'ಬಿಬಿಸಿ' ನ್ಯೂಸ್ ನಲ್ಲೂ ಸುದ್ದಿ ಮಾಡಿದ ಕರ್ನಾಟಕದ 'ಇಂದಿರಾ ಕ್ಯಾಂಟೀನ್'

    

Last Updated : Nov 28, 2017, 05:51 PM IST
'ಬಿಬಿಸಿ' ನ್ಯೂಸ್ ನಲ್ಲೂ ಸುದ್ದಿ ಮಾಡಿದ ಕರ್ನಾಟಕದ 'ಇಂದಿರಾ ಕ್ಯಾಂಟೀನ್' title=

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ  ಜನಪ್ರಿಯ ಯೋಜನೆ 'ಬಿಬಿಸಿ' ನ್ಯೂಸ್ ನಲ್ಲಿಯೂ ಕೂಡ ಸುದ್ದಿ ಮಾಡಿದೆ. ಈ ಯೋಜನೆಯ ಕುರಿತಾಗಿ 'ಬಿಬಿಸಿ'ಯು ಏಷ್ಯಾ ವಿಭಾಗದಲ್ಲಿ "India's Indira canteen: The best meal you can buy for 13 cents" ಎನ್ನುವ ಶೀರ್ಷಿಕೆಯ ಅಡಿಯಲ್ಲಿ  ಸುಧೀರ್ಘ ಲೇಖನ ಪ್ರಕಟಿಸಿರುವ ಈ ಜಾಗತಿಕ ಸುದ್ದಿ ಸಂಸ್ಥೆ,ಈ ಯೋಜನೆಯ ಕುರಿತಾಗಿ ವಿಮರ್ಶೆ ಮಾಡುತ್ತಾ ''ಪ್ರಮುಖವಾಗಿ ಬೆಂಗಳೂರು ಮಹಾನಗರದ ವಲಸಿಗರು, ಕ್ಯಾಬ್ ಡ್ರೈವರಗಳು  ವಿದ್ಯಾರ್ಥಿಗಳು, ಭಿಕ್ಸುಕರು, ಸೆಕ್ಯೂರಿಟಿ ಗಾರ್ಡ್ ಹಾಗೂ ಕೂಲಿಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ತಂದಂಥ ಯೋಜನೆ ಇಂದಿರಾ ಕ್ಯಾಂಟೀನ್ ಆಗಿದೆ'' ಎಂದು ಬಿಬಿಸಿ ತಿಳಿಸಿದೆ.  

ಈ ಹಿಂದೆ ತಮಿಳುನಾಡಿನಲ್ಲಿ  ಮುಖ್ಯಮಂತ್ರಿ ಜಯಲಲಿತಾ ರವರು ತಂದಂತಹ ಅಮ್ಮಾ ಕ್ಯಾಂಟಿನ ಮಾದರಿಯಲ್ಲ್ಲೇ ಇದನ್ನು ಬೆಂಗಳೂರಿನಲ್ಲಿ ಜಾರಿಗೆ ತರಲಾಗಿದೆ.ಇಲ್ಲಿ ಉಪಹಾರವನ್ನು ಕೇವಲ 5 ರೂಪಾಯಿ ಹಾಗೂ ಊಟವನ್ನು 10 ರೂಗಳಲ್ಲಿ  ಪಡೆಯಬಹುದಾಗಿದೆ.ನಗರವೊಂದರಲ್ಲೇ ಈ ಯೋಜನೆಯನ್ನು ಯಶಸ್ವಿಗೊಳಿಸಲು 198 ಕ್ಯಾಂಟಿನ ಮೂಲಕ 3,00,000 ಊಟವನ್ನು ದಿನವೊಂದಕ್ಕೆ ತಯಾರಿಸಲಾಗುತ್ತಿದೆ.ಅಲ್ಲದೆ ಜನೇವರಿ ವೇಳೆಗೆ ಸುಮಾರು 300 ಕ್ಯಾಂಟೀನ್ಗಳನ್ನೂ ನಗರದೆಲ್ಲೆಡೆ ತೆರೆಯಲಾಗುತ್ತಿದೆ ಎಂದು ಹೇಳಲಾಗಿದೆ. ದಿನಕ್ಕೆ ಒಂದು ಡಾಲರ್ಗಿಂತಲೂ ಕಡಿಮೆ ಆಧಾಯ ಹೊಂದಿರುವ ಲಕ್ಷಾಂತರ ಜನರಿಗೆ ಭಾರತದಂತಹ ದೇಶದಲ್ಲಿ ಈ ಯೋಜನೆ ಅನುಕೂಲಕಾರಿಯಾಗುತ್ತದೆ ಎಂದು ಅದು ಸುದ್ದಿ ಮಾಡಿದೆ. 

Trending News