Daily Horoscope: ದಿನಭವಿಷ್ಯ 23-06-2021 Today astrology

ಶ್ರೀ ಶ್ರೀ ಕ್ಷೇತ್ರ ಮಂದಾರ್ತಿ  ಗಣಪತಿ ಸ್ವಾಮಿ   ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ...

Written by - Zee Kannada News Desk | Last Updated : Jun 23, 2021, 06:15 AM IST
  • ಸಿಂಹ ರಾಶಿಯವರಿಗೆ ಬಹಳ ದಿನಗಳಿಂದ ದೊಡ್ಡ ರೂಪದಲ್ಲಿ ತಲೆ ತಿನ್ನುತ್ತಿದ್ದ ಸಮಸ್ಯೆಗೊಂದು ಪರಿಹಾರ ದೊರೆಯಲಿದೆ
  • ಧನಸ್ಸು ರಾಶಿಯವರೇ ತಪ್ಪು ಮಾಹಿತಿ ನೀಡುವವರ ಬಗ್ಗೆ ಎಚ್ಚರವಿರಲಿ
  • ಕುಂಭ ರಾಶಿಯವರಿಗೆ ಹೊಸ ಹೊಸ ಸಂಬಂಧಗಳು ನಿಮ್ಮನ್ನು ಕೈಬೀಸಿ ಕರೆಯಲಿವೆ
Daily Horoscope: ದಿನಭವಿಷ್ಯ 23-06-2021 Today astrology  title=
Daily Horoscope (ದಿನಭವಿಷ್ಯ 23-06-2021)

Daily Horoscope (ದಿನಭವಿಷ್ಯ 23-06-2021) : ಶ್ರೀ ಶ್ರೀ ಕ್ಷೇತ್ರ ಮಂದಾರ್ತಿ  ಗಣಪತಿ ಸ್ವಾಮಿ   ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ...

ಮೇಷ:- ಮಾನಸಿಕ ದೃಢತೆಯನ್ನು ಸಂಪಾದಿಸಿಕೊಳ್ಳಿ. ನಿಮ್ಮ ಎಲ್ಲಾ ಕಾರ್ಯಗಳು ಭಗವಂತನ ಅನುಗ್ರಹದಿಂದ ಸುಲಲಿತವಾಗುವವು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಮನೆ ಮಂದಿಯ ಪ್ರೀತಿ ಸೌಹಾರ್ದತೆ ನಿಮ್ಮನ್ನು ಬೆರಗುಗೊಳಿಸುತ್ತವೆ.

ವೃಷಭ:- ನಿಮ್ಮಲ್ಲಿ ಕೆಲವರು ಬೆಲೆಬಾಳುವ ವಸ್ತುಗಳ ಖರೀದಿಗೆ ಮುಂದಾಗುವರು. ಮನೆಯಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಗಳು ನಿಮಗೆ ತೃಪ್ತಿ ನೀಡುವವು. ಮಗನ ಮದುವೆ ವಿಚಾರವಾಗಿ ಹೆಚ್ಚು ಆಸಕ್ತರಾಗುವಿರಿ. ಅಂತೆಯೆ ಕೆಲ ಕನ್ಯಾ ಪಿತೃಗಳು ನಿಮ್ಮನ್ನು ಸಂಪರ್ಕಿಸುವರು.

ಮಿಥುನ:- ಗುರು ಹಿರಿಯರ ಆಶೀರ್ವಾದವಿದೆಯೆಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ದುರಾಸೆ ಅಭಿವ್ಯಕ್ತಿಗೊಳಿಸುವುದು ಸೂಕ್ತವಲ್ಲ. ಪ್ರೀತಿ ಸೌಹಾರ್ದತೆಗಳಿಂದ ಜನರ ಹೃದಯ ಗೆಲ್ಲುವ ಅವಕಾಶ ಕಳೆದುಕೊಳ್ಳದಿರಿ.

