Chanakya Niti: ಸ್ನೇಹ ಮಾಡುವ ಮೊದಲು ಈ ವಿಷಯ ನೆನಪಿನಲ್ಲಿಡಿ, ಇಲ್ಲದಿದ್ದರೆ ಪಶ್ಚಾತ್ತಾಪ ಪಡಬೇಕಾದೀತು!

Chanakya Niti About Friendship: ಆಚಾರ್ಯ ಚಾಣಕ್ಯ ಅವರು ತಮ್ಮ ನೀತಿಶಾಸ್ತ್ರ ಚಾಣಕ್ಯ ನೀತಿಯಲ್ಲಿ ಅನೇಕ ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಅಂತಹ ಕೆಲವು ನೀತಿಗಳನ್ನು ಅನುಸರಿಸಿದರೆ ಮನುಷ್ಯನು ಜೀವನದಲ್ಲಿ ಎಂದಿಗೂ ನಿರಾಶೆ ಅಥವಾ ವೈಫಲ್ಯವನ್ನು ಎದುರಿಸುವುದಿಲ್ಲ. ಆಚಾರ್ಯ ಚಾಣಕ್ಯರ ನೀತಿಗಳನ್ನು ಅನುಸರಿಸಿ ವಿಶ್ವದ ಅನೇಕ ಜನರು ಯಶಸ್ಸನ್ನು ಸಾಧಿಸಿದ್ದಾರೆ. 

Written by - Chetana Devarmani | Last Updated : Nov 16, 2022, 06:26 PM IST
  • ಸ್ನೇಹ ಮಾಡುವ ಮೊದಲು ಈ ವಿಷಯ ನೆನಪಿನಲ್ಲಿಡಿ
  • ಇಲ್ಲದಿದ್ದರೆ ಪಶ್ಚಾತ್ತಾಪ ಪಡಬೇಕಾದೀತು!
Chanakya Niti: ಸ್ನೇಹ ಮಾಡುವ ಮೊದಲು ಈ ವಿಷಯ ನೆನಪಿನಲ್ಲಿಡಿ, ಇಲ್ಲದಿದ್ದರೆ ಪಶ್ಚಾತ್ತಾಪ ಪಡಬೇಕಾದೀತು! title=
ಚಾಣಕ್ಯ ನೀತಿ

Chanakya Niti About Friendship: ಆಚಾರ್ಯ ಚಾಣಕ್ಯ ಅವರು ತಮ್ಮ ನೀತಿಶಾಸ್ತ್ರ ಚಾಣಕ್ಯ ನೀತಿಯಲ್ಲಿ ಅನೇಕ ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಅಂತಹ ಕೆಲವು ನೀತಿಗಳನ್ನು ಅನುಸರಿಸಿದರೆ ಮನುಷ್ಯನು ಜೀವನದಲ್ಲಿ ಎಂದಿಗೂ ನಿರಾಶೆ ಅಥವಾ ವೈಫಲ್ಯವನ್ನು ಎದುರಿಸುವುದಿಲ್ಲ. ಆಚಾರ್ಯ ಚಾಣಕ್ಯರ ನೀತಿಗಳನ್ನು ಅನುಸರಿಸಿ ವಿಶ್ವದ ಅನೇಕ ಜನರು ಯಶಸ್ಸನ್ನು ಸಾಧಿಸಿದ್ದಾರೆ. ಚಾಣಕ್ಯ ನೀತಿಯಲ್ಲಿ ಅಂತಹ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಅದನ್ನು ಸ್ನೇಹ ಮಾಡುವಾಗ ಸಹ ನೆನಪಿನಲ್ಲಿಡಬೇಕು. ಸ್ನೇಹಿತರನ್ನು ಮಾಡಿಕೊಳ್ಳುವಾಗ ನೀವು ಈ ವಿಷಯಗಳನ್ನು ನಿರ್ಲಕ್ಷಿಸಿದರೆ ಮುಂದೊಂದು ದಿನ ನೀವು ಪಶ್ಚಾತ್ತಾಪ ಪಡಬೇಕಾಗಬಹುದು. 

ಇದನ್ನೂ ಓದಿ : 'ಸಂಸಪ್ತಕ ರಾಜಯೋಗ'ದಿಂದ ಈ 3 ರಾಶಿಯವರಿಗೆ ಭಾರೀ ಲಾಭ!

