ಕೇವಲ 9 ಸೀಟ್‌ಗಾಗಿ ಕಾವೇರಿ ನೀರನ್ನು ತಮಿಳುನಾಡಿಗೆ ಕಾಂಗ್ರೆಸ್‌ ಮಾರಾಟ ಮಾಡಿದೆ: ಬಿಜೆಪಿ ಆರೋಪ

‌BJP vs Congress: ”ನಾ ಖಾವುಂಗಾ, ನಾ ಖಾನೆದುಂಗಾ” ಎನ್ನುವ ಪ್ರಧಾನಿ ಮೋದಿಯವರೇ, ಚುನಾವಣಾ ಬಾಂಡ್‌ನಲ್ಲಿ ತಿಂದವರು ಯಾರು, ತಿನ್ನಿಸಿದವರು ಯಾರು? ಚುನಾವಣಾ ಬಾಂಡ್ ವಿಚಾರದಲ್ಲಿ SBI ಕಳ್ಳಾಟ ಆಡುತ್ತಿರುವುದೇಕೆ?ʼ ಎಂದು ಬಿಜೆಪಿಗೆ ಕಾಂಗ್ರೆಸ್ ಪ್ರಶ್ನಿಸಿದೆ.

Written by - Puttaraj K Alur | Last Updated : Mar 15, 2024, 07:10 PM IST
  • ಕಾವೇರಿ ನೀರನ್ನು ಕಾಂಗ್ರೆಸ್‌ ಪಕ್ಷವು ತಮಿಳುನಾಡಿಗೆ ಕೇವಲ 9 ಸೀಟ್‌ಗಾಗಿ ಮಾರಾಟ ಮಾಡಿದೆ
  • ಮಜಾವಾದಿ ಸಿಎಂ ಸಿದ್ದರಾಮಯ್ಯರ ಕಾಂಗ್ರೆಸ್‌ ಸರ್ಕಾರ ಕರ್ನಾಟಕದ ಜನತೆಗೆ ದ್ರೋಹ ಬಗೆದಿದೆ
  • ಕನ್ನಡಿಗರ ಶಾಪ ಈ ನಾಡ ದ್ರೋಹಿ ಸರ್ಕಾರಕ್ಕೆ ತಟ್ಟದೇ ಇರುವುದಿಲ್ಲವೆಂದು ಬಿಜೆಪಿ ಆಕ್ರೋಶ
ಕೇವಲ 9 ಸೀಟ್‌ಗಾಗಿ ಕಾವೇರಿ ನೀರನ್ನು ತಮಿಳುನಾಡಿಗೆ ಕಾಂಗ್ರೆಸ್‌ ಮಾರಾಟ ಮಾಡಿದೆ: ಬಿಜೆಪಿ ಆರೋಪ title=
ಕಾಂಗ್ರೆಸ್‌ ವಿರುದ್ಧ ಬಿಜೆಪಿ ಆಕ್ರೋಶ!

ಬೆಂಗಳೂರು: ಕಾವೇರಿ ನೀರನ್ನು ಕಾಂಗ್ರೆಸ್‌ ಪಕ್ಷವು ತಮಿಳುನಾಡಿಗೆ ಕೇವಲ 9 ಸೀಟ್‌ಗಾಗಿ ಮಾರಾಟ ಮಾಡಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿರುವ ಪರಿಸ್ಥಿತಿಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ. 

ʼ"ಕಾವೇರಿ ಬಿಟ್ಟಿದೆ ಕಳ್ಳ ಕೈ". ಕರುನಾಡಲ್ಲಿ ಕುಡಿಯವುದಕ್ಕೆ ಹನಿ ನೀರು ಇಲ್ಲದಿದ್ದರೂ, ಮಜಾವಾದಿ ಸಿಎಂ ಸಿದ್ದರಾಮಯ್ಯರ ಕಾಂಗ್ರೆಸ್‌ ಸರ್ಕಾರ ದ್ರೋಹ ಬಗೆದಿದೆ. ಕನ್ನಡಿಗರ ಶಾಪ ಈ ನಾಡ ದ್ರೋಹಿ ಸರ್ಕಾರಕ್ಕೆ ತಟ್ಟದೇ ಇರುವುದಿಲ್ಲ!ʼವೆಂದ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ʼಕರ್ನಾಟಕದಲ್ಲಿ ನೀರೂ ಇಲ್ಲ - ಕರೆಂಟೂ ಇಲ್ಲ - ಅಭಿವೃದ್ದಿಯೂ ಇಲ್ಲ. ಅದೇ ರೀತಿ ಕಾಂಗ್ರೆಸ್‌‌ನಲ್ಲಿ ಚುನಾವಣೆಗೆ ಸ್ಫರ್ಧಿಸಲು ಅಭ್ಯರ್ಥಿಗಳೂ ಇಲ್ಲ!!ʼವೆಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ತೀವ್ರ ಹೃದಯಾಘಾತ ತಡೆಯಲು ಉಚಿತ ಇಂಜೆಕ್ಷನ್ -ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 

