ಮಂಡ್ಯ ಜಿಲ್ಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಶಿರಚ್ಚೇದ

ವ್ಯಕ್ತಿಗಳಿಬ್ಬರ ನಡುವಿನ ಜಗಳ  ಹಿಂಸಸೆ ತಿರುಗಿ ಕೊನೆಗೆ ಶಿರಚ್ಛೇದನ ಮಾಡಿರುವ ಘಟನೆ  ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಆ ಮೂಲಕ ಈ ತಿಂಗಳಿನಲ್ಲಿ ಮೂರನೇ ಶಿರಚ್ಛೇದನದ ಘಟನೆಯಾಗಿದೆ.

Last Updated : Sep 29, 2018, 08:51 PM IST
ಮಂಡ್ಯ ಜಿಲ್ಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಶಿರಚ್ಚೇದ title=

ಬೆಂಗಳೂರು: ವ್ಯಕ್ತಿಗಳಿಬ್ಬರ ನಡುವಿನ ಜಗಳ ಹಿಂಸೆಗೆ ತಿರುಗಿ ಕೊನೆಗೆ ಶಿರಚ್ಛೇದನ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಆ ಮೂಲಕ ಈ ತಿಂಗಳಿನಲ್ಲಿ ರಾಜ್ಯದಲ್ಲಿ ಮೂರನೇ ಶಿರಚ್ಛೇದನದ ಘಟನೆಯಾಗಿದೆ.

ಶನಿವಾರದಂದು ಪಶುಪತಿ ಎನ್ನುವ ವ್ಯಕ್ತಿಯು (24) ಗಿರೀಶ್ (28) ಎನ್ನುವವನ ಶೀರಚ್ಚೆದ ಮಾಡಿದ್ದಾನೆ ಎಂದು ತಿಳಿದು ಬಂದಿದೆ.ತನ್ನ ತಾಯಿ ವಿರುದ್ದ ಅಶ್ಲೀಲವಾಗಿ ಮಾತನಾಡಿದ್ದಕ್ಕೆ ಈ ವ್ಯಕ್ತಿ ರೊಚ್ಚಿಗೆದ್ದು ಈ ಕ್ರಮಕ್ಕೆ ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ.

ಕ್ಷುಲ್ಲಕ ಕಾರಣಕ್ಕಾಗಿ ಪಶುಪತಿ ಎನ್ನುವ ವ್ಯಕ್ತಿ ಚಿಕ್ಕಬಾಗಿಲು ಗ್ರಾಮದಲ್ಲಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗ ಪ್ರಕರಣದ ಕುರಿತಾಗಿ ಇನ್ನು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಮಂಡ್ಯದ ಪೊಲೀಸ್ ಅಧೀಕ್ಷಕ ಶಿವ ಪ್ರಕಾಶ್ ದೇವರಾಜು ಹೇಳಿದ್ದಾರೆ.

ಸೆಪ್ಟಂಬರ್ 11 ರಂದು ಸತೀಶ್ ಎನ್ನುವ ವ್ಯಕ್ತಿ  ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎನ್ನುವ  ಕಾರಣಕ್ಕಾಗಿ ಕಾರಣಕ್ಕಾಗಿ ಶಿರಚ್ಛೇದನ ಮಾಡಿದ್ದನು. ನಂತರ ಚಿಕ್ಕಮಂಗಳೂರು ಅಜ್ಜಂಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು 

ಇದೇ ಮಾದರಿಯ ಪ್ರಕರಣದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ  ಅಜಿಜ್ ಸದ್ದಾಂ ಎನ್ನುವ ವ್ಯಕ್ತಿಯು ಕೂಡ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಕೊಲೆ ಶೀರಚ್ಚೆದ ಮಾಡಿದ್ದನು.

Trending News