ಒಂದೇ ಮಾದರಿ ಸೈಬರ್ ಅಪರಾಧ ಪ್ರಕರಣಗಳ ತನಿಖೆ ನಡೆಸಲು ಡಿಸಿಪಿಗಳಿಗೆ ಟಾಸ್ಕ್..! 

ರಾಜಧಾನಿಯಲ್ಲಿ ದಾಖಲಾಗುತ್ತಿರುವ ಒಂದೇ‌‌ ಮಾದರಿಯ ವಿವಿಧ ಸೈಬರ್ ಅಪರಾಧ ಪ್ರಕರಣಗಳ ಪತ್ತೆಗಾಗಿ ಪ್ರತ್ಯೇಕವಾಗಿ ಡಿಸಿಪಿಗಳಿಗೆ ಕೂಲಂಕುಶ ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು‌ ಆಯುಕ್ತರು ತಿಳಿಸಿದ್ದಾರೆ.

Written by - Krishna N K | Last Updated : Nov 17, 2023, 09:57 PM IST
  • ರಾಜಧಾನಿಯಲ್ಲಿ ಅಧಿಕವಾಗುತ್ತಿವೆ ಸೈಬರ್ ಅಪರಾಧಗಳು
  • ಸೈಬರ್ ಅಪರಾಧಗಳನ್ನ‌ ಹತ್ತಿಕ್ಕಲು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮುಂದು
  • ಒಂದೇ ಮಾದರಿ ಸೈಬರ್ ಅಪರಾಧ ಪ್ರಕರಣಗಳ ತನಿಖೆ ನಡೆಸಲು ಡಿಸಿಪಿಗಳಿಗೆ ಟಾಸ್ಕ್
ಒಂದೇ ಮಾದರಿ ಸೈಬರ್ ಅಪರಾಧ ಪ್ರಕರಣಗಳ ತನಿಖೆ ನಡೆಸಲು ಡಿಸಿಪಿಗಳಿಗೆ ಟಾಸ್ಕ್..!  title=

ಬೆಂಗಳೂರು : ರಾಜಧಾನಿಯಲ್ಲಿ ಅಧಿಕವಾಗುತ್ತಿರುವ ಸೈಬರ್ ಅಪರಾಧಗಳನ್ನ‌ ಹತ್ತಿಕ್ಕಲು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮುಂದಾಗಿದ್ದು ಈ ನಿಟ್ಟಿನಲ್ಲಿ‌ ಡಿಸಿಪಿಗಳಿಗೆ ಹೊಸ ಜವಾಬ್ದಾರಿ ವಹಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ‌ ಆಧಾರ್ ಕಾರ್ಡ್ ಎನೇಬಲ್ ಸಿಸ್ಟಂ (ಎಇಪಿಎಸ್)ನಡಿ ಬಯೊಮೆಟ್ರಿಕ್ ಮೂಲಕ ಬ್ಯಾಂಕ್ ಖಾತೆಯಲ್ಲಿ ಹಣ ಲಪಾಟಿಸುವ ಟ್ರೆಂಡ್ ಮಾಡಿಕೊಂಡಿರುವ ಸೈಬರ್ ಖದೀಮರು ಬೆಂಗಳೂರಿನಲ್ಲಿ‌ 116 ಪ್ರಕರಣ ದಾಖಲಾಗಿವೆ. ಇಂತಹ ಪ್ರಕರಣ ನಿಯಂತ್ರಿಸಿ ಆರೋಪಿಗಳ ಪತ್ತೆ‌ ಮಾಡುವಂತೆ ನಗರ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಅವರಿಗೆ ಟಾಸ್ಕ್ ಕೊಡಲಾಗಿದೆ.

ಇದನ್ನೂ ಓದಿ: ಗೋಲ್‌ಮಾಲ್ ಆರೋಪ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ದೂರು ದಾಖಲು

ನಗರದಲ್ಲಿ ದಾಖಲಾಗಿರುವ ಕೊರಿಯರ್ ಅಥವಾ ಗಿಫ್ಟ್ ಬಂದಿದೆ ಎಂದೇಳಿ ಶುಲ್ಕ ಪಡೆದು ವಂಚನೆ‌ ಪ್ರಕರಣಗಳ ಪತ್ತೆಗಾಗಿ‌ ಪೂರ್ವ ವಿಭಾಗದ‌ ಡಿಸಿಪಿ‌ ಕುಲದೀಪ್‌ ಕುಮಾರ್ ಜೈನ, ಆನ್‌ಲೈನ್‌ ಟ್ರೇಡಿಂಗ್ ಪ್ರಕರಣ ಪತ್ತೆಗಾಗಿ ದಕ್ಷಿಣ ವಿಭಾಗದ ಡಿಸಿಪಿ ಶಿವರಾಜ್‌‌ ದೇವರಾಜ್‌ ಹಾಗೂ ಖಾಸಗಿ ವಿಡಿಯೋ ಆಥವಾ ಭಾವಚಿತ್ರ ಇಟ್ಟುಕೊಂಡು ಧಮಕಿ ಹಾಕಿ ಹಣದ ಬೇಡಿಕೆ‌‌ ಪ್ರಕರಣಗಳ ಪತ್ತೆಗಾಗಿ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಅವರಿಗೆ ವಹಿಸಲಾಗಿದೆ.

ನಗರದಲ್ಲಿ ದಾಖಲಾಗುತ್ತಿರುವ ಒಂದೇ‌‌ ಮಾದರಿಯ ವಿವಿಧ ಸೈಬರ್  ಅಪರಾಧ ಪ್ರಕರಣಗಳ ಪತ್ತೆಗಾಗಿ ಪ್ರತ್ಯೇಕವಾಗಿ ಡಿಸಿಪಿಗಳಿಗೆ ಕೂಲಂಕುಶ ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು‌ ಆಯುಕ್ತರು ತಿಳಿಸಿದ್ದಾರೆ.
ಈ ಬಗ್ಗೆ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಪ್ರತಿಕ್ರಿಯಿಸಿದ್ದು, ಆಧಾರ್ ಕಾರ್ಡ್ ಎನೇಬಲ್ ಸಿಸ್ಟಂ ವಂಚನೆ‌ ಪ್ರಕರಣಗಳ‌ ಸಮಗ್ರ ತನಿಖೆ‌ ನಡೆಸುವಂತೆ ಆಯುಕ್ತರು ಸೂಚಿಸಿದ್ದಾರೆ. ನಗರದಲ್ಲಿ ಎಲ್ಲೆಲ್ಲಿ ಎಇಪಿಎಸ್ ವಂಚನೆ‌ ಪ್ರಕರಣಗಳ ಬಗ್ಗೆ ಇನ್ನಷ್ಟೇ ಮಾಹಿತಿ ಸಂಗ್ರಹಿಸಬೇಕಿದೆ. ಮೋಸ ಮಾಡಲು ವಂಚಕರು ಬಳಸಿಕೊಂಡ ವಿಧಾನದ ಕುರಿತ‌ ಪ್ರಕರಣಗಳನ್ನ ಅಧ್ಯಯನ‌ ನಡೆಸಲಾಗುವುದು ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News