ಟ್ರ್ಯಾಕ್ಟರ್ ಟಿಲ್ಲರ್ ಸಮೇತ ಪಲ್ಟಿ! ಮೂವರು ಪ್ರಾಣಾಯದಿಂದ ಪಾರು

ಲಕ್ಷ್ಮೇಶ್ವರ ಮೂಲಕ ಕುಸುಗಲ್ ಗ್ರಾಮಕ್ಕೆ ಹೊರಟಿದ್ದ ಸೊಪ್ಪೆ ತುಂಬಿದ ಟ್ರ್ಯಾಕ್ಟರ್ ಕುಂದಗೋಳ ಕಡಪಟ್ಟಿ ದಾರಿಯಲ್ಲಿ  ಪಟ್ಟಣ ಪಂಚಾಯಿತಿ ಘನ ತ್ಯಾಜ್ಯ ವಿಲೇವಾರಿ ಘಟಕ ಬಳಿ ಪಲ್ಟಿ ಆಗಿದೆ. ಈ ಸಂದರ್ಭದಲ್ಲಿ  ಟ್ರ್ಯಾಕ್ಟರ್ ಇಂಜಿನ್ ಮೇಲೆ ಕುಳಿತು ಸಾಗುತ್ತಿದ್ದ ಮೂರು ಮಂದಿ ಪ್ರಾಣಾಪಾಯದಿಂದ ಪಾರಾಗಿರುವುದು ದೇವರು ಇದ್ದಾನೆಂಬುದಕ್ಕೇ ಸಾಕ್ಷಿ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. 

Written by - Yashaswini V | Last Updated : May 26, 2023, 08:11 AM IST
  • ಟ್ರ್ಯಾಕ್ಟರ್ ಟಿಲ್ಲರ್ ಸಮೇತ ಪಲ್ಟಿಯಾದರೂ ಕೂಡ ಈ ಮೂವರೇನೋ ಬದುಕುಳಿದರು.
  • ಜೆಸಿಬಿ ಸಹಾಯದಿಂದ ಪಲ್ಟಿ ಹೊಡೆದಿದ್ದ ಟ್ರ್ಯಾಕ್ಟರ್ ಟಿಲ್ಲರ್ ಅನ್ನು ಮೇಲೆತ್ತಿ ಲಕ್ಷ್ಮೇಶ್ವರ ರೈತರು ತೆಗೆದುಕೊಂಡು ಹೋದರೂ.
  • ಆದರೆ, ಈ ರಸ್ತೆಯಲ್ಲಿ ಪ್ರತಿ ದಿನ ಓಡಾಡುವವರ ಸ್ಥಿತಿ ಏನು? ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸರಿಯಾಗಿ ಗಮನಹರಿಸುತ್ತಿಲ್ಲ - ಗ್ರಾಮಸ್ಥರು
ಟ್ರ್ಯಾಕ್ಟರ್ ಟಿಲ್ಲರ್ ಸಮೇತ ಪಲ್ಟಿ! ಮೂವರು ಪ್ರಾಣಾಯದಿಂದ ಪಾರು title=

Road Accident: ಗೋವಿನಜೋಳದ ಸೊಪ್ಪೇ ತುಂಬಿಕೊಂಡು ಹೊರಟ್ಟಿದ್ದ ಟ್ರ್ಯಾಕ್ಟರ್ ಟಿಲ್ಲರ್ ಸಮೇತ ಪಲ್ಟಿಯಾಗಿರುವ ಘಟನೆ  ನಿನ್ನೆ (25 ಮೇ, ಗುರುವಾರ)  ಸಾಯಂಕಾಲ ಕುಂದಗೋಳ ಕಡಪಟ್ಟಿ ನಡೆದಿದೆ. ಟ್ರ್ಯಾಕ್ಟರ್ ಟಿಲ್ಲರ್ ಸಮೇತ ಪಲ್ಟಿಯಾದರೂ ಸಹ ಅದರಲ್ಲಿದ್ದ ಮೂರು ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಲಕ್ಷ್ಮೇಶ್ವರ ಮೂಲಕ ಕುಸುಗಲ್ ಗ್ರಾಮಕ್ಕೆ ಹೊರಟಿದ್ದ ಸೊಪ್ಪೆ ತುಂಬಿದ ಟ್ರ್ಯಾಕ್ಟರ್ ಕುಂದಗೋಳ ಕಡಪಟ್ಟಿ ದಾರಿಯಲ್ಲಿ  ಪಟ್ಟಣ ಪಂಚಾಯಿತಿ ಘನ ತ್ಯಾಜ್ಯ ವಿಲೇವಾರಿ ಘಟಕ ಬಳಿ ಪಲ್ಟಿ ಆಗಿದೆ. ಈ ಸಂದರ್ಭದಲ್ಲಿ  ಟ್ರ್ಯಾಕ್ಟರ್ ಇಂಜಿನ್ ಮೇಲೆ ಕುಳಿತು ಸಾಗುತ್ತಿದ್ದ ಮೂರು ಮಂದಿ ಪ್ರಾಣಾಪಾಯದಿಂದ ಪಾರಾಗಿರುವುದು ದೇವರು ಇದ್ದಾನೆಂಬುದಕ್ಕೇ ಸಾಕ್ಷಿ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. 

ಇದನ್ನೂ ಓದಿ- ಚಿಕ್ಕಬಳ್ಳಾಫುರದಲ್ಲಿ ಅನ್ಯಕೋಮಿನ ಯುವಕರಿಂದ ನೈತಿಕ ಪೊಲೀಸ್ ಗಿರಿ

ಆದರೆ, ಟ್ರ್ಯಾಕ್ಟರ್ ಟಿಲ್ಲರ್ ಸಮೇತ ಪಲ್ಟಿಯಾದರೂ ಕೂಡ ಈ ಮೂವರೇನೋ ಬದುಕುಳಿದರು. ಜೆಸಿಬಿ ಸಹಾಯದಿಂದ ಪಲ್ಟಿ ಹೊಡೆದಿದ್ದ ಟ್ರ್ಯಾಕ್ಟರ್ ಟಿಲ್ಲರ್ ಅನ್ನು ಮೇಲೆತ್ತಿ ಲಕ್ಷ್ಮೇಶ್ವರ ರೈತರು ತೆಗೆದುಕೊಂಡು ಹೋದರೂ. ಆದರೆ, ಈ ರಸ್ತೆಯಲ್ಲಿ ಪ್ರತಿ ದಿನ ಓಡಾಡುವವರ ಸ್ಥಿತಿ ಏನು? ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸರಿಯಾಗಿ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. 

ಇದನ್ನೂ ಓದಿ- Karnataka cabinet expansion: ಶನಿವಾರದಂದು 24 ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ

ಕುಂದಗೋಳ ತಾಲೂಕಿನ ರಸ್ತೆ ಅವ್ಯವಸ್ಥೆ ಪ್ರಶ್ನಿಸಿದರೆ ರಸ್ತೆ ನಾಳೆ ಮಾಡ್ತೇವಿ, ಇವತ್ತ್ ಮಾಡ್ತೇವಿ, ಟೆಂಡರ್ ಬಂದಿಲ್ಲಾ, ಅನುದಾನ ಬಂದಿಲ್ಲಾ ಅಂತ್ಹೇಳಿ ದಿನಕ್ಕೊಂದು ಕಥಿ ಹೇಳಿ ಪರಸ್ಥಳದ ಮಂದಿ ಮುಂದ್ ತಾಲೂಕಿನ ಮರ್ಯಾದೆ ಹಾಗೂ ನಮ್ಮ ಜನಪ್ರತಿನಿಧಿಗಳ ಮರ್ಯಾದೆ ತಗಿಬ್ಯಾಡ್ರೀ. ಆದಷ್ಟೂ ಬೇಗ ಈ ರಸ್ತೆ ಅಭಿವೃದ್ಧಿಗೆ ಕ್ರಮ ತಗೋರಿ ಅಂತಾ ಆಡಳಿತ ವ್ಯವಸ್ಥೆಗೆ ಛೀಮಾರಿ ಹಾಕಿದ್ದಾರೆ ಈ ಭಾಗದ ಜನರು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News