ಪ್ರೀತಿಸಿ ನಂಬಿಸಿ ವಂಚಿಸಿದ್ದಾರಂತೆ 70 ರ ಅಜ್ಜ ! ಠಾಣೆ ಮೆಟ್ಟಿಲೇರಿದ್ದಾರೆ 63 ರ ಅಜ್ಜಿ

Old Age love Story : ಈ ಸುದ್ದಿ ಪ್ರೀತಿ-ಪ್ರೇಮ- ವಂಚನೆಯ ಸುತ್ತಲೇ ಸುತ್ತಿದರೂ ಸ್ವಲ್ಪ ಭಿನ್ನ ಎಂದೆನಿಸುತ್ತದೆ. ಯಾಕೆಂದರೆ ಇಲ್ಲಿ ಪ್ರೀತಿಯಲ್ಲಿ ಬಿದ್ದಿರಿರುವುದು ಹದಿಹರೆಯರದ ಮನಸ್ಸುಗಳಲ್ಲ. ಬದಲಾಗಿ ವೃದ್ದ ಜೋಡಿಗಳು. 

Written by - Ranjitha R K | Last Updated : Aug 21, 2023, 10:44 AM IST
  • ಅಜ್ಜ- ಅಜ್ಜಿ ಲವ್ ಸ್ಟೋರಿ
  • ಕಾರಣ ಹೇಳದೆ ದೂರವಾದರಂತೆ
  • ಠಾಣೆ ಬಾಗಿಲು ತಟ್ಟಿದ ಪ್ರಿಯತಮೆ
ಪ್ರೀತಿಸಿ ನಂಬಿಸಿ ವಂಚಿಸಿದ್ದಾರಂತೆ 70 ರ ಅಜ್ಜ ! ಠಾಣೆ ಮೆಟ್ಟಿಲೇರಿದ್ದಾರೆ 63 ರ  ಅಜ್ಜಿ  title=

ಬೆಂಗಳೂರು : ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚನೆ  ಎನ್ನುವ ಸುದ್ದಿಯನ್ನು ದಿನ ಬೆಳಗಾದರೆ ಓದುತ್ತಲೇ ಇರುತ್ತೇವೆ. ಇದರಲ್ಲಿ ಅಂಥದ್ದೇನು ವಿಶೇಷ ಎಂದೆನಿಸಬಹುದು. ಆದರೆ ಈ ಸುದ್ದಿ ಪ್ರೀತಿ-ಪ್ರೇಮ- ವಂಚನೆಯ ಸುತ್ತಲೇ ಸುತ್ತಿದರೂ ಸ್ವಲ್ಪ ಭಿನ್ನ ಎಂದೆನಿಸುತ್ತದೆ. ಯಾಕೆಂದರೆ ಇಲ್ಲಿ ಪ್ರೀತಿಯಲ್ಲಿ ಬಿದ್ದಿರಿರುವುದು ಹದಿಹರೆಯರದ ಮನಸ್ಸುಗಳಲ್ಲ. ಬದಲಾಗಿ ವೃದ್ದ ಜೋಡಿಗಳು. 

ಪ್ರೀತಿ ಪ್ರತಿಯೊಬ್ಬರ ಜೀವನದಲ್ಲಿಯೂ ಮುಖ್ಯ. ಜೀವನದಲ್ಲಿ ಪ್ರೀತಿ ಇಲ್ಲ ಎಂದಾದಾಗ ಬದುಕು ಪೂರ್ಣ ಅನ್ನಿಸುವುದಿಲ್ಲ. ಆ ಪ್ರೀತಿ ಯಾರದ್ದೇ ಆಗಿರಬಹುದು. ಅಪ್ಪ- ಅಮ್ಮ, ಸಹೋದರ- ಸಹೋದರಿ, ಅಜ್ಜಿ -ತಾತ, ಸ್ನೇಹಿತರು ಹೀಗೆ.. ನಮಗಾಗಿ ಮಿಡಿಯುವವರು ನಮ್ಮ ಸುತ್ತಲೂ ಇದ್ದಾರೆ ಎಂದಾಗ ಒಂದು ರೀತಿಯ ಸಮಾಧಾನದ ಬದುಕು. ನಮ್ಮ ಬದುಕಿಗೂ ಅರ್ಥವಿದೆ ಅನ್ನುವ ಭಾವ. 

