ಬಿಜೆಪಿ ಗೆಲುವಿನ ರಥ ಈಗ ಕರ್ನಾಟಕದ ಕಡೆಗೆ : ಅಮಿತ್ ಶಾ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿಜಯದ ನಂತರ ಪಕ್ಷಕ್ಕೆ ದಕ್ಷಿಣದ ಬಾಗಿಲು ತೆರೆಯುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ತೆರವುಗೊಳಿಸಿ, ಬಿಜೆಪಿ ತನ್ನ ಸರ್ಕಾರ ರಚಿಸುವ ಸಮಯ ಬರುತ್ತಿದೆ ಎಂದು ಶಾ ಹೇಳಿದರು.

Last Updated : Apr 18, 2018, 03:16 PM IST
ಬಿಜೆಪಿ ಗೆಲುವಿನ ರಥ ಈಗ ಕರ್ನಾಟಕದ ಕಡೆಗೆ : ಅಮಿತ್ ಶಾ title=
Pic: ANI

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಿಜೆಪಿ ಗೆಲುವಿನ ರಥ ಈಗ ಕರ್ನಾಟಕ ಕಡೆಗೆ ತಿರುಗಿದ್ದು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿಜಯದ ನಂತರ ಪಕ್ಷಕ್ಕೆ ದಕ್ಷಿಣದ ಬಾಗಿಲು ತೆರೆಯುತ್ತದೆ ಎಂದು ಹೇಳಿದರು.

ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ರಾಜ್ಯದಲ್ಲಿ ಕಾಂಗ್ರೆಸ್ ತೆರವುಗೊಳಿಸಿ, ಬಿಜೆಪಿ ತನ್ನ ಸರ್ಕಾರ ರಚಿಸುವ ಸಮಯ ಬರುತ್ತಿದೆ ಎಂದ ಅಮಿತ್ ಶಾ, ಲಕ್ಷಾಂತರ ವರ್ಷಗಳ ಕಾಲದಿಂದಿರುವ ಮಹಾನ್ ಹಿಂದೂ ಸಂಸ್ಕೃತಿ ಪ್ರಪಂಚಕ್ಕೆ ಶಾಂತಿಯ ಸಂದೇಶ ನೀಡುತ್ತದೆ. ಆದರೆ ಕಾಂಗ್ರೆಸ್ ಅದನ್ನು ಭಯೋತ್ಪಾದನೆ ಜೊತೆಗೆ ಹೋಲಿಸುತ್ತದೆ. ಭಯೋತ್ಪಾದನೆಯೊಂದಿಗೆ ಹಿಂದೂಗಳನ್ನು ಸಂಪರ್ಕಿಸುವ ಮೂಲಕ ಕಾಂಗ್ರೆಸ್ ಪಾಪ ಮಾಡಿದೆ ಎಂದರು. 10 ಸದಸ್ಯರೊಂದಿಗೆ ಪಕ್ಷದ ರಚನೆಯನ್ನು ಪ್ರಾರಂಭಿಸಿದ್ದೇವೆ, ಆದರೆ ಇಂದು ನಾವು 11 ಸಾವಿರ ಕೋಟಿ ಕಾರ್ಯಕರ್ತರ ಶಕ್ತಿಯನ್ನು ನೀಡುತ್ತೇವೆ ಎಂದು ಶಾ ಇದೇ ಸಂದರ್ಭದಲ್ಲಿ ತಿಳಿಸಿದರು.

Trending News