ಕನ್ನಡ ಕಲಿಯದೇ ಇದ್ದುದು ನನ್ನ ದುರಾದೃಷ್ಟ: ಸಚಿವ ಜಮೀರ್ ಅಹಮದ್

ಕನ್ನಡ ಕಲಿಯದೇ ಇದ್ದುದು ನನ್ನ ದುರಾದೃಷ್ಟ. ಇದಕ್ಕೆ ಕನ್ನಡಿಗರ ಬಳಿ ನಾನು ಕ್ಷಮೆ ಕೇಳುತ್ತೇನೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ. 

Last Updated : Jun 9, 2018, 02:52 PM IST
ಕನ್ನಡ ಕಲಿಯದೇ ಇದ್ದುದು ನನ್ನ ದುರಾದೃಷ್ಟ: ಸಚಿವ ಜಮೀರ್ ಅಹಮದ್  title=

ತುಮಕೂರು: ಕನ್ನಡ ನಾಡಿನಲ್ಲಿದ್ದು ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕಾಯಿತು. ಕನ್ನಡ ಕಲಿಯದೇ ಇದ್ದುದು ನನ್ನ ದುರಾದೃಷ್ಟ. ಇದಕ್ಕೆ ಕನ್ನಡಿಗರ ಬಳಿ ನಾನು ಕ್ಷಮೆ ಕೇಳುತ್ತೇನೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ. 

ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶಿವಕುಮಾರ ಸ್ವಾಮಿಜಿ ಅವರ ಬಳಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನ್ನ ತಂದೆ, ತಾಯಿ ಬಾಲ್ಯದಲ್ಲಿ ನನ್ನನ್ನು ಕನ್ನಡ ಶಾಲೆಗೆ ಸೇರಿಸಲಿಲ್ಲ. ಇಂಗ್ಲಿಸ್ ಕಾನ್ವೆಂಟ್ ನಲ್ಲಿ ಶಿಕ್ಷಣ ಪಡೆದೆ. ಹೀಗಾಗಿ ಕನ್ನಡ ಚೆನ್ನಾಗಿ ಮಾತನಾಡಲು ಬರುವುದಿಲ್ಲ. ಇದಕ್ಕೆ ನಾನು ಜನತೆಯಲ್ಲಿ ಕ್ಷಮೆ ಕೇಳುತ್ತೇನೆ ಎಂದು ಅವರು ಹೇಳಿದರು. 

ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪ್ರಮನವಚನ್ ಸ್ವಿಕಾರ ಸಮಾರಂಭದಲ್ಲಿ ಕನ್ನಡ ಬಿಟ್ಟು ಇಂಗ್ಲಿಷ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಜಮೀರ್ ಅಹಮದ್ ಜನತೆಯಿಂದ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಆದರೀಗ ತಮ್ಮಿಂದ ತಪ್ಪಾಗಿದೆ ಜಮೀರ್ ಅಹಮದ್ ಒಪ್ಪಿಕೊಂಡಿದ್ದಾರೆ. 

ಇದೆ ಸಂದರ್ಭದಲ್ಲಿ ಸಂಪುಟ ರಚನೆ ಸಂಬಂಧ ಉಂಟಾಗಿರುವ ಭಿನ್ನಾಭಿಪ್ರಾಯಗಳ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ ವಿಷಯದಲ್ಲಿ ದೇವೇಗೌಡರಾಗಲಿ, ಮುಖ್ಯಮಂತ್ರಿ ಕುಮಾರಸ್ವಾಮಿ ಹಸ್ತಕ್ಷೇಪ ಮಾಡಿಲ್ಲ ಎಂದರು. ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿನ ಗೊಂದಲ ಸದ್ಯದಲ್ಲಿಯೇ ಹರಿಯಲಿದೆ ಎಂದರು.

Trending News