ಸುಪ್ರೀಂ ಮೈತ್ರಿ ಸರ್ಕಾರದ ಪರವಾಗಿ ತೀರ್ಪು ನೀಡಲಿದೆ ಎನ್ನುವುದು ಕೇವಲ ಭ್ರಮೆ -ಯಡಿಯೂರಪ್ಪ

ಈಗಾಗಲೇ ಸುಪ್ರೀಂಕೋರ್ಟ್ ವಿಪ್ ಅಧಿಕಾರಕ್ಕೆ ಯಾವುದೇ ಕಿಮ್ಮತ್ತು ಇಲ್ಲದಂತೆ ಮಾಡಿದೆ ಇನ್ನು ಸೋಮವಾರದಂದು ಮೈತ್ರಿ ಸರ್ಕಾರದ ಪರವಾಗಿ ತೀರ್ಪು ಬರುತ್ತದೆ ಎನ್ನುವುದು ಕೇವಲ ಭ್ರಮೆ ಎಂದು ವಿಪಕ್ಷದ ನಾಯಕ ಯಡಿಯೂರಪ್ಪ ಹೇಳಿದರು.

Last Updated : Jul 20, 2019, 04:22 PM IST
ಸುಪ್ರೀಂ ಮೈತ್ರಿ ಸರ್ಕಾರದ ಪರವಾಗಿ ತೀರ್ಪು ನೀಡಲಿದೆ ಎನ್ನುವುದು ಕೇವಲ ಭ್ರಮೆ -ಯಡಿಯೂರಪ್ಪ  title=
file photo

ಬೆಂಗಳೂರು: ಈಗಾಗಲೇ ಸುಪ್ರೀಂಕೋರ್ಟ್ ವಿಪ್ ಅಧಿಕಾರಕ್ಕೆ ಯಾವುದೇ ಕಿಮ್ಮತ್ತು ಇಲ್ಲದಂತೆ ಮಾಡಿದೆ ಇನ್ನು ಸೋಮವಾರದಂದು ಮೈತ್ರಿ ಸರ್ಕಾರದ ಪರವಾಗಿ ತೀರ್ಪು ಬರುತ್ತದೆ ಎನ್ನುವುದು ಕೇವಲ ಭ್ರಮೆ ಎಂದು ವಿಪಕ್ಷದ ನಾಯಕ ಯಡಿಯೂರಪ್ಪ ಹೇಳಿದರು.

ಶನಿವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ವೈ' ರಾಜ್ಯ ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ವಿಪ್ ಅಧಿಕಾರದ ಬಗ್ಗೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದಾರೆ. ಆದರೆ ಅತೃಪ್ತ ಸದಸ್ಯರನ್ನು ಸದನಕ್ಕೆ ಬರುವ ಹಾಗೆ ಒತ್ತಾಯಿಸುವಂತಿಲ್ಲ ಎಂದು ಹೇಳಿದೆ.ಈ ಹಿನ್ನಲೆಯಲ್ಲಿ ಇನ್ನು ಸೋಮವಾರದಂದು ಸಮ್ಮಿಶ್ರ ಸರ್ಕಾರದ ಪರವಾಗಿ ತೀರ್ಪು ಬರಲಿದೆ ಎನ್ನುವುದು ಕೇವಲ ಭ್ರಮೆ ಎಂದು ಹೇಳಿದರು.

ಇನ್ನು ಎಚ್,ವಿಶ್ವನಾಥ್ ಮೇಲೆ ಸಾರಾ ಮಹೇಶ್ ಮಾಡಿರುವ ಆರೋಪದ ಕುರಿತಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ ' ಸಾ.ರಾ.ಮಹೇಶ್ ವಿರುದ್ಧ ವಿಶ್ವನಾಥ್ ಹಕ್ಕು ಚ್ಯುತಿ ಮಂಡಿಸಲಿದ್ದಾರೆ ಎಂದು ಹೇಳಿದರು.

Trending News