ಕಬ್ಬು ಕಟಾವು ವೇಳೆ ಹಾವು ಕಚ್ಚಿ ಕಾರ್ಮಿಕ ಸಾವು

ಕಬ್ಬು ಕಟಾವು ಸಂದರ್ಭದಲ್ಲಿ ಹಾವು ಕಚ್ಚಿ ಕಾರ್ಮಿಕ ಸಾವಿಗಿಡಾಗಿರುವ ಘಟನೆ ತಾಲೂಕಿನ ಕಟಗೇರಿ ಗ್ರಾಮದಲ್ಲಿ ನಡೆದಿದೆ.

Written by - Zee Kannada News Desk | Last Updated : Nov 30, 2022, 07:55 PM IST
  • ಹಾವು ಕಡೆದ ತೀವ್ರತೆಗೆ ಮೃತ ವ್ಯಕ್ತಿಯ ಬಲಗೈಯಲ್ಲಿ ಹಾವಿನ ಹಲ್ಲು ಮುರಿತ
  • ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
  • ಕಟಗೇರಿ ಗ್ರಾಮದಿಂದ ಅಥಣಿ ಪಟ್ಟಣದ ಆಸ್ಪತ್ರೆ ಸೇರಿಸುವ ದಾರಿ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ
ಕಬ್ಬು ಕಟಾವು ವೇಳೆ ಹಾವು ಕಚ್ಚಿ ಕಾರ್ಮಿಕ ಸಾವು title=

ಚಿಕ್ಕೋಡಿ: ಕಬ್ಬು ಕಟಾವು ಸಂದರ್ಭದಲ್ಲಿ ಹಾವು ಕಚ್ಚಿ ಕಾರ್ಮಿಕ ಸಾವಿಗಿಡಾಗಿರುವ ಘಟನೆ ತಾಲೂಕಿನ ಕಟಗೇರಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: Voter ID Scam : ಚಿಲುಮೆ ಸಂಸ್ಥೆ ಕೇಸ್ : ಮತ್ತೋರ್ವ ಆರೋಪಿ ಬಂಧಿಸಿದ ಪೊಲೀಸರು

ಮೃತ ದುರ್ದೈವಿ ನಿತೇಶ್ ಬಾಬು ಪೂಜಾರಿ (೩೦) ಅಥಣಿ ತಾಲ್ಲೂಕಿನ ಹಣಮಾಪುರ ಗ್ರಾಮಸ್ಥರು ಎಂದು ಗುರುತಿಸಲಾಗಿದೆ.ಕಳೆದ ನಾಲ್ಕು ವರ್ಷದಿಂದ ಕಟಗೇರಿ ಗ್ರಾಮದಲ್ಲಿ ವಾಸವಾಗಿದ್ದು ಎಂದಿನಂತೆ ಕಬ್ಬು ಕಟಾವು ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.ಹಾವು ಕಡೆತ ತೀವ್ರತೆಗೆ ಹಾವಿನ ಒಂದು ಹಲ್ಲು ಮೃತ ನಿತೇಶ್ ಬಲಗೈಯಲ್ಲಿ ಮುರಿದ ಪರಿಣಾಮ ಹಾವು ಕಚ್ಚಿ ಇಪ್ಪತ್ತು ನಿಮಿಷದಲ್ಲಿ ನೀತೇಶ ಪ್ರಾಣ ಪಕ್ಷಿ ಹಾರಿಹೊಗಿದೆ.

ಇದನ್ನೂ ಓದಿ: ಪ್ರೇಯಸಿ ಜೊತೆ ಐಷಾರಾಮಿ ಜೀವನ ನಡೆಸೋಕೆ ಎಟಿಎಂ ದೋಚಿದ್ದ ಸೆಕ್ಯೂರಿಟಿ ಗಾರ್ಡ್ ಬಂಧನ

ಕಟಗೇರಿ ಗ್ರಾಮದಿಂದ ಅಥಣಿ ಪಟ್ಟಣದ ಆಸ್ಪತ್ರೆ ಸೇರಿಸುವ ದಾರಿ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ದೂರವಾಣಿ ಮೂಲಕ ಮಾಹಿತಿ ನೀಡಿದ್ದು. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News