ಇಂದಿನಿಂದ ರಾಜ್ಯದಲ್ಲಿ ಬಜೆಟ್ ಅಧಿವೇಶನ ಆರಂಭ

ಸಿಎಂ ಬಸವರಾಜ ಬೊಮ್ಮಯಿ ಸರ್ಕಾರದ ಕೊನೆಯ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಮೊದಲು ಜಂಟಿ ಅಧಿವೇಶನ‌ಕ ನಡೆಯಲಿದ್ದು, ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ಥಾವೋರ್ ಚಂದ್ ಗೇಹ್ಲೋಟ್ ಭಾಷಣ ಮಾಡಲಿದ್ದಾರೆ. ಇದರಲ್ಲಿ ಪ್ರಮುಖವಾಗಿ ಸರ್ಕಾರದ ಸಾಧನೆಯ ಪೂರ್ತಿ ವಿವರವನ್ನ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. 

Written by - Yashaswini V | Last Updated : Feb 10, 2023, 08:43 AM IST
  • ಇಂದಿನಿಂದ ರಾಜ್ಯದಲ್ಲಿ ಜಂಟಿ‌ ಅಧಿವೇಶನ ಸ್ಟಾರ್ಟ್
  • ಬಿಜೆಪಿ ವಿರುದ್ಧ ಕೈ- ದಳ ಗುಡುಗೋದು ಫಿಕ್ಸ್‌
  • ಫೆಬ್ರವರಿ 17ಕ್ಕೆ ಕಾಮನ್ ಮ್ಯಾನ್‌ನಿಂದ 2ನೇ ಬಾರಿ ಬಜೆಟ್
ಇಂದಿನಿಂದ ರಾಜ್ಯದಲ್ಲಿ ಬಜೆಟ್ ಅಧಿವೇಶನ ಆರಂಭ  title=
ಇಂದಿನಿಂದ ರಾಜ್ಯದಲ್ಲಿ ಬಜೆಟ್ ಅಧಿವೇಶನ ಆರಂಭ

ಬೆಂಗಳೂರು: ಇಂದಿನಿಂದ ವಿಧಾನಮಂಡಲ ಅಧಿವೇಶನ ಅಧಿವೇಶನ ಪ್ರಾರಂಭವಾಗಲಿದೆ. ಇಂದು ರಾಜ್ಯಪಾಲರು ಎರಡು ಸದನ‌ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆದರೆ ಚುನಾವಣಾ ಪ್ರಚಾರದಲ್ಲಿ ಪೂರ್ಣವಾಗಿ ತೊಡಗಿಕೊಂಡಿರುವ ಶಾಸಕರು ಅಧಿವೇಶನವನ್ನು ಬದಿಗಿಡುವ ಸಾಧ್ಯತೆ ಇದ್ದು, ಮೂರು ಪಕ್ಷದ ಶಾಸಕರು ಸದನಕ್ಕೆ ಗೈರಾಗುವ ಸಾಧ್ಯತೆ ದಟ್ಟವಾಗಿದೆ.

ಹೌದು, ಸಿಎಂ ಬಸವರಾಜ ಬೊಮ್ಮಯಿ ಸರ್ಕಾರದ ಕೊನೆಯ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಮೊದಲು ಜಂಟಿ ಅಧಿವೇಶನ‌ಕ ನಡೆಯಲಿದ್ದು, ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ಥಾವೋರ್ ಚಂದ್ ಗೇಹ್ಲೋಟ್ ಭಾಷಣ ಮಾಡಲಿದ್ದಾರೆ. ಇದರಲ್ಲಿ ಪ್ರಮುಖವಾಗಿ ಸರ್ಕಾರದ ಸಾಧನೆಯ ಪೂರ್ತಿ ವಿವರವನ್ನ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಇದಾದ ಬಳಿ ಬಜೆಟ್ ಮಂಡನೆಯಾಗಲಿರುವ  17ನೇ ತಾರೀಖಿನವರೆಗೂ ಬಜೆಟ್ ಮೇಲೆ ಸದನದಲ್ಲಿ ಚರ್ಚೆಯಾಗಲಿದೆ. 

ಬಿಜೆಪಿ ವಿರುದ್ಧ ಕೈ- ದಳ ಗುಡುಗೋದು ಫಿಕ್ಸ್‌:
ಇನ್ನು ಈ ಅಧಿವೇಶನ ಬೊಮ್ಮಯಿ ಸರ್ಕಾರದ ಕೊನೆಯ ಅಧಿವೇಶನ. ಪ್ರಮುಖವಾಗಿ ಈ ಬಾರಿಯೂ ಸದನ ಸಾಕಷ್ಟು ಅಸಕ್ತಿ ಕೆರಳಿಸಿದೆ. ಚುನಾವಣೆ ಸಮೀಪದಲ್ಲಿ ಸದನ ನಡೆಯುತ್ತಿರೋದ್ರಿಂದ ಸರ್ಕಾರದ ವಿರುದ್ದ ಗುಡುಗಲು ವಿಪಕ್ಷಗಳು ಸಿದ್ದತೆ ನಡೆಸಿವೆ. ಅದರಲ್ಲೂ ಆಡಳಿತ ಪಕ್ಷ ಬಿಜೆಪಿಯನ್ನ ಕಟ್ಟಿ ಹಾಕಲು ಕಾಂಗ್ರೆಸ್ ತೀವ್ರ ತಯಾರಿ ನಡೆಸಿದೆ. ಪ್ರಚಲಿತ ವಿವಾದಗಳಾದ ಸಾಂಟ್ರೋ ರವಿ ಪ್ರಕರಣ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಭ್ರಷ್ಟಾಚಾರ, ಉತ್ತರ ಕರ್ನಾಟಕ ನೀರಾವರಿ ಯೋಜನೆಗಳ ಬಗ್ಗೆ ಸದನದಲ್ಲಿ ಸರ್ಕಾರವನ್ನು ಪ್ರಶ್ನೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರ ರೂಪಿಸಿದೆ. ಇನ್ನು ದಳಪತಿಗಳು ಈ ಬಾರಿ ಅಡಳಿತ ಪಕ್ಷವನ್ನು ಮಾತಿನ ಮೂಲಕವೇ ಕಟ್ಟಿ ಹಾಕಲು ಸಿದ್ದತೆ ನಡೆಸಿದ್ದು, ಈಗಾಗಲೇ ಕುಮಾರಸ್ವಾಮಿ ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡಸಿದ್ದಾರೆ. 

