Siddheshwar Swamiji : ಸಿದ್ದೇಶ್ವರ ಶ್ರೀಗಳ ಆರೋಗ್ಯ ಸುಧಾರಿಸಲಿ : ಮಹಿಳೆಯಿಂದ 80 ಕಿಮೀ ಧೀರ್ಘದಂಡ ನಮಸ್ಕಾರ ಸೇವೆ

ಕಸ್ತೂರಿ ಬಾಲಗೊಂಡ ಅವರು ಕೊಲ್ಹಾರದಿಂದ ನೆರೆಯ ಬಾಗಲಕೋಟೆ ಜಿಲ್ಲೆಯ ಸುಕ್ಷೇತ್ರ ಬಾದಾಮಿಯ ಬನಶಂಕರಿದೇವಿ ದೇವಸ್ಥಾನದವರೆಗೂ ದೀರ್ಘದಂಡ ನಮಸ್ಕಾರ ಹಾಕುತ್ತಿದ್ದಾರೆ. 

Written by - Channabasava A Kashinakunti | Last Updated : Jan 2, 2023, 01:44 PM IST
  • ಸಿದ್ದೇಶ್ವರ ಶ್ರೀಗಳ ಆರೋಗ್ಯ ಬೇಗ ಸುಧಾರಿಸಲು
  • ಭಕ್ತರು ವಿಶೇಷ ಹರಕೆಯೊಂದನ್ನು ಹೊತ್ತು ತೀರಿಸುತ್ತಿದ್ದಾರೆ.
  • ಮಹಿಳೆ 80 ಕಿಲೋ ಮೀಟರ್ ಧೀರ್ಘದಂಡ ನಮಸ್ಕಾರ ಹಾಕಿದ್ದಾರೆ.
Siddheshwar Swamiji : ಸಿದ್ದೇಶ್ವರ ಶ್ರೀಗಳ ಆರೋಗ್ಯ ಸುಧಾರಿಸಲಿ : ಮಹಿಳೆಯಿಂದ 80 ಕಿಮೀ ಧೀರ್ಘದಂಡ ನಮಸ್ಕಾರ ಸೇವೆ title=

ವಿಜಯಪುರ : ಸಿದ್ದೇಶ್ವರ ಶ್ರೀಗಳ ಆರೋಗ್ಯ ಬೇಗ ಸುಧಾರಿಸಲು ಎಂದು ಭಕ್ತರು ವಿಶೇಷ ಹರಕೆಯೊಂದನ್ನು ಹೊತ್ತು ತೀರಿಸುತ್ತಿದ್ದಾರೆ. 

ಜಿಲ್ಲೆಯ ಕೊಲ್ಹಾರ ಪಟ್ಟಣದ ಶ್ರೀಗಳ ಭಕ್ತೆ ಕಸ್ತೂರಿ ಬೂಸಪ್ಪ ಬಾಲಗೊಂಡ ಎಂಬ ಮಹಿಳೆ 80 ಕಿಲೋ ಮೀಟರ್ ಧೀರ್ಘದಂಡ ನಮಸ್ಕಾರ ಹಾಕಿದ್ದಾರೆ. 

ಇದನ್ನೂ ಓದಿ : DK Shivakumar : 'ಎಲ್ಲ ಪಾರ್ಟಿಯವರಿಗೆ ಒಳ್ಳೆದಾಗಲಿ, ಅಧಿಕಾರ ಮಾತ್ರ ನಮಗೆ ಸಿಗಲಿ'

ಕಸ್ತೂರಿ ಬಾಲಗೊಂಡ ಅವರು ಕೊಲ್ಹಾರದಿಂದ ನೆರೆಯ ಬಾಗಲಕೋಟೆ ಜಿಲ್ಲೆಯ ಸುಕ್ಷೇತ್ರ ಬಾದಾಮಿಯ ಬನಶಂಕರಿದೇವಿ ದೇವಸ್ಥಾನದವರೆಗೂ ದೀರ್ಘದಂಡ ನಮಸ್ಕಾರ ಹಾಕುತ್ತಿದ್ದಾರೆ. 

 ಈ ಬಗ್ಗೆ ಪ್ರತಿಕ್ರಿಯೆ ಭಕ್ತೆ ಕಸ್ತೂರಿ, ನಡೆದಾಡುವ ದೇವರು ಸಿದ್ದೇಶ್ವರ ಪೂಜ್ಯರು ಶೀಘ್ರ ಗುಣಮುಖರಾಗಲೆಂದು ಸಂಕಲ್ಪ ತೊಟ್ಟು ದೀರ್ಘದಂಡ ನಮಸ್ಕಾರ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. 

ಭಕ್ತೆ ಕಸ್ತೂರಿ ಸೋಮವಾರ ನಸುಕಿನ ವೇಳೆ ಸೇವೆ ಆರಂಭಿಸಿ ಸದ್ಯ ಬೀಳಗಿ ಕ್ರಾಸ್ ದಾಟಿದ್ದಾರೆ. ದೀರ್ಘದಂಡ ಸೇವೆ ಹಾಕುತ್ತಾ ಗುರುವಾರ ಬನಶಂಕರಿದೇವಿ ದೇವಸ್ಥಾನ ತಲುಪಲಿದ್ದಾರೆ.

ಇದನ್ನೂ ಓದಿ : Omicron BF.7 : ರಾಜ್ಯದಲ್ಲೂ ಹೆಚ್ಚಾಯ್ತು BF.7 ಆತಂಕ : ಮುಂದಿನ 40 ದಿನ ಕಠಿಣ ಎಂದ ತಜ್ಞರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News