ವಿಜಯೇಂದ್ರ ಆಟ ನಡೆಯುತ್ತದೋ, ನಮ್ಮ ಆಟ ನಡೆಯುತ್ತದೋ ನೋಡೋಣ-ಹೆಚ್ ಡಿಕೆ ಗುಡುಗು

ಉಪ ಚುನಾವಣೆಯ (By Election) ಪ್ರಚಾರ ಕೊನೆಯ ಹಂತ ತಲುಪಿದ್ದು, ನಾಯಕರ ಆರೋಪ ಪ್ರತ್ಯಾರೋಪವೂ ಜೋರಾಗಿದೆ.

Last Updated : Nov 1, 2020, 05:11 PM IST
 ವಿಜಯೇಂದ್ರ ಆಟ ನಡೆಯುತ್ತದೋ, ನಮ್ಮ ಆಟ ನಡೆಯುತ್ತದೋ ನೋಡೋಣ-ಹೆಚ್ ಡಿಕೆ ಗುಡುಗು title=
file photo

ಬೆಂಗಳೂರು: ಉಪ ಚುನಾವಣೆಯ (By Election) ಪ್ರಚಾರ ಕೊನೆಯ ಹಂತ ತಲುಪಿದ್ದು, ನಾಯಕರ ಆರೋಪ ಪ್ರತ್ಯಾರೋಪವೂ ಜೋರಾಗಿದೆ.

ಇದೀಗ ಮಾಜಿ ಸಿಎಂ ಕುಮಾರಸ್ವಾಮಿ (H D Kumaraswamy) ಬಿ ವೈ ವಿಜಯೇಂದ್ರ (B Y Vijayendra)ವಿರುದ್ಧ ಗುಡುಗಿದ್ದಾರೆ. ವಿಜಯೇಂದ್ರ ಆಟ ಏನಿದ್ದರೂ ಅದು ಹಣದಿಂದ ನಡೆಯುತ್ತಿರುವುದು.ಈ ಬಾರಿ ವಿಜಯೇಂದ್ರ ಆಟ ನಡೆಯುತ್ತದೋ ನಮ್ಮ ಆಟ ನಡೆಯುತ್ತದೋ ನೋಡೋಣ ಎಂದಿದ್ದಾರೆ. ಚುನಾವಣಾ ಫಲಿತಾಂಶದ ದಿನ ಯಾರ ಆಟ ನಡೆಯುತ್ತದೆ ಎಂದು ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ವಿಜಯೇಂದ್ರ ತಮ್ಮ ತಂದೆಯ ಸಹಿಯನ್ನು ತಾವೇ ಮಾಡಿಕೊಂಡು ತಂದೆಯ ಹೆಸರಿನಲ್ಲಿ ದುಡ್ಡು ಮಾಡಿದ್ದಾರೆ. ಅದೇ ಹಣವನ್ನು ತಂದು ಇಲ್ಲಿ ಚುನಾವಣೆ ಮಾಡುತ್ತಿದ್ದಾರೆ. ವಿಜಯೇಂದ್ರ ಏನು ದೊಡ್ಡ ಸಾಧನೆ ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ತಂದೆಯ ಹೆಸರಿನಲ್ಲಿ ಹೊಡೆದ ದುಡ್ಡನ್ನು ಇಲ್ಲಿಗೆ ತಂದು ಏನೋ ಚುನಾವಣಾ ತಂತ್ರ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ ಎಂದು ವಿಜಯೇಂದ್ರ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಇದೇ ವೇಳೆ, ಆಪರೇಷನ್ ಕಮಲದ ಹೆಸರಿನಲ್ಲಿ ಚುನಾವಣೆ ನಡೆಸುತ್ತಿದ್ದು ಎಷ್ಟು ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದ್ದೀರಿ ಎಂದು ಯಡಿಯೂರಪ್ಪ (Yadiyurappa) ಅವರನ್ನು ಹೆಚ್ ಡಿಕೆ ಪ್ರಶ್ನಿಸಿದ್ದಾರೆ. ಮತ್ತೊಂದೆಡೆ, ನ. 3ಕ್ಕೆ ಎಲ್ಲದಕ್ಕೂ ಉತ್ತರ ಕೋಡುತ್ತೇನೆ ಎಂದು ಡಿ ಕೆ ಶಿವಕುಮಾರ್ (D K Shivakumar) ಹೇಳಿದ್ದಾರೆ. ಎಫ್ಐಆರ್ ಆಗುತ್ತಲೇ ಇರುತ್ತದೆ, ಇನ್ನು ಮೇಲೆ ಎಲ್ಲವೂ ಶುರು ಆಗುತ್ತದೆ ಎಲ್ಲದಕ್ಕೂ ನ. 3ರಂದು ಉತ್ತರ ಕೊಡುತ್ತೇನೆ ಎಂದಿದ್ದಾರೆ.

Trending News