ಕಟಕ:- ಕೆಲವು ವಿಚಾರಗಳ ಬಗ್ಗೆ ನೀವು ಹೆಚ್ಚು ಭಾವುಕರಾಗುವಿರಿ. ಆದರೆ ತೀರ ಭಾವುಕತೆಯಿಂದ ವ್ಯವಹರಿಸುವಾಗ ವೈಫಲ್ಯ ಸಂಭವಿಸುವ ಸಾಧ್ಯತೆ ಇದೆ. ಕೆಲವು ವಿಚಾರಗಳಲ್ಲಿ ದೃಢ ನಿರ್ಧಾರ ತಳೆಯುವುದು ಹಿಂದೆಗಿಂತಲೂ ಇಂದು ಹೆಚ್ಚು ಅವಶ್ಯಕವಾಗಿದೆ.

ಇದನ್ನೂ ಓದಿ- Guru Rashi Parivartan 2021: ಬೃಹಸ್ಪತಿ ಹಿಮ್ಮುಖ ಚಲನೆ, ಯಾರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ?

ಸಿಂಹ:- ಬಹಳ ದಿನಗಳಿಂದ ದೊಡ್ಡ ರೂಪದಲ್ಲಿ ತಲೆ ತಿನ್ನುತ್ತಿದ್ದ ಸಮಸ್ಯೆಗೊಂದು ಪರಿಹಾರ ದೊರೆಯಲಿದೆ. ಬರಲಿರುವ ಕಷ್ಟಗಳು ಕೂಡಾ ಶೀಘ್ರದಲ್ಲಿಯೇ ಮಂಜುಗಡ್ಡೆಯಂತೆ ಕರಗಿ ಹೋಗುವವು. ಇದಕ್ಕೆ ಪೂರಕವಾಗಿ ಮಡದಿ ಮಕ್ಕಳ ಸಹಕಾರ ದೊರೆಯುವುದು.

ಕನ್ಯಾ:- ಆಸ್ತಿ ಮಾರಿ ಬಂದ ಹೆಚ್ಚುವರಿ ಲಾಭವನ್ನು ಒಂದು ಸುರಕ್ಷಿತ ಸಂಸ್ಥೆಯಲ್ಲಿ ತೊಡಗಿಸಿ, ಇಲ್ಲವೆ ಮತ್ತೊಂದು ಸ್ಥಿರಾಸ್ತಿಯ ಖರೀದಿ ಬಗ್ಗೆ ಚಿಂತಿಸುವುದು ಒಳ್ಳೆಯದು. ಈಗ ಕಾಲ ಉತ್ತಮವಾಗಿರುವುದರಿಂದ ಸ್ಥಿರ ಆಸ್ತಿ ಖರೀದಿಸಲು ಸಕಾಲವಾಗಿದೆ.

ತುಲಾ:- ಕುಟುಂಬದ ಬಗೆಗಿನ ಜವಾಬ್ದಾರಿಗಳನ್ನು ನಿರ್ವಹಿಸಲು ಮರೆಯದಿರಿ. ಕೇವಲ ತನ್ನ ಹೆಂಡತಿ ಮತ್ತು ಮಕ್ಕಳು ಕ್ಷೇಮವಾಗಿದ್ದರೆ ಸಾಕು ಎಂದು ಸಂಕುಚಿತ ಮನೋಭಾವನೆಯಿಂದ ಹೊರಬಂದು ಹೆತ್ತ ತಂದೆ ತಾಯಿಯರ ಹಾಗೂ ಒಡಹುಟ್ಟಿದವರ ಯೋಗಕ್ಷೇಮ ವಿಚಾರಿಸಿ.

ವೃಶ್ಚಿಕ:- ಗ್ರಹಗಳ ಸಂಚಾರದ ಕ್ರೂರತೆಯಿಂದಾಗಿ ಜೀವನದಲ್ಲಿ ಮುಂದೆ ಹೇಗೆ ಎಂದು ಚಿಂತಿತರಾಗುವಿರಿ. ಇಂತಹ ದುರ್ಬಲ ಮನಸ್ಸಿರುವ ಸಂದರ್ಭದಲ್ಲಿಯೇ ಕೆಲ ಧೂರ್ತರು ನಿಮಗೆ ಸಹಾಯ ಮಾಡುವ ನೆಪದಲ್ಲಿ ನಿಮ್ಮ ಬಳಿ ಬಂದು ಹಣ ದೋಚುವ ಸಾಧ್ಯತೆ ಇರುತ್ತದೆ, ಎಚ್ಚರ.

