ಕುಟುಂಬ‌ ಒಪ್ಪಿದರೆ ಗೌರಿ ಹತ್ಯೆ ಸಿಬಿಐ ತನಿಖೆಗೆ: ಸಿಎಂ

ಗೌರಿ ಕುಟುಂಬದವರು ಒತ್ತಾಯ ಮಾಡಿದರೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸಿದ್ದ.

Last Updated : Sep 7, 2017, 02:36 PM IST
ಕುಟುಂಬ‌ ಒಪ್ಪಿದರೆ ಗೌರಿ ಹತ್ಯೆ ಸಿಬಿಐ ತನಿಖೆಗೆ: ಸಿಎಂ title=

ಬೆಂಗಳೂರು: ಅವರ ಕುಟುಂಬದವರು ಒತ್ತಾಯ ಮಾಡಿದರೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸಿಬಿಐಗೆ  ವಹಿಸಲು  ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ವಿಚಾರದಲ್ಲಿ ಸರ್ಕಾರ ಮುಕ್ತವಾಗಿದೆ. ಸಿಬಿಐ ತನಿಖೆಗೆ ವಹಿಸುವುದೇ ಇಲ್ಲ ಎಂದು ನಾವು ಹೇಳಿಲ್ಲ. ಕುಟುಂಬದವರು ಒತ್ತಾಯ ಮಾಡಿದರೆ ವಹಿಸುವುದಾಗಿ ಹೇಳಿದ್ದೇನೆ. ಕುಟುಂಬದವರ ಜೊತೆ ನಿನ್ನೆ ಈ ಬಗ್ಗೆ ಮಾತನಾಡಿದ್ದೇನೆ‌ ಎಂದರು. 

ತಮ್ಮ ಪತ್ರಿಕೆಯಲ್ಲಿ ಗೌರಿ ಅವರು ಸಂಘ ಪರಿವಾರದ ಅವಹೇಳನ ಮಾಡದೇ ಹೋಗಿದ್ದರೆ ಹತ್ಯೆ ಆಗುತ್ತಿರಲಿಲ್ಲ ಎಂಬ ಶಾಸಕ ಜೀವರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಶಾಸಕರ ಈ ಹೇಳಿಕೆಯ ಅರ್ಥವೇನು ? ಹತ್ಯೆ ಹಿಂದೆ ಯಾರಿದ್ದಾರೆ ಎಂಬುದು ಇದರಿಂದ ಅರ್