ಸರ್ವಾಧಿಕಾರದಲ್ಲಿ ಮೋದಿ ಹಿಟ್ಲರ್‌ನನ್ನೂ ಮೀರಿಸಲು ಹೊರಟಿದ್ದಾರೆ: ಕಾಂಗ್ರೆಸ್ ಟೀಕೆ

ಬಿಜೆಪಿ ಕಾರ್ಯಕರ್ತರು ಮಾಡಬೇಕಾದ ಕೆಲಸವನ್ನು ಅಧಿಕಾರಿಗಳು ಏಕೆ ಮಾಡಬೇಕು, ಸೈನಿಕರು ಏಕೆ ಮಾಡಬೇಕು? ಬಿಜೆಪಿ ಕಾರ್ಯಕರ್ತರು ಸೋಂಬೇರಿಗಳಾದರೆ? ಅಥವಾ ಪಕ್ಷದಿಂದ ವಿಮುಖರಾದರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Written by - Puttaraj K Alur | Last Updated : Oct 27, 2023, 04:21 PM IST
  • ಸರ್ವಾಧಿಕಾರದಲ್ಲಿ ಪ್ರಧಾನಿ ಮೋದಿ ಅಡಾಲ್ಫ್ ಹಿಟ್ಲರ್‍ನನ್ನೂ ಮೀರಿಸಲು ಹೊರಟಿದ್ದಾರೆ
  • ಪ್ರಧಾನಿ ಮೋದಿ ಆದೇಶದಂತೆ ಐಟಿ ಇಡಿ, ಸಿಬಿಐ ಸಂಸ್ಥೆಗಳು ಬಿಜೆಪಿ ಪರ ಕೆಲಸ ಮಾಡಬೇಕು
  • ಮಾಧ್ಯಮಗಳು ಮೋದಿ ಪರ ಪ್ರಚಾರ ಮಾಡಲೇಬೇಕು, ಸಾಮಾಜಿಕ ಜಾಲತಾಣ ಸಂಸ್ಥೆಗಳೂ ಕೇಂದ್ರ ಹೇಳಿದಂತೆ ಕೇಳಬೇಕು
ಸರ್ವಾಧಿಕಾರದಲ್ಲಿ ಮೋದಿ ಹಿಟ್ಲರ್‌ನನ್ನೂ ಮೀರಿಸಲು ಹೊರಟಿದ್ದಾರೆ: ಕಾಂಗ್ರೆಸ್ ಟೀಕೆ title=
ಪ್ರಧಾನಿ ಮೋದಿ ಬಗ್ಗೆ ಕಾಂಗ್ರೆಸ್ ಟೀಕೆ!

ಬೆಂಗಳೂರು: ಸರ್ವಾಧಿಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‍ನನ್ನೂ ಮೀರಿಸಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಪ್ರಧಾನಿ ಮೋದಿ ಆದೇಶದಂತೆ ಐಟಿ ಇಡಿ, ಸಿಬಿಐ ಸಂಸ್ಥೆಗಳು ಬಿಜೆಪಿ ಪರ ಕೆಲಸ ಮಾಡಬೇಕು, ಮಾಧ್ಯಮಗಳು ಮೋದಿ ಪರ ಪ್ರಚಾರ ಮಾಡಲೇಬೇಕು, ಸಾಮಾಜಿಕ ಜಾಲತಾಣ ಸಂಸ್ಥೆಗಳೂ ಕೇಂದ್ರ ಸರ್ಕಾರ ಹೇಳಿದಂತೆ ಕೇಳಬೇಕು ಮತ್ತು ಸರ್ಕಾರಿ ಅಧಿಕಾರಿಗಳೂ ಈಗ ಮೋದಿ ಪ್ರಚಾರ ಮಾಡಬೇಕು’ ಎಂದು ಕುಟುಕಿದೆ.

ಇದನ್ನೂ ಓದಿ: ಆಂಗ್ಲಮಯವಾದ ಬಂಡೀಪುರ: ಕನ್ನಡ ಬಳಸುವಂತೆ ಪ್ರಾಧಿಕಾರದಿಂದ ಪತ್ರ

‘ಇದಷ್ಟೇ ಅಲ್ಲದೇ, ರಜೆಯ ಮೇಲೆ ತೆರಳುವ ಸೇನಾ ಯೋಧರೂ ಕಡ್ಡಾಯವಾಗಿ ಮೋದಿ ಪರ ಪ್ರಚಾರ ಮಾಡಬೇಕಂತೆ. ಎಲ್ಲರನ್ನೂ ಉಸಿರುಗಟ್ಟಿಸಿ ತನಗೆ ಬಹುಪರಾಕ್ ಹೇಳಿಸಿಕೊಳ್ಳುವ ಮೋದಿ ಹಿಟ್ಲರ್ ಗಿಂತಲೂ ಒಂದು ಕೈ ಮೇಲೆ! ಸರ್ವಾಧಿಕಾರಿಗೆ ಸೋಲುವ ಭಯ ಹೆಚ್ಚಾದಾಗಲೇ ಇಂತಹ ಕೆಲಸಕ್ಕೆ ಕೈ ಹಾಕುವುದು!’ ಎಂದು ಕಾಂಗ್ರೆಸ್ ಟೀಕಿಸಿದೆ.

‘ಸರ್ಕಾರಿ ಅಧಿಕಾರಿಗಳು ಹಾಗೂ ಸೇನಾಪಡೆಯ ಯೋಧರನ್ನು ಬಿಜೆಪಿ ಪಕ್ಷದ ಕಾಲಾಳುಗಳಂತೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿರುವುದು ಮೋದಿ ಸರ್ಕಾರ ನಿರ್ಲಜ್ಜ ಸ್ಥಿತಿಗೆ ತಲುಪಿರುವುದಕ್ಕೆ ಸಾಕ್ಷಿ. ಸರ್ಕಾರದ ಬಗ್ಗೆ ಪ್ರಚಾರ ಮಾಡಲು ಅಧಿಕಾರಿಗಳಿಗೆ "ರಥ ಪ್ರಭಾರಿಗಳು" ಎಂದು ಹೆಸರು ಕೊಟ್ಟು ಪ್ರಪೋಗಂಡಾ ಮೆಷಿನ್‍ಗಳಂತೆ ಬಳಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ, ದೇಶದ ಕಾನೂನಿಗೆ ಎಸಗುವ ಅಪಚಾರವಾಗುತ್ತದೆ. ಬಿಜೆಪಿ ಕಾರ್ಯಕರ್ತರು ಮಾಡಬೇಕಾದ ಕೆಲಸವನ್ನು ಅಧಿಕಾರಿಗಳು ಏಕೆ ಮಾಡಬೇಕು, ಸೈನಿಕರು ಏಕೆ ಮಾಡಬೇಕು? ಬಿಜೆಪಿ ಕಾರ್ಯಕರ್ತರು ಸೋಂಬೇರಿಗಳಾದರೆ? ಅಥವಾ ಪಕ್ಷದಿಂದ ವಿಮುಖರಾದರೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: ಹುಲಿ ಉಗುರಿನ ಸಂಕಷ್ಟದಿಂದ ಪಾರಾಗ್ತಾರಾ ವರ್ತೂರು ಸಂತೋಷ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News