ಪರಭಾಷೆಗೆ ಆದ್ಯತೆ, ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಕರವೇ ಪ್ರತಿಭಟನೆ

ಜೇಮ್ಸ್ ನಿರ್ಮಾಪಕರು ಹಾಗೂ ನಟ ಶಿವರಾಜ್ ಕುಮಾರ್ ಈ ವೇಳೆ ಕರವೇ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು. 

Last Updated : Mar 24, 2022, 06:14 PM IST
  • ಜೇಮ್ಸ್ ನಿರ್ಮಾಪಕರು ಹಾಗೂ ನಟ ಶಿವರಾಜ್ ಕುಮಾರ್ ಈ ವೇಳೆ ಕರವೇ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು.
ಪರಭಾಷೆಗೆ ಆದ್ಯತೆ, ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಕರವೇ ಪ್ರತಿಭಟನೆ title=

ಬೆಂಗಳೂರು: ಆರ್.ಆರ್.ಆರ್ ಮತ್ತು ಕಾಶ್ಮೀರ್ ಫಿಲಂಸ್ ಚಿತ್ರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಜೇಮ್ಸ್ ಚಿತ್ರವನ್ನು ತೆಗೆಯಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯು ಅನುಪಮಾ ಥಿಯೇಟರ್ ನಿಂದ ಪಾದಯಾತ್ರೆ ಹೊರಟು ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ನಡೆಸಿತು.ಜೇಮ್ಸ್ ನಿರ್ಮಾಪಕರು ಹಾಗೂ ನಟ ಶಿವರಾಜ್ ಕುಮಾರ್ ಈ ವೇಳೆ ಕರವೇ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು.

ಇದೇ ವೇಳೆ ಮಾಜಿ ಫಿಲಂ ಚೇಂಬರ್ ಅಧ್ಯಕ್ಷರಾದ ಚಿನ್ನೇಗೌಡ ಮಾತನಾಡಿ,"ಸರ್ಕಾರ ಇದನ್ನು ಗಮನಿಸಬೇಕು. ದಯವಿಟ್ಟು ಕನ್ನಡ ಚಿತ್ರರಂಗ ಉಳಿಸಿ.ರಾಜಕುಮಾರ್ ಹೇಳಿದ ಹಾಗೆ ನಾವು ಪರಭಾಷ ವಿರೋಧಿಗಳಲ್ಲ.ಕಲೆಕ್ಷನ್ ತುಂಬಾ ಚೆನ್ನಾಗಿದ್ದ ಸಿನಿಮಾ ತೆಗಿಬೇಡಿ.ಚೇಂಬರ್ ಅಧ್ಯಕ್ಷರ ಜೊತೆಗೆ ಮಾತಾಡ್ತಿನಿ ಎಲ್ಲೆಲ್ಲಿ ಸಿನಿಮಾ ತೆಗೆಯಲು ಮುಂದಾಗಿದ್ದಾರೆ ಅದನ್ನು ತೆಗೆಯಬಾರದು ಅಂತ ಮನವಿ ಮಾಡ್ತಿನಿ ಎಂದರು. ಥಿಯೇಟರ್ ಗಳಿಗೆ ನಾವು ಬಾಡಿಗೆ ಕೊಡ್ತಿವಿ ಅವರು ಬಾಡಿಗೆ ಕೊಡ್ತಾರೆ ಎಂದು ಹೇಳಿದರು.

ಇದನ್ನೂ ಓದಿ: Punjab CM : ಭಗತ್ ಸಿಂಗ್ ಪುಣ್ಯತಿಥಿಯಂದು ಸರ್ಕಾರಿ ರಜೆ ಘೋಷಿಸಿದ ಪಂಜಾಬ್ ಸಿಎಂ!

ಜೇಮ್ಸ್ ಸಿನಿಮಾಕ್ಕೆ ಇತರ ಭಾಷೆಗಳ ಸಿನಿಮಾಗಳಿಂದ ಅಡ್ಡಿಯಾಗುತ್ತಿರುವ ನಟ ಶಿವರಾಜ್ ಕುಮಾರ್ (shivarajkumar) ಮಾತನಾಡಿ, ಕಾಶ್ಮೀರ್ ಫೈಲ್ಸ ಗೂ ಆರ್.ಆರ್. ಆರ್ ಗೂ ಯಾವುದೇ ಸಂಬಂಧ ಇಲ್ಲ.ಕಾಶ್ಮೀರಿ ಸಿನಿಮಾ ಎಲ್ಲ ಕಡೆ ಕೂಡ ನಡೆಯುತ್ತಿದೆಯಲ್ಲ.ಯಾವುದೇ ಒಳ್ಳೆ ಸಿನಿಮಾ ನಡೆಯುವಾಗ ಅದನ್ನು ತೆಗೆಯಬಾರದು. ಅದನ್ನೇ ನಮ್ಮ ಅಪ್ಪ ಅಮ್ಮ ನಮಗೆ ಹೇಳಿಕೊಟ್ಟಿರೋದು. ಜೇಮ್ಸ್ ಸಿನಿಮಾ ಬಗ್ಗೆ ನಿರ್ಮಾಪಕರು ಸಿಎಂ ಜೊತೆ ಹೇಳಿಕೊಂಡಿದ್ದಾರೆ ಅಷ್ಟೇ, ಆದರೆ ಕಾಶ್ಮೀರಿ ಫೈಲ್ ನಿಂದ ಜೇಮ್ಸ್ ಸಿನಿಮಾಗೆ ಸಮಸ್ಯೆ ಆಗಿದೆ ಅಂತಾ ಹೇಳಿಲ್ಲ ಎಂದರು.

ಇದನ್ನೂ ಓದಿ: ಕೋವಿಡ್ ನಿಂದ ಗುಣಮುಖರಾದವರಿಗೆ ಕ್ಷಯ ಸೋಂಕು, ವರದಿ ಸಲ್ಲಿಸಲು ಸೂಚನೆ

ಇನ್ನು ಜೇಮ್ಸ್ ಸಿನಿಮಾ ನಿರ್ಮಾಪಕ ಕಿಶೋರ್ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ರನ್ನು ಭೇಟಿ ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಇಲ್ಲಿ ರಾಜಕೀಯ ಮಾತಾಡೋಕೆ ಬಂದಿಲ್ಲ.ನಾನೊಬ್ಬ ಇಂಡಸ್ಟ್ರಿಯ ನಟನಾಗಿ, ಶಿವಣ್ಣನಾಗಿ ಮಾತನಾಡಲು ಬಂದಿದ್ದೇನೆ. ಯಾವುದೇ ರಾಜಕಾರಣ ಬೇಡ. ನಾನು ಶಕ್ತಿಧಾಮ ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ ನೀಡಲು ಬಂದಿದ್ದೆ.ಇದೇ ಸಮಯದಲ್ಲಿ ಜೇಮ್ಸ್ ನಿರ್ಮಾಪಕರಿಗೂ ನೀವೆ ಬಂದು ಸಿಎಂ ಬಳಿ ಮಾತನಾಡಿ ಎಂದು ಹೇಳಿದ್ದೆ. ನನಗೂ ಏನು ಸಮಸ್ಯೆ ಆಗುತ್ತಿದೆ ಅನ್ನೋದು ಗೊತ್ತಿಲ್ಲ. ಅಭಿಮಾನಿಗಳ ಆರೋಪದ ಬಗ್ಗೆ ಗೊತ್ತಿಲ್ಲ. ಎಷ್ಟು ಥಿಯೇಟರ್‌ಗಳಲ್ಲಿ ಜೇಮ್ಸ್ ಸಿನಿಮಾ ನಡೆಯುತ್ತಿದೆ ಎಂದು ಪರಿಶೀಲನೆ ಮಾಡಿ ಬಂದು ಹೇಳಿ, ಎಲ್ಲಾ ಪರೀಕ್ಷಿಸಿ ಜನತೆಗೆ ನೀವು ಹೇಳಬೇಕು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News