SBI ಕಳ್ಳಾಟ ಆಡುತ್ತಿರುವುದೇಕೆ?

ಇನ್ನು ಚುನಾವಣಾ ಬಾಂಡ್‌ ವಿಚಾರವಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ತೀವ್ರ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ʼಚುನಾವಣಾ ಬಾಂಡ್“ ಎನ್ನುವುದು ಕೇಂದ್ರ ಸರ್ಕಾರದ ಕಿಕ್ ಬ್ಯಾಕ್ ಹಗರಣದ ಹೊಸ ಹೊಸ ಹೆಸರು. ಇದು ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಹಗರಣವಾಗಿದೆ. ”ನಾ ಖಾವುಂಗಾ, ನಾ ಖಾನೆದುಂಗಾ” ಎನ್ನುವ ಪ್ರಧಾನಿ ಮೋದಿಯವರೇ, ಚುನಾವಣಾ ಬಾಂಡ್‌ನಲ್ಲಿ ತಿಂದವರು ಯಾರು, ತಿನ್ನಿಸಿದವರು ಯಾರು? ಚುನಾವಣಾ ಬಾಂಡ್ ವಿಚಾರದಲ್ಲಿ SBI ಕಳ್ಳಾಟ ಆಡುತ್ತಿರುವುದೇಕೆ?ʼ ಎಂದು ಪ್ರಶ್ನಿಸಿದೆ. 

ಬಿಜೆಪಿಗೆ ಮತದಾರರಿಂದ ಗೋ ಬ್ಯಾಕ್!

ಗೋಬ್ಯಾಕ್‌ ಎಂದವರಿಗೆ ಟಿಕೆಟ್‌ ಸಿಗಲಿಲ್ಲವೆಂದು ಪರೋಕ್ಷವಾಗಿ ಸಿಟಿ ರವಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಕಾಂಗ್ರೆಸ್‌ ವ್ಯಂಗ್ಯವಾಡಿದೆ. ʼಗೋ ಬ್ಯಾಕ್ ಅಭಿಯಾನ ನಡೆಸಿದ್ದು ಸಂತೋಷ ಕೂಟವೇ, ಟಿಕೆಟ್ ಆಕಾಂಕ್ಷಿಗಳೇ , ಕಾರ್ಯಕರ್ತರೇ ಅಥವಾ ಮತದಾರರೇ ಬಿಜೆಪಿ? ಕೆಲವರಿಗೆ ಟಿಕೆಟ್ ವಂಚನೆಯ ಹಿಂದೆ ಶೋಭಾ ಕರಂದ್ಲಾಜೆಯವರ ಪ್ರಭಾವ ಇತ್ತೇ? ನಯಾಪೈಸೆ ಅಭಿವೃದ್ಧಿ ಕೆಲಸಗಳನ್ನು ಮಾಡದ, ಕರ್ನಾಟಕದ ಹಿತಾಸಕ್ತಿಗೆ ದುಡಿಯದ ಬಿಜೆಪಿಯನ್ನು ಮತದಾರರು ಗೋ ಬ್ಯಾಕ್ ಎನ್ನುವುದು ಖಚಿತ! ಅಂದಹಾಗೆ, ಚಿಕ್ಕಮಗಳೂರಲ್ಲಿ ಗುಡಿಸಿದ ಕಸವನ್ನು ಬೆಂಗಳೂರಿನ ಉತ್ತರಕ್ಕೆ ತಂದು ಬಿಸಾಡುವುದು ಸರಿಯೇ!?ʼ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. 

ಇದನ್ನೂ ಓದಿ: ಬಿಎಸ್ ವೈ ಮೇಲೆ ನನಗೆ ನಂಬಿಕೆಯಿದೆ - ಸಂತೋಷ್ ಲಾಡ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News