ಜೆಡಿಎಸ್ ಬಣ್ಣ ಬದಲಿಸುವುದನ್ನು ನೋಡಿ ಊಸರವಳ್ಳಿಯೇ ದಂಗಾಗಿದೆ!: ಕಾಂಗ್ರೆಸ್

BJP-JDS alliance: ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಇರುವುದು ಗುಲಾಮಗಿರಿ ಮಾಡಲು ಮಾತ್ರ. ಜೆಡಿಎಸ್ ರಾಜ್ಯಾಧ್ಯಕ್ಷ ಕುಟುಂಬದ ಗುಲಾಮರಿಗೆ, ಬಿಜೆಪಿ ರಾಜ್ಯಾಧ್ಯಕ್ಷ ಹೈಕಮಾಂಡ್ ಗುಲಾಮಗಿರಿಗೆ ಎಂದು ಕಾಂಗ್ರೆಸ್ ಟೀಕಿಸಿದೆ.

Written by - Puttaraj K Alur | Last Updated : Oct 4, 2023, 10:47 PM IST
  • ಜೆಡಿಎಸ್ ಪಕ್ಷ ಬಣ್ಣ ಬದಲಿಸುವುದನ್ನು ನೋಡಿ ಸ್ವತಃ ಊಸರವಳ್ಳಿಯೇ ದಂಗಾಗಿದೆ!
  • ಕುಮಾರಸ್ವಾಮಿಯವರ ಜಾತ್ಯಾತೀತತೆಯ ಬಣ್ಣ ತೊಳೆದು ಅಸಲಿ ಕೋಮುವಾದದ ಬಣ್ಣ ಈಗ ಹೊರಬರುತ್ತಿದೆ
  • ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಇರುವುದು ಗುಲಾಮಗಿರಿಗೆ ಮಾತ್ರ
ಜೆಡಿಎಸ್ ಬಣ್ಣ ಬದಲಿಸುವುದನ್ನು ನೋಡಿ ಊಸರವಳ್ಳಿಯೇ ದಂಗಾಗಿದೆ!: ಕಾಂಗ್ರೆಸ್ title=
ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ಆಕ್ರೋಶ!

ಬೆಂಗಳೂರು: ಜೆಡಿಎಸ್ ಪಕ್ಷ ಬಣ್ಣ ಬದಲಿಸುವುದನ್ನು ನೋಡಿ ಸ್ವತಃ ಊಸರವಳ್ಳಿಯೇ ದಂಗಾಗಿದೆ! ಎಂದು ಕಾಂಗ್ರೆಸ್ ಟೀಕಿಸಿದೆ. ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಜೆಡಿಎಸ್ ಅಲ್ಪಸಂಖ್ಯಾತರನ್ನು ನಂಬಿಕೊಂಡಿಲ್ಲ. ಅಲ್ಪಸಂಖ್ಯಾತ ನಾಯಕರು ಪಕ್ಷ ಬಿಟ್ಟರೆ ಬಿಡಲಿ ಯಾವುದೇ ತೊಂದರೆ ಇಲ್ಲ, ಇದು ಜೆಡಿಎಸ್ ನ ಹೊಸ ವರಸೆ. ಎಚ್.ಡಿ.ಕುಮಾರಸ್ವಾಮಿಯವರ ಜಾತ್ಯಾತೀತತೆಯ ಬಣ್ಣ ತೊಳೆದು ಅಸಲಿ ಕೋಮುವಾದದ ಬಣ್ಣ ಈಗ ಹೊರಬರುತ್ತಿದೆ’ ಎಂದು ಕುಟುಕಿದೆ.

ಇದನ್ನೂ ಓದಿ: ರೈತ ಹಿತ ರಕ್ಷಣಾ ಸಮಿತಿಯಿಂದ ಧರಣಿ ಮುಂದುವರಿಕೆ

‘ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಬಿಜೆಪಿ ನಾಯಕರು ಕನಿಷ್ಠ ಪಕ್ಷದಲ್ಲಾದರೂ ಅಸ್ತಿತ್ವ ಉಳಿಸಿಕೊಳ್ಳೋಣ ಎಂದು ಬಾಯಿಗೆ ಬಂದ ಹೇಳಿಕೆ ನೀಡುತ್ತಾರೆ. ಅದರಂತೆಯೇ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಕೂಡ ‘RTI ಕಾರ್ಯಕರ್ತರ ಪಟ್ಟಿ ಮಾಡುತ್ತಿದೆ ಸರ್ಕಾರ’ ನಂದೂ ಒಂದಿರಲಿ ಎಂದು ಹುರುಳಿಲ್ಲದ ಹೇಳಿಕೆ ನೀಡಿದ್ದಾರೆ. RTI ಕಾಯ್ದೆಯನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್, ಸರ್ಕಾರದ ವ್ಯವಸ್ಥೆಯನ್ನು ಪಾರದರ್ಶಕವಾಗಿಡಲು ಕಾಂಗ್ರೆಸ್ ಎಂದಿಗೂ ಬದ್ಧವಾಗಿದೆ. RTI ಕಾಯ್ದೆಯನ್ನು ದುರ್ಬಲ ಮಾಡಲು ಪ್ರಯತ್ನಿಸುತ್ತಿರುವ ತಮ್ಮದೇ ಪಕ್ಷದ ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿ’ ಎಂದು ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: ಮದಗಜ ಕಾದಾಟ: ಎದುರಾಳಿಯ ದಂತ ಚುಚ್ಚಿ ಆನೆ ಸಾವು

‘ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಇರುವುದು ಗುಲಾಮಗಿರಿ ಮಾಡಲು ಮಾತ್ರ. ಜೆಡಿಎಸ್ ರಾಜ್ಯಾಧ್ಯಕ್ಷ ಕುಟುಂಬದ ಗುಲಾಮರಿಗೆ, ಬಿಜೆಪಿ ರಾಜ್ಯಾಧ್ಯಕ್ಷ ಹೈಕಮಾಂಡ್ ಗುಲಾಮಗಿರಿಗೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ನನ್ನೊಂದಿಗೆ ಚರ್ಚೆಯೇ ಮಾಡಿಲ್ಲ ಎಂದಿದ್ದಾರೆ ಸಿಎಂ ಇಬ್ರಾಹಿಂ. ಇತ್ತ ಈ ಮೈತ್ರಿ ನಾಟಕದಲ್ಲಿ ನಳೀನ್ ಕುಮಾರ್ ಕಟೀಲ್ ಅವರಿಗೆ ಕನಿಷ್ಠ ಅತಿಥಿ ಪಾತ್ರವೂ ಇಲ್ಲ. ಎರಡೂ ಪಕ್ಷದ ರಾಜ್ಯಾಧ್ಯಕ್ಷರಿಗೆ ನಿರ್ಧರಿಸುವ ಅಧಿಕಾರವಿರಲಿ ಕನಿಷ್ಠ ಅಭಿಪ್ರಾಯ ಹೇಳುವ ಸ್ವತಂತ್ರವೂ ಇಲ್ಲದಾಗಿರುವುದು ಉಭಯ ಪಕ್ಷಗಳ ರಾಜಕೀಯ ದಿವಾಳಿತನಕ್ಕೆ ಸಾಕ್ಷಿ’ ಎಂದು ಕಾಂಗ್ರೆಸ್ ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News