Prajwal Revanna Case : ಲೈಂಗಿಕ ದೌರ್ಜನ್ಯ, ವಿಡಿಯೋ ಪ್ರಕರಣ : ಅಪ್ಪ-ಮಗನಿಗೆ ಎಸ್‌ಐಟಿ ನೋಟಿಸ್‌

Prajwal Revanna Case : ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಲೈಂಗಿಕ ದೌರ್ಜನ್ಯ ಕೇಸ್ ಸಂಬಂಧ ಅಪ್ಪ ಮತ್ತು ಮಗನಿಗೆ ಎಸ್ಐಟಿ ನೋಟಿಸ್ ನೀಡಿದೆ ತುರ್ತು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಸೂಚಿಸಿದ್ದು, ಅಧಿಕಾರಿಗಳು ತನಿಖೆಯನ್ನ ತೀವ್ರಗೊಳಿಸಿದ್ದಾರೆ. ಹಾಗಾದ್ರೆ ಪೆನ್ ಡ್ರೈವ್ ಪ್ರಕರಣದ ತನಿಖೆ ಹೇಗಿದೆ ಗೊತ್ತಾ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.  

Written by - VISHWANATH HARIHARA | Edited by - Krishna N K | Last Updated : May 1, 2024, 07:15 PM IST
    • ಪ್ರಜ್ವಲ್ ರೇವಣ್ಣ ವಿರುದ್ದದ ಲೈಂಗಿಕ ದೌರ್ಜನ್ಯ ಕೇಸ್
    • ಅಪ್ಪ ಮತ್ತು ಮಗನಿಗೆ ಎಸ್ಐಟಿ ನೋಟಿಸ್ ನೀಡಿದೆ
    • ಪ್ರಕರಣದ ತನಿಖೆ ಹೇಗಿದೆ ಗೊತ್ತಾ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Prajwal Revanna Case : ಲೈಂಗಿಕ ದೌರ್ಜನ್ಯ, ವಿಡಿಯೋ ಪ್ರಕರಣ : ಅಪ್ಪ-ಮಗನಿಗೆ ಎಸ್‌ಐಟಿ ನೋಟಿಸ್‌ title=

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಮಾಜಿ ಸಚಿವ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ಸಂಬಂಧ ತಂದೆ ಮಗನ ಮೇಲೆ ಎಫ್ಐಆರ್ ದಾಖಲಾಗಿದ್ದು, ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ಬುಲಾವ್ ನೀಡಿದ್ದಾರೆ.‌ ನೋಟಿಸ್ ತಲುಪಿದ ಬಳಿಕ ತುರ್ತಾಗಿ ಎಸ್ಐಟಿ ಮುಂದೆ ಹಾಜರಾಗಲು ಅಧಿಕಾರಿಗಳು ಸೂಚಿಸಿದ್ದಾರೆ.  ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ. ಪರಮೇಶ್ವರ್ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ತನಿಖೆ ಕೂಡ ತೀವ್ರಗೊಂಡಿದೆ. ಏಕಾಏಕಿ ಯಾರನ್ನೂ ಬಂಧಿಸಲು ಆಗುವುದಿಲ್ಲ. ಸಾಕ್ಷ್ಯ ಪುರಾವೆಗಳನ್ನ ಸಂಗ್ರಹಿಸಬೇಕಿದೆ ಎಂದಿದ್ದಾರೆ‌.

ಇನ್ನೂ ಎಸ್ಐಟಿ ಅಧಿಕಾರಿಗಳು ಹಾಸನ ಜಿಲ್ಲೆ ಹೊಳೆನರಸೀಪುರದ ರೇವಣ್ಣ ಮನೆಗೆ ಹಾಗೂ ಮೊಬೈಲ್ ವಾಟ್ಸಪ್ ಮೂಲಕ ನೋಟಿಸ್ ತಲುಪಿಸಿದ್ದಾರೆ. ಎಸ್ಐಟಿ ತಂಡ ನೋಟಿಸ್ ನೀಡಿದ್ದರೂ ಕೂಡ ರೇವಣ್ಣ ಇಂದು ವಿಚಾರಣೆಗೆ ಗೈರಾಗಿದ್ದಾರೆ.‌ ಹೊಳೆನರಸೀಪುರದ ಮನೆಯಲ್ಲಿ ಪೂಜೆ ಇಟ್ಕೊಂಡಿದ್ದ ರೇವಣ್ಣ, ನೋಟಿಸ್ ಬಗ್ಗೆ ವಕೀಲರ ಜೊತೆ ಸಮಾಲೋಚನೆ ನಡೆಸಿ ನಂತರ ಉತ್ತರಿಸುವುದಾಗಿ ತಿಳಿಸಿದ್ದಾರೆ. ಇನ್ನೂ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದು, ವಾಟ್ಸಪ್ ಮೂಲಕ ನೋಟಿಸ್ ರವಾನೆ ಮಾಡಿದ್ದಾರೆ.‌ ಪ್ರಜ್ವಲ್ ರೇವಣ್ಣ ಮೇ ಮೂರರಂದು ವಾಪಸ್ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಆ ಬಳಿಕ ಮೇ 4 ರಂದು ತಂದೆ ಮಗ ಎಸ್ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ ನಡೆಸಿದ ಆರೋಪಿ ಆತ್ಮಹತ್ಯೆ ! ಪೋಲೀಸ್ ಲಾಕಪ್ ನಲ್ಲಿಯೇ ನೇಣಿಗೆ ಶರಣು

ಇನ್ನೊಂದೆಡೆ ಎಸ್ಐಟಿ ಅಧಿಕಾರಿಗಳು ಕೂಡ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ವಿಡಿಯೋ ಸಂಬಂಧ ತನಿಖೆಯನ್ನ ತೀವ್ರಗೊಳಿಸಿದ್ದಾರೆ. ಪ್ರಕರಣದ ಸಲುವಾಗಿ ಎಸ್ಐಟಿಯಲ್ಲಿ ಐದು ತಂಡಗಳು ರಚನೆಯಾಗಿದ್ದು, ಪ್ರತಿಯೊಂದು ತಂಡಕ್ಕೂ ಪ್ರತ್ಯೇಕ ಜವಾಬ್ದಾರಿ ನೀಡಲಾಗಿದೆ. ಇಬ್ಬರು ಎಸ್ ಪಿಗಳು ಹಾಗೂ ಮೂವರು ಡಿವೈಎಸ್ ಪಿಗಳ ಐದು ತಂಡ ರಚಿಸಲಾಗಿದೆ. ಒಂದು ಟೀಂ ಸಂತ್ರಸ್ಥೆಯರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ರೆ, ಮತ್ತೊಂದು ತಂಡ ಟೆಕ್ನಿಕಲ್ ಸಾಕ್ಷ್ಯಗಳ ಸಂಗ್ರಹ ನಡೆಸಲಿದೆ. ಹಾಗೇಯೇ ಇನ್ನೊಂದು ತಂಡ ಹಾಸನದಲ್ಲಿ ಸಂತ್ರಸ್ತರನ್ನ ಪತ್ತೆ ಹಚ್ಚಿ ತನಿಖೆ ನಡೆಸಲಿದೆ. ಉಳಿದ ಎರಡು ತಂಡಗಳು ಎಸ್ಐಟಿಯಲ್ಲಿ ದಾಖಲೆಗಳ ಸಂಗ್ರಹ ಹಾಗೂ ಪೇಪರ್ ವರ್ಕ್ ನಡೆಸಲಿವೆ. ಆ ಮೂಲಕ ಪ್ರಕರಣದ ತನಿಖೆಯನ್ನ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News