ಇದನ್ನೂ ಓದಿ- ನನ್ನ ಪ್ರಶ್ನೆಗೆ ಬಿಜೆಪಿ ನಾಯಕರು ಉತ್ತರ ಕೊಡುವ ಧಮ್ ತಾಕತ್ತು ತೋರಿಸುತ್ತಿಲ್ಲ: ಎಚ್‍ಡಿಕೆ

ಫೆಬ್ರವರಿ 17ರಂದು ಕಾಮನ್ ಮ್ಯಾನ್ ನಿಂದ ಎರಡನೇ ಬಾರಿಗೆ ಬಜೆಟ್ ಮಂಡನೆ- ಬಜೆಟ್ ಮೂಲಕ ಬಿಜೆಪಿ ಪ್ರಣಾಳಿಕೆ ತೋರಿಸಲು ಪ್ಲಾನ್..!
ಇನ್ನು ಇದೇ ಫೆಬ್ರವರಿ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎರಡನೇ ಬಾರಿಗೆ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಚುನಾವಣಾ ವರ್ಷ ಆಗಿರುವುವ ಹಿನ್ನಲೆಯಲ್ಲಿ ಈ ಬಾರಿಯ ಬಜೆಟ್ ಜನಪ್ರಿಯ ಘೋಷಣೆಗಳನ್ನು ಒಳಗೊಂಡಿರಲಿದೆ ಎಂದು ಊಹಿಸಲಾಗಿದೆ. ಈ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ತಂತ್ರಕ್ಕೆ ಪ್ರತಿತಂತ್ರವಾಗಿ ಬಜೆಟ್ ಘೋಷಣೆ ಮೂಲಕ ಪ್ರತ್ಯುತ್ತರ ನೀಡಲು ಕಮಲ ನಾಯಕರು ಸಿದ್ದರಾಗಿದ್ದಾರೆ. ವಿಪಕ್ಷಗಳು ಏನೇ ಅರೋಪ ಮಾಡಿದ್ರು ಜನಪ್ರಿಯತೆಯ ಘೋಷಣೆ ಮಾದುಅವ ಮೂಲಕ ಪ್ರತಿಪಕ್ಷಗಳಿಗೆ ಟಕ್ಕರ್ ನೀಡಲು ಬಿಜೆಪಿ ಕೂಡ ಫುಲ್ ರೆಡಿ ಆಗಿದೆ. 

ಇದನ್ನೂ ಓದಿ- ಚೀನಾ & ಅದಾನಿ ಪದಗಳು ಮೋದಿ ಬಾಯಿಯಿಂದ ಹೊರಬರಲು ಭಯಪಡುತ್ತಿರುವುದೇಕೆ?: ಕಾಂಗ್ರೆಸ್

ಚುನಾವಣೆ ಟೆಂಕ್ಷನ್ ಸದನಕ್ಕೆ ಹಾಜರಾತಿ ಕೊರತೆ ಸಾಧ್ಯತೆ..!
ಇನ್ನು ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಸದನದಲ್ಲಿ ಹಾಜರಾತಿಯ ಕೊರತೆ ಎದ್ದು ಕಾಣುವ ಸಾಧ್ಯತೆಯೂ ಇದೆ. ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ನಡೆಸುತ್ತಿದೆ. ಅಧಿವೇಶನದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಹೊಂದಾಣಿಕೆ ಮಾಡಿಕೊಂಡು ಯಾತ್ರೆ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ. ಬಿಜೆಪಿ ಕೂಡ ವಿಜಯ ಸಂಕಲ್ಪ ಯಾತ್ರೆ, ಭೂತ್ ಅಭಿಯಾನ ಸೇರಿದಂತೆ ಅನೇಕ ಕಾರ್ಯಕ್ರಮ ನಡೆಸುತ್ತಿದೆ. ಜೊತೆಗೆ ಜೆಡಿಎಸ್ ಪಂಚ ರತ್ನ ಯಾತ್ರೆ ಕೂಡ ಸಾಗುತ್ತಿದ್ದೂ ಎಲ್ಲಾರು ಚುನಾವಣೆಯ ತಯಾರಿಯಲ್ಲಿದ್ದು,  ಈ ಬಾರಿಯ ಅಧಿವೇಶನಕ್ಕೆ ಮೂರು ಪಕ್ಷದ ನಾಯಕರು ಗೈರಾಗುವ ಸಾಧ್ಯತೆ ಹೆಚ್ಚಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News