ಕುರುಡಾಗಿ ನಂಬಬೇಡಿ : ನಿಮ್ಮ ಸ್ನೇಹದಲ್ಲಿ ನಂಬಿಕೆಯನ್ನು ಹೊಂದಿರುವುದು ಅವಶ್ಯಕ, ಆದರೆ ಕುರುಡು ನಂಬಿಕೆ ಇರಬಾರದು. ಸ್ನೇಹ ಬೆಳೆಸಿದ ನಂತರ ಮೊದಲು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯವನ್ನು ನೀಡಬೇಕು. ಏಕೆಂದರೆ ನೀವು ಸ್ನೇಹಿತರಾದ ತಕ್ಷಣ ನೀವು ಕುರುಡಾಗಿ ನಂಬಿದರೆ ಅನೇಕ ಸಂದರ್ಭಗಳಲ್ಲಿ ಪಶ್ಚಾತ್ತಾಪ ಪಡಬೇಕಾಗಬಹುದು.

ತಪ್ಪನ್ನು ಬೆಂಬಲಿಸಬೇಡಿ : ಸ್ನೇಹದ ಮೊದಲ ತತ್ವವೆಂದರೆ ಪ್ರತಿ ಕೆಲಸದಲ್ಲಿ ನಿಮ್ಮ ಸ್ನೇಹಿತನನ್ನು ಬೆಂಬಲಿಸುವುದು. ಆದರೆ ತಪ್ಪು ಅಥವಾ ಕೆಟ್ಟ ಕೆಲಸವನ್ನು ಎಂದಿಗೂ ಬೆಂಬಲಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಚಾಣಕ್ಯ ನೀತಿಯ ಪ್ರಕಾರ, ಒಬ್ಬ ಒಳ್ಳೆಯ ಸ್ನೇಹಿತನು ತನ್ನ ಗೆಳೆಯ ಕೆಟ್ಟ ಕೆಲಸಗಳನ್ನು ಮಾಡದಂತೆ ತಡೆಯುತ್ತಾನೆ. 

ಭಾವನೆಗಳನ್ನು ಅರ್ಥಮಾಡಿಕೊಳ್ಳಿ : ಚಾಣಕ್ಯ ನೀತಿಯ ಪ್ರಕಾರ, ತಾನು ಮಾತ್ರ ಮಾತನಾಡಿ, ನಿಮಗೆ ಮಾತನಾಡಲು ಅವಕಾಶವನ್ನು ನೀಡದೇ ಇದ್ದರೆ ಅಂತಹ ವ್ಯಕ್ತಿಯೊಂದಿಗೆ ಎಂದಿಗೂ ಸ್ನೇಹ ಬೆಳೆಸಬಾರದು. ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ನಿಮ್ಮ ಮಾತನ್ನು ಎಚ್ಚರಿಕೆಯಿಂದ ಆಲಿಸುವ ಒಬ್ಬ ಒಳ್ಳೆಯ ಮತ್ತು ನಿಜವಾದ ಸ್ನೇಹಿತ ಜೀವನಕ್ಕೆ ಮುಖ್ಯ.

ಇದನ್ನೂ ಓದಿ : ಅನುಷ್ಕಾ ಶರ್ಮಾ ಹೆಸರಿರುವ ಟೀ ಶರ್ಟ್ ಧರಿಸಿದ ವಿರಾಟ್ ಕೊಹ್ಲಿ! ಕಾರಣವೂ ಇದೆ

ತೊಂದರೆಯಲ್ಲಿ ಸಹಾಯ : ನಿಜವಾದ ಸ್ನೇಹವು ಕಷ್ಟದಲ್ಲಿ ಎಂದಿಗೂ ಕೈ ಬಿಡುವುದಿಲ್ಲ. ತೊಂದರೆಯಲ್ಲಿ ನಿಮ್ಮನ್ನು ಬೆಂಬಲಿಸುವ ವ್ಯಕ್ತಿ ನಿಮ್ಮ ನಿಜವಾದ ಸ್ನೇಹಿತ. ಚಾಣಕ್ಯ ನೀತಿಯ ಪ್ರಕಾರ, ನಿಮ್ಮನ್ನು ತೊಂದರೆಯಲ್ಲಿ ಬಿಡುವವನು ಸ್ನೇಹಕ್ಕೆ ಅರ್ಹನಲ್ಲ. 

Disclaimer: ​ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ZEE KANNADA NEWS ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News