ಈ ರೀತಿ ಅನ್ನ ಬೇಯಿಸಿ ತಿಂದರೆ ಮಧುಮೇಹಿಗಳ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ..!

Diabetic patient food tips : ಮಧುಮೇಹ ಇದ್ದವರು ಅನ್ನವನ್ನು ತಿನ್ನಬಾರದು ಅಂತ ಹೇಳಾಗುತ್ತದೆ. ಇದಕ್ಕೆ ಕಾರಣ ಅಕ್ಕಿ ಹೆಚ್ಚಿನ ಗ್ಲೈಸೆಮಿಕ್ ಅನ್ನು ಹೊಂದಿದ್ದು ಅದು ರಕ್ತದಲ್ಲಿನ ಇಕ್ಕರೆಯನ್ನು ಸುಲಭವಾಗಿ ಹೆಚ್ಚಿಸುತ್ತದೆ. ಆದರೆ ಈ ಸಮಸ್ಯೆಯನ್ನು ನಿವಾರಿಸಲು ಒಂದು ಮಾರ್ಗವೂ ಇದೆ... ಏನದು..? ಬನ್ನಿ ತಿಳಿಯೋಣ..

Written by - Zee Kannada News Desk | Last Updated : Mar 10, 2024, 08:36 PM IST
  • ಮಧುಮೇಹ ಇದ್ದವರು ಅನ್ನವನ್ನು ತಿನ್ನಬಾರದು
  • ಈ ಸಮಸ್ಯೆಯನ್ನು ನಿವಾರಿಸಲು ಒಂದು ಮಾರ್ಗ ಇದೆ
  • ಅಕ್ಕಿಯನ್ನು ಸರಿಯಾಗಿ ಬೇಯಿಸಿದರೆ ಅದು ಸಮ್ಯಸ್ಯೆಯಾಗುವುದಿಲ್ಲ
ಈ ರೀತಿ ಅನ್ನ ಬೇಯಿಸಿ ತಿಂದರೆ ಮಧುಮೇಹಿಗಳ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ..! title=

Rice and Diabetes : ಮಧುಮೇಹವು ಒಂದು ಸಂಕೀರ್ಣ ಕಾಯಿಲೆಯಾಗಿದ್ದು ಅದು ಒಮ್ಮೆ ಸಂಭವಿಸಿದರೆ ಜೀವನಪರ್ಯಂತ ವಾಸಿಯಾಗುವುದಿಲ್ಲ. ಅದಕ್ಕಾಗಿ ಅದನ್ನು ಹತೋಟಿಗೆ ತರಲು ಮಧುಮೇಹಿಗಳು ತಾವು ತಿನ್ನುವ ಮತ್ತು ಕುಡಿಯುವದರ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಊಟ-ತಿಂಡಿಯಲ್ಲಿ ಎಚ್ಚರ ತಪ್ಪಿದರೆ ಆರೋಗ್ಯ ಹದಗೆಡುವುದು ಖಂಡಿತ. 

ಮಧುಮೇಹ ರೋಗಿಗಳಿಗೆ ಅನ್ನವನ್ನು ತಿನ್ನದಂತೆ ಸಲಹೆ ನೀಡಲಾಗುತ್ತದೆ. ಆದರೆ ಅನ್ನವು ಭಾರತೀಯ ಪಾಕಪದ್ಧತಿಯ ಅವಿಭಾಜ್ಯ ಅಂಗವಾಗಿದೆ. ನಮ್ಮ ದಿನನಿತ್ಯದ ಅಡುಗೆಯಲ್ಲಿ ಅಕ್ಕಿ ಮಾತ್ರವಲ್ಲದೆ ಅನ್ನದಿಂದ ತಯಾರಿಸಿದ ವಿವಿಧ ಭಕ್ಷ್ಯಗಳು ಸೇರಿವೆ. ಆದರೆ, ಮಧುಮೇಹಿಗಳು ಅನ್ನ ತಿನ್ನುವುದನ್ನು ಅಂತ ಹೇಳಾಗುತ್ತದೆ.  ನೀವು ಅಕ್ಕಿಯನ್ನು ಸರಿಯಾಗಿ ಬೇಯಿಸಿದರೆ ಅದು ಸಮ್ಯಸ್ಯೆಯಾಗುವುದಿಲ್ಲ.

