
ಪ್ರೀತಿ ಅಷ್ಟೇ ಅಲ್ಲ, ಗೌರವ ಕೂಡಾ ಮುಖ್ಯ : ಗಂಡ ಹೆಂಡತಿ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸಬೇಕು. ಸಂಸಾರದಲ್ಲಿ ಪ್ರೀತಿ ಬಹಳ ಮುಖ್ಯ. ಆದರೆ ಪ್ರೀತಿಯಷ್ಟೇ ಪರಸ್ಪರ ಗೌರವಿಸುವುದು ಕೂಡಾ ಮುಖ್ಯ. ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಗೌರವವಿಲ್ಲದಿದ್ದರೆ, ದಂಪತಿ ಮಧ್ಯೆ ಬಿರುಕು ಮೂಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಪರಸ್ಪರ ಗೌರವ ಪತಿ  ಪತ್ನಿಯರ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ. 

ಇದನ್ನೂ ಓದಿ : ಶನಿ ಸಂಕ್ರಮಣದಿಂದ ಬದಲಾಗುತ್ತೆ ಈ ಮೂರು ರಾಶಿಗಳ ಭವಿಷ್ಯ!

ಅಹಂಕಾರ ಸಲ್ಲದು : ಅಹಂಕಾರ ಎನ್ನುವುದು ಪತಿ-ಪತ್ನಿಯರ ಸಂಬಂಧವನ್ನು ಹಾಳು ಮಾಡಿ ಬಿಡುತ್ತದೆ. ಪತಿ-ಪತ್ನಿಯರಿಬ್ಬರಿಗೂ ಸಮಾನ ಸ್ಥಾನಮಾನ ದೊರೆತು, ಇಬ್ಬರೂ ಪ್ರತಿಸ್ಪರ್ಧಿಗಳಾಗದೆ, ಒಟ್ಟಿಗೆ ಜೀವನದಲ್ಲಿ ಮುನ್ನಡೆದಾಗ ಮಾತ್ರ ದಾಂಪತ್ಯ ಜೀವನ ಚೆನ್ನಾಗಿ ಸಾಗುತ್ತದೆ. ಯಾವಾಗ ಮೇಲೂ ಕೀಳು ಎನ್ನುವ ಭಾವ ಮೂಡುತ್ತದೆಯೋ ಅಲ್ಲಿ ದಾಂಪತ್ಯ ಹಾಳಾಗುತ್ತದೆ.  

ತಾಳ್ಮೆ: ಪತಿ-ಪತ್ನಿ ಸುಖ-ದುಃಖದ ಸಂಗಾತಿಗಳು. ಜೀವನದ ಎಲ್ಲಾ ಏರಿಳಿತಗಳನ್ನು ಒಟ್ಟಿಗೆ ಎದುರಿಸುತ್ತಾರೆ. ಆದ್ದರಿಂದ ಜೀವನದಲ್ಲಿ ಏನೇ ಬರಲಿ ತಾಳ್ಮೆ ಕಳೆದುಕೊಳ್ಳಬಾರದು. ಜೀವನದಲ್ಲಿ ಕೆಟ್ಟ ಸ್ಥಿತಿ ಎದುರಾದಾಗ ತಾಳ್ಮೆ ಕಳೆದುಕೊಂಡರೆ  ಎಲ್ಲವೂ ಕೆಡುತ್ತದೆ. ತಾಳ್ಮೆ ಒಂದಿದ್ದರೆ ಎಂಥ ಪರಿಸ್ಥಿತಿ ಬಂದರೂ ಜಯಿಸಿಬಿಡಬಹುದು.  

ಇದನ್ನೂ ಓದಿ : ಕಲೆ ರಹಿತ ತ್ವಚೆಗಾಗಿ ನಿತ್ಯ ರಾತ್ರಿ ಮಲಗುವ ಮೊದಲು ಇದನ್ನು ಮುಖಕ್ಕೆ ಹಚ್ಚಿ

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News