ನನ್ನ ಪತ್ನಿ ಮತ್ತು ಪುತ್ರ ಚುನಾವಣೆಗೆ ನಿಲ್ಲಲ್ಲ- ನಟ ಅಂಬರೀಶ್

ಮಂಡ್ಯದಲ್ಲಿ ರಮ್ಯ ಸ್ಪರ್ಧಿಸಿದರೆ ಸ್ವಾಗತ ಎಂದ ರೆಬೆಲ್ ಸ್ಟಾರ್.

Last Updated : Nov 28, 2017, 06:41 PM IST
ನನ್ನ ಪತ್ನಿ ಮತ್ತು ಪುತ್ರ ಚುನಾವಣೆಗೆ ನಿಲ್ಲಲ್ಲ- ನಟ ಅಂಬರೀಶ್ title=
Pic: DNA

ಬೆಂಗಳೂರು: ಮಾಜಿ ಸಚಿವ ಹಾಗೂ ಖ್ಯಾತ ನಟ ಅಂಬರೀಶ್ ನನ್ನ ಪತ್ನಿ-ಪುತ್ರ ಚುನಾವಣೆಗೆ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬಂದಿದ್ದ ಅಂಬಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಮುಂದಿನ ಚುನಾವಣೆಯಲ್ಲಿ ರಮ್ಯ ಸ್ಪರ್ಧಿಸಿದರೆ ಸ್ವಾಗತ. ನನಗೆ ಟಿಕೇಟ್ ಕೊಟ್ಟರೆ ನಾನೂ ಸ್ಪರ್ಧಿಸುತ್ತೇನೆ ಎಂದು ಹೇಳಿದರು. 

ಮುಂದುವರಿದು ಮಾತನಾಡಿದ ಅವರು, ನಾನು ಆಗಾಗ ಬಿಜೆಪಿ, ಜೆಡಿಎಸ್ ನಾಯಕರನ್ನು ಭೇಟಿ ಮಾಡುತ್ತಿರುತ್ತೇನೆ. ನಾವು ಜೊತೆಗೂಡಿ ಊಟವು ಮಾಡುತ್ತೇವೆ ಆದರೆ ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ತಿಳಿಸಿದರು. 

ಮುಂದಿನ ಚುನಾವಣೆಯಲ್ಲಿ ಮಂಡ್ಯದಿಂದ ನಟಿ ರಮ್ಯ ಅವರನ್ನು ಕಂಕ್ಕಿಲಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಅಂಬಿ-ಸಿದ್ದು ಭೇಟಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.

Trending News