ಇದನ್ನು ಓದಿ : Sidharth Malhotra : ಬ್ಲ್ಯಾಕ್ ಕೋಟ್ ನಲ್ಲಿ 'ಶೇರ್ ಶಾ' : ಫೋಟೋಸ್ ಇಲ್ಲಿವೆ

ನಿಮಗೆ ಅಥವಾ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಮಧುಮೇಹ ಇದ್ದರೆ, ಅಕ್ಕಿ ಅಥವಾ ಅಕ್ಕಿ ಆಧಾರಿತ ಉತ್ಪನ್ನಗಳನ್ನು ತಿನ್ನಬೇಡಿ ಎಂದು ನಿಮಗೆ ಹೇಳಲಾಗುತ್ತದೆ. ಆದರೆ ಹಾಗೆ ಮಾಡುವ ಅಗತ್ಯವಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅನ್ನ ಇಷ್ಟವಿದ್ದರೆ ಮಧುಮೇಹ ಇದ್ದರೂ ತಿನ್ನಬಹುದಂತೆ.

ಮಧುಮೇಹದಲ್ಲಿ ಅಕ್ಕಿಯನ್ನು ತಿನ್ನುವುದನ್ನು ನಿಷೇಧಿಸಲಾಗಿದೆ ಏಕೆಂದರೆ ಇದು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು ಅದು ರಕ್ತದಲ್ಲಿನ ಸಕ್ಕರೆಯನ್ನು ಸುಲಭವಾಗಿ ಹೆಚ್ಚಿಸುತ್ತದೆ. ಆದರೆ ಈ ಸಮಸ್ಯೆಯನ್ನು ನಿವಾರಿಸಲು ಒಂದು ಮಾರ್ಗವೂ ಇದೆ. ಅದು ಅನ್ನವನ್ನು ಸರಿಯಾಗಿ ಬೇಯಿಸುವುದು.. 

ಇದನ್ನು ಓದಿ : Aradhana Ram: ಕಾಟೇರ ಬೆಡಗಿಯ ಆರಾಧನಾ ಫಿಟ್‌ನೆಸ್ ಸೀಕ್ರೆಟ್‌ ರಿವೀಲ್!

ಅಕ್ಕಿ ಬೇಯಿಸುವುದು ಹೇಗೆ? 
- ಮೊದಲು ಕುಕ್ಕರ್‌ನಲ್ಲಿ ಅನ್ನವನ್ನು ಹಾಕಿ. ತೆರೆದ ಪಾತ್ರೆಯಲ್ಲಿ ಅಕ್ಕಿ ಬೇಯಿಸಿ. ಇದರಿಂದ ಹೆಚ್ಚು ಹೆಚ್ಚು ಬಳಕೆಯಾಗುತ್ತದೆ ಇದರಿಂದಾಗಿ ಪಿಷ್ಟ ಕಡಿಮೆ ಮಾಡಬಹುದು. 
- ಅಕ್ಕಿಯನ್ನು ಬೇಯಿಸುವ ಮೊದಲು ಚೆನ್ನಾಗಿ ಸ್ವಚ್ಛಗೊಳಿಸಿ. ಅಕ್ಕಿಯನ್ನು ನಾಲ್ಕೈದು ಬಾರಿ ನೀರಿನಿಂದ ತೊಳೆಯಿರಿ. ಅದು ಕೂಡ ಪಿಷ್ಟವನ್ನು ಕಡಿಮೆ ಮಾಡುತ್ತದೆ.
- ಅನ್ನದೊಂದಿಗೆ ಬೇಯಿಸಿದ ಮೊಟ್ಟೆ, ಚೀಸ್ ಮತ್ತು ತಾಜಾ ತರಕಾರಿಗಳನ್ನು ಬಳಸಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. 
- ಒಬ್ಬ ವ್ಯಕ್ತಿಗೆ ಮಧುಮೇಹ ಇದ್ದರೆ, ಅವನು ಅನ್ನವನ್ನು ತಿನ್ನುವುದನ್ನು ಕಡಿಮೆ ಮಾಡಬೇಕು. ಆದರೆ ಅನ್ನವನ್ನು ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯವಿಲ್ಲ.
- ನೀವು ಊಟದಲ್ಲಿ ಅನ್ನವನ್ನು ಸೇವಿಸಿದ ನಂತರ, ಸ್ವಲ್ಪ ವಾಕಿಂಗ್ ಮಾಡಿ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

(ನಿರಾಕರಣೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News