ಇದನ್ನೂ  ಓದಿ : ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಆಟೋ ಕದ್ದು ಪರಾರಿಯಾದ ಖದೀಮ...ದೃಶ್ಯ ಸಿಸಿಕ್ಯಾಮಾರದಲ್ಲಿ ಸೆರೆ

ಅಜ್ಜ- ಅಜ್ಜಿ ಲವ್ ಸ್ಟೋರಿ : 
ಪ್ರೀತಿ - ಪ್ರೇಮ 16ರ ವಯಸ್ಸಿನಲ್ಲಿಯೇ ಮೂಡಬೇಕು ಎನ್ನುವ ನೀತಿ ನಿಯಮ ಕಾನೂನು ಕಟ್ಟಳೆ ಯಾವುದೂ ಇಲ್ಲ ನಿಜ. ಈ ವಾದವನ್ನೇ ಇಲ್ಲಿನ ವೃದ್ದ ಜೋಡಿ ಕೂಡಾ ಅನುಸರಿಸಿರಬೇಕು ಎನ್ನಿಸುತ್ತದೆ.  ಇಲ್ಲಿ 63 ವರ್ಷದ ವೃದ್ದೆ  ದಯವಾಣಿ ಎನ್ನುವವರಿಗೆ 70 ರ ತಾತ ಲೋಕನಾಥನ್ ಎಂಬವರ ಮೇಲೆ ಪ್ರೀತಿಯಾಗಿದೆ. ಇಬ್ಬರೂ ಹಲವು ತಿಂಗಳುಗಳ ಕಾಲ ಸಿನಿಮಾ, ಪಾರ್ಕ್, ಅಂತೆಲ್ಲಾ ಸುತ್ತಾಡಿದ್ದಾರೆ. ಪ್ರಣಯ ಲೋಕದಲ್ಲಿ ತೇಲಾಡಿದ್ದಾರೆ.  ಈ ಸಂದರ್ಭ ಲೋಕನಾಥನ್ ದಯವಾಣಿ  ಅವರನ್ನು ಮದುವೆಯಾಗುವುದಾಗಿಯೂ ಮಾತು ಕೂಡಾ ಕೊಟ್ಟಿದ್ದರಂತೆ. 

ಕಾರಣ ಹೇಳದೆ ದೂರವಾದರಂತೆ : 
ಆದರೆ ಅದೇನಾಯಿತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆಯೇ ಲೋಕನಾಥನ್  ತಮ್ಮ ಪ್ರಿಯತಮೆ ದಯವಾಣಿ ಅವರನ್ನು ಅವಾಯ್ಡ್ ಮಾಡಲು ಆರಂಭಿಸಿದ್ದಾರೆ. ತನ್ನಿಂದ ದೂರ ಸರಿಯುತ್ತಿರುವ ಬಗ್ಗೆ ದಯವಾಣಿ ಪ್ರಶ್ನಿಸಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಯಂತೆ. ಇನ್ನು ಕರೆದಾಗ ಹೋಗಿಲ್ಲ ಎನ್ನುವ ಕಾರಣಕ್ಕೆ ಕೆಟ್ಟ ಶಬ್ಧ ಬಳಸಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿರುವ ಆರೋಪ ಕೂಡಾ ಇವರ ವಿರುದ್ದ ಮಾಡಲಾಗಿದೆ. 

ಇದನ್ನೂ  ಓದಿ : ಬುರ್ಖಾ ಧರಿಸಿ ಬಾಲಕಿಯರ ವಾಶ್‍ರೂಂಗೆ ಹೋದ ವ್ಯಕ್ತಿ! ಮುಂದೆನಾಯ್ತು ಗೊತ್ತಾ?

ಠಾಣೆ ಬಾಗಿಲು ತಟ್ಟಿದ ಪ್ರಿಯತಮೆ  : 
ಲೋಕನಾಥನ್ ಅವರು ತನ್ನಿಂದ ದೂರ ಹೋಗುವುದನ್ನು ಇಲ್ಲಿ ದಯವಾಣಿಗೆ ಸಹಿಸುವುದು ಸಾಧ್ಯವಾಗಿಲ್ಲ. ತನಗೆ ಪ್ರೀತಿಯಲ್ಲಿ ಮೋಸವಾಗಿದೆ ಎಂದು ದಯವಾಣಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾರೆ. ಸದ್ಯ ಮದ್ವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ವೃದ್ದ ಲೋಕನಾಥ್ ವಿರುದ್ಧಈಸ್ಟ್ ಝೋನ್ ವುಮೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News