ಇದನ್ನೂ ಓದಿ- Tulsi Plant: ಈ ಎರಡೂ ದಿನ ಅಪ್ಪಿ-ತಪ್ಪಿಯೂ ತುಳಸಿ ಗಿಡಕ್ಕೆ ನೀರು ಹಾಕಬೇಡಿ

ಧನಸ್ಸು:- ತಪ್ಪು ಮಾಹಿತಿ ನೀಡುವವರ ಬಗ್ಗೆ ಎಚ್ಚರವಿರಲಿ. ನಿಮ್ಮ ಗುರಿಯು ಬಾಣದಂತೆ ನೇರವಾಗಿರಲಿ. ಬಾಣವು ನಿರ್ದಿಷ್ಟ ಗುರಿಯನ್ನು ತಲುಪಬೇಕೆಂದರೆ ಬಾಣದ ಹಿಂದಿರುವ ಹುರಿಯನ್ನು ಸ್ವಲ್ಪ ಹಿಂದಕ್ಕೆ ತರಲೇಬೇಕಾಗುವುದು. ಹಾಗಾಗಿ ಇಂದಿನ ಸೋಲು ನಾಳಿನ ಗೆಲುವಿಗೆ ದಾರಿ ಆಗುವುದು ಎಂದು ನೆನಪಿಡಿ.

ಮಕರ:- ಬಾಳಸಂಗಾತಿ ಅಥವಾ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಸೂಕ್ತ ಗಮನ ನೀಡಿ. ಮಹತ್ತರ ಕೆಲಸವನ್ನು ಮುಂದೂಡುವುದು ಒಳಿತು. ಬಡವರಿಗೆ ಇಲ್ಲವೆ ಭಿಕ್ಷುಕರಿಗೆ ಉದಾರತೆಯಿಂದ ಧನ ಸಹಾಯ ಮಾಡಿ.

ಕುಂಭ:- ಹೊಸ ಹೊಸ ಸಂಬಂಧಗಳು ನಿಮ್ಮನ್ನು ಕೈಬೀಸಿ ಕರೆಯಲಿವೆ. ಹೊಸ ಹೂಡಿಕೆಗಳು ಲಾಭದಾಯಕವಾದ್ದರಿಂದ ವಿವಿಧ ಕ್ಷೇತ್ರಗಳಲ್ಲಿ ಹಣ ಹೂಡಿಕೆ ಮಾಡಬಹುದಾಗಿದೆ. ಸರ್ಕಾರದ ವತಿಯಿಂದ ನಿಮಗೆ ಪ್ರಿಯವಾದ ಸಮಾಚಾರ ಕೇಳಿ ಬರುವುದು.

ಮೀನ:- ಎಲ್ಲಾ ಸಂಪತ್ತು ಇದ್ದರೂ ಆರೋಗ್ಯ ಸಂಪತ್ತು ಇಲ್ಲದಿದ್ದರೆ ಯಾವುದನ್ನು ಮನಃಪೂರ್ವಕವಾಗಿ ಅನುಭವಿಸಲು ಆಗುವುದಿಲ್ಲ. ಹಾಗಾಗಿ ನಿಮ್ಮ ವೈಯಕ್ತಿಕ ಆರೋಗ್ಯದ ಕಡೆ ಗಮನ ಕೊಡಿ. ಕುಲದೇವರನ್ನು ಪ್ರಾರ್ಥಿಸಿ.

ಇದನ್ನೂ ಓದಿ- Sun enters Ardra Nakshatra: ಆರ್ದ್ರ ನಕ್ಷತ್ರದಲ್ಲಿ ಸೂರ್ಯನ ಪ್ರವೇಶ, ಇದರ ಪರಿಣಾಮ ಹೇಗಿರಲಿದೆ!

ಪಂಡಿತ್ ದಾಮೋದರ್ ಭಟ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News