ಲಿಂಗಾಯತ ಹೋರಾಟದಿಂದ ಕಾಂಗ್ರೆಸ್‌ಗೆ ಹೊಡೆತ ಬಿದ್ದಿಲ್ಲ- ಎಂ.ಬಿ.ಪಾಟೀಲ್

   

Last Updated : Jul 16, 2018, 01:13 PM IST
ಲಿಂಗಾಯತ ಹೋರಾಟದಿಂದ ಕಾಂಗ್ರೆಸ್‌ಗೆ ಹೊಡೆತ ಬಿದ್ದಿಲ್ಲ- ಎಂ.ಬಿ.ಪಾಟೀಲ್ title=

ವಿಜಯಪುರ: ಇತ್ತೀಚೆಗಿನ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಹೋರಾಟದಿಂದ ಕಾಂಗ್ರೆಸ್ ಗೆ ಹೊಡೆತ ಬಿದ್ದಿಲ್ಲ ಎಂದು  ಶಾಸಕ ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಾವು ಯಾರ ವಿರೋಧಿಗಳೂ ಅಲ್ಲ, ವೀರಶೈವರು ತಮ್ಮ ಕಾರ್ಯವನ್ನು ತಾವು ಮಾಡಲಿ. ಲಿಂಗಾಯತ ಹೋರಾಟದಿಂದ ಕಾಂಗ್ರೆಸ್‌ಗೆ ಯಾವುದೇ ಹೊಡೆತ ಬಿದ್ದಿಲ್ಲ.ಆದರೆ  ಅದಕ್ಕೆ ಹಲವು ಕಾರಣಗಳಿವೆ, ಸದಾಶಿವ ಆಯೋಗ ವರದಿ ಸೇರಿದಂತೆ ಹಲವು ಕಾರಣಗಳಿವೆ ಆದರೆ ಅವುಗಳನ್ನು ಈಗ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ಎಂ.ಬಿ.ಪಾಟೀಲ್ ಲಿಂಗಾಯತ ಧರ್ಮ ಜಾಗತಿಕ ಧರ್ಮ ಆಗುವವರೆಗೋ ತಮ್ಮ ಹೋರಾಟವನ್ನು ಮುಂದುವರೆಸುವಲಾಗುವುದು ಆ ನಿಟ್ಟಿನಲ್ಲಿ ಕೆಳಮಟ್ಟದಿಂದ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು  ಬಸವರಾಜ್ ಹೊರಟ್ಟಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ಎಲ್ಲರು ಸೇರಿ ಮಾಡಲಾಗುವುದು ಎಂದು  ತಿಳಿಸಿದರು.

Trending News