Chanakya Niti:ದಾಂಪತ್ಯ ಜೀವನದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತವೆ ಈ ಸಂಗತಿಗಳು... ಎಚ್ಚರ!

Chanakya Niti For Motivation: ಚಾಣಕ್ಯನ ಪ್ರಕಾರ, ಪತಿ-ಪತ್ನಿಯರ ನಡುವಿನ ಸಂಬಂಧವು ಪ್ರಪಂಚದ ಅತ್ಯಂತ ಬಲಿಷ್ಠ ಸಂಬಂಧಗಳಲ್ಲಿ ಒಂದಾಗಿದೆ. ಈ ಸಂಬಂಧದಲ್ಲಿ ಕೆಲ ವಿಷಯಗಳನ್ನು ಎಂದಿಗೂ ಅನುಮತಿಸಬಾರದು. ಪತಿ ಪತ್ನಿಯರ ನಡುವೆ ಯಾವ ಸಂಬಂಧಗಳನ್ನು ಅನುಮತಿಸಬಾರದು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Aug 14, 2022, 03:59 PM IST
  • ಆಚಾರ್ಯ ಚಾಣಕ್ಯರು ಸುಖಕರ ದಾಂಪತ್ಯ ಜೀವನದ ಬಗ್ಗೆ ಚರ್ಚಿಸಿದ್ದಾರೆ.
  • ಪತಿ-ಪತ್ನಿಯರ ಬಾಂಧವ್ಯವನ್ನು ಹೇಗೆ ಗಟ್ಟಿಗೊಳಿಸಬೇಕು?
  • ಮತ್ತು ಅದಕ್ಕಾಗಿ ಯಾವ ಕಾಳಜಿ ವಹಿಸಬೇಕು ಎಂಬುದನ್ನೂ ಕೂಡ ಅವರು ಹೇಳಿದ್ದಾರೆ.
Chanakya Niti:ದಾಂಪತ್ಯ ಜೀವನದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತವೆ ಈ ಸಂಗತಿಗಳು... ಎಚ್ಚರ! title=
Chanakya Niti For Motivation

Chanakya Niti In Kannada - ಚಾಣಕ್ಯ ನೀತಿಯಲ್ಲಿ, ಆಚಾರ್ಯ ಚಾಣಕ್ಯರು ಸುಖಕರ ದಾಂಪತ್ಯ ಜೀವನದ ಬಗ್ಗೆ ಚರ್ಚಿಸಿದ್ದಾರೆ. ಪತಿ-ಪತ್ನಿಯರ ಬಾಂಧವ್ಯವನ್ನು ಹೇಗೆ ಗಟ್ಟಿಗೊಳಿಸಬೇಕು? ಮತ್ತು ಅದಕ್ಕಾಗಿ ಯಾವ ಕಾಳಜಿ ವಹಿಸಬೇಕು ಎಂಬುದನ್ನೂ ಕೂಡ ಅವರು ಹೇಳಿದ್ದಾರೆ.

1- ಚಾಣಕ್ಯ ನೀತಿಯ ಪ್ರಕಾರ, ಪತಿ-ಪತ್ನಿಯರ ಸಂಬಂಧದಲ್ಲಿ ಅನುಮಾನಕ್ಕೆ ಅವಕಾಶ ನೀಡಬಾರದು. ಈ ಸಂಬಂಧವನ್ನು ದುರ್ಬಲಗೊಳಿಸುವಲ್ಲಿ ಅನುಮಾನವು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ ಮತ್ತು ನಂತರ ಈ ವಿಷವು ಜೀವನದುದ್ದಕ್ಕೂ ಸತಾಯಿಸುತ್ತದೆ. ಒಮ್ಮೆ ಅನುಮಾನ ಬಂದರೆ ಅದು ಸುಲಭವಾಗಿ ಹೋಗುವುದಿಲ್ಲ ಎಂದು ಹೇಳಲಾಗುತ್ತದೆ. ಸಂಬಂಧಗಳಲ್ಲಿ ಪ್ರಬುದ್ಧತೆ ಇರಬೇಕು. ಪರಸ್ಪರ ನಂಬಿಕೆ ಈ ವಿಷವನ್ನು ನಾಶಪಡಿಸುತ್ತದೆ.

2- ದಾಂಪತ್ಯ ಜೀವನದಲ್ಲಿ ವಿಷ ಬೆರೆಯಲು ಅಹಂಕಾರವೂ ಕೆಲಸ ಮಾಡುತ್ತದೆ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಇದು ಸಂಬಂಧವನ್ನು ಹಾಳುಮಾಡುತ್ತದೆ. ಅದರಿಂದ ದೂರವಿರಲು ಪ್ರಯತ್ನಿಸಿ. ಪತಿ-ಪತ್ನಿಯರ ಸಂಬಂಧದಲ್ಲಿ ಅಹಂಕಾರಕ್ಕೆ ಅವಕಾಶ ಇರಬಾರದು.

ಇದನ್ನೂ ಓದಿ-August 31ರ ವರೆಗೆ ಈ ರಾಶಿಗಳ ಜನರಿಗೆ ಅಪಾರ ಧನಲಾಭ ! ಕಾರಣ ಇಲ್ಲಿದೆ

3- ಆಚಾರ್ಯ ಚಾಣಕ್ಯರ ಪ್ರಕಾರ ದಾಂಪತ್ಯ ಜೀವನ ಸುಖಮಯವಾಗಬೇಕಾದರೆ ಅದರಲ್ಲಿ ಸುಳ್ಳಿಗೆ ಜಾಗ ಇರಬಾರದು. ಸುಳ್ಳುಗಳು ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತವೆ. ಆದ್ದರಿಂದ ನೀವು ಅದರಿಂದ ದೂರವಿರಬೇಕು. ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದನ್ನು ತಿಳುವಳಿಕೆ ಮತ್ತು ಪರಸ್ಪರ ಸಮನ್ವಯದಿಂದ ಕಾಪಾಡಿಕೊಳ್ಳಬೇಕು.

ಇದನ್ನೂ ಓದಿ-Kidney ಯಲ್ಲಿ ಸಮಸ್ಯೆ ಇದ್ದರೆ ಶರೀರ ಈ ವಿಚಿತ್ರ ಸಂಕೇತಗಳನ್ನು ನೀಡುತ್ತದೆ, ನಿರ್ಲಕ್ಷಿಸಬೇಡಿ

4- ಚಾಣಕ್ಯ ನೀತಿಯ ಪ್ರಕಾರ, ಘನತೆ ಮತ್ತು ಗೌರವವು ಯಾವುದೇ ಸಂಬಂಧವನ್ನು ಗಟ್ಟಿಯಾಗಿ ಮತ್ತು ದೀರ್ಘಕಾಲ ಉಳಿಯುವಂತೆ ಮಾಡುತ್ತವೆ. ಯಾವುದೇ ಸಂಬಂಧದಲ್ಲಿ ಘನತೆ ಮತ್ತು ಗೌರವದ ಕೊರತೆ ಇದ್ದಾಗ, ಆ ಸಂಬಂಧವು ಬಣ್ಣರಹಿತವಾಗುತ್ತದೆ, ಆ ಸಂಬಂಧದ ಸಂತೋಷವು ಕೊನೆಗೊಳ್ಳುತ್ತದೆ. ಪ್ರತಿಯೊಂದು ಸಂಬಂಧಕ್ಕೂ ತನ್ನದೇ ಆದ ಮಿತಿ ಇರುತ್ತದೆ. ಈ ಮಿತಿಯನ್ನು ಯಾರೂ ಮೀರಬಾರದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News