ಕಿಡ್ನಾಪ್ ಆಗಿದ್ದ ಐಟಿ ಅಧಿಕಾರಿಯ ಮಗ ಶವವಾಗಿ ಪತ್ತೆ

ಆದಾಯ ತೆರಿಗೆ ಅಧಿಕಾರಿ ನಿರಂಜನ್ ಪುತ್ರನ ಕೊಲೆ.

Last Updated : Sep 22, 2017, 11:42 AM IST
ಕಿಡ್ನಾಪ್ ಆಗಿದ್ದ ಐಟಿ ಅಧಿಕಾರಿಯ ಮಗ ಶವವಾಗಿ ಪತ್ತೆ title=

ಬೆಂಗಳೂರು: ಕಳೆದ ಹತ್ತು ದಿನಗಳ ಹಿಂದೆ ಅಪಹರಣಗೊಂಡಿದ್ದ ಐಟಿ ಅಧಿಕಾರಿ ನಿರಂಜನ್ ಅವರ ಮಗ ಶರತ್ ನ ಶವ ಇಂದು ಬೆಳಿಗ್ಗೆ ರಾಮೊಹಳ್ಳಿ ಕೆರೆಯಲ್ಲಿ ಪತ್ತೆಯಾಗಿದೆ. 

ಬೆಂಗಳೂರಿನ ಹೆಚ್ ಎಂಟಿ ಭವನದಲ್ಲಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ನಿರಂಜನ್ ಅವರ ಪುತ್ರ 19 ವರ್ಷದ ಶರತ್ ಸೆ. 12 ರಂದು ಕಣ್ಮರೆಯಾಗಿದ್ದ. 12ನೇ ತಾರೀಖಿನಂದು ಸಂಜೆ ಸ್ನೇಹಿತರಿಗೆ ತನ್ನ ಹೊಸ ಬೈಕ್ ತೋರಿಸಿ ಬರುವುದಾಗಿ ಹೊರಟಿದ್ದ ಶರತ್ ನಿಗೂಢವಾಗಿ ನಾಪತ್ತೆಯಾಗಿದ್ದ. 

ಮರುದಿನ ನಿರಂಜನ್ ಅವರ ವಾಟ್ಸ್ ಆಪ್ ನಂಬರಿಗೆ, ಶರತ್ ತನ್ನನ್ನು ಯಾರೋ ಅಪಹರಿಸಿದ್ದು, 50 ಲಕ್ಷ ನೀಡಿ ಬಿದಿಸುಕೊಂಡು ಹೋಗುವಂತೆಯೂ, ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದಂತೆಯೂ ಮನವಿ ಮಾಡಿರುವ ವಿಡಿಯೋ ಮೆಸೇಜ್ ಬಂದಿತ್ತು.

ವಿಡಿಯೋ ಮೆಸೇಜ್ ನೋಡಿದ ನಿರಂಜನ್ ಪೋಲಿಸರಿಗೆ ದೂರು ನೀಡಿದ್ದರು. ಐಟಿ ಅಧಿಕಾರಿಯ ಮಗ ಶರತ್ ಕಿಡ್ನಾಪ್ ಪ್ರಕರಣದ ತನಿಖೆ ಚುರುಕುಗೊಳಿಸಿದ್ದ ಪೊಲೀಸರು 4 ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದರು. ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದರು. ಈ ಮಧ್ಯೆ ಕೆಂಗೇರಿ ಬಳಿಯ ರಾಮೋಹಳ್ಳಿ ಕೆರೆಯಲ್ಲಿ ಶರತ್ ಮೃತದೇಹ ಪತ್ತೆಯಾಗಿದೆ. 

Trending News