ಯಡ್ಡಿ ಬ್ರೇಕಿಂಗ್ ನ್ಯೂಸ್: ಯಾರೋ ಹೇಳಿರೋದನ್ನ ಗಿಣಿ ಪಾಠ ಒಪ್ಪಿಸಿದ್ದಾರೆ- ರಾಮಲಿಂಗಾರೆಡ್ಡಿ

    

Last Updated : Mar 16, 2018, 07:29 PM IST
ಯಡ್ಡಿ ಬ್ರೇಕಿಂಗ್ ನ್ಯೂಸ್: ಯಾರೋ ಹೇಳಿರೋದನ್ನ ಗಿಣಿ ಪಾಠ ಒಪ್ಪಿಸಿದ್ದಾರೆ- ರಾಮಲಿಂಗಾರೆಡ್ಡಿ title=

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್ ಕೊಡುವುದಾಗಿ ಭಾರಿ ಸುದ್ದಿ ಮಾಡಿದ್ದ ಯಡಿಯೂರಪ್ಪನವರಿಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಟಾಂಗ್ ನೀಡಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ " ನಾನು ಇವತ್ತಿನ ಬ್ರೇಕಿಂಗ್ ನ್ಯೂಸ್ ನೋಡಿದೆ. ಅದರಲ್ಲಿ ಏನೂ ಇಲ್ಲ, ಆ ಬ್ರೇಕಿಂಗ್ ನ್ಯೂಸ್ ನಲ್ಲಿ ಏನು ಇರುವುದಿಲ್ಲ ಎಂಬುದು ನಮ್ಮಗೆ ಮೊದಲೇ ಗೊತ್ತಿತ್ತು, ಅವರು ವರ್ಷದಿಂದಲೂ ಕೇವಲ ಆರೋಪ ಮಾಡುತ್ತಿದ್ದಾರೆ" ಎಂದರು. 

ಇನ್ನು ಮುಂದುವರೆದು ಮಾತನಾಡಿದ ಸಚಿವರು "ಯಾರೋ ಹೇಳಿಕೊಟ್ಟದ್ದನ್ನು ಯಡಿಯೂರಪ್ಪನವರು ಗಿಣಿ ಪಾಠ ಒಪ್ಪಿಸಿದ್ದಾರೆ. ಬಿಜೆಪಿ ನಾಯಕರಿಗೆ ಯಾವುದೇ ರೀತಿಯ ವಿಶ್ವಾಸಾರ್ಹತೆ ಇಲ್ಲ, ಅವರಿಗೆ ಕೇವಲ ಒಂದು ಸುಳ್ಳಿಗೆ ನೂರು ಸುಳ್ಳು ಹೇಳಿ ನಿಜ ಮಾಡುವುದಷ್ಟೇ ಗೊತ್ತು, ಇದರಿಂದ ಇತ್ತೀಚಿಗೆ ಜನರಿಗೆ ಬಿಜೆಪಿಯವರು ಹೇಳುವುದು ಸುಳ್ಳು ಎಂದು ಗೊತ್ತಾಗಿದೆ" ಎಂದು ಸಚಿವರು ಕುಟುಕಿದರು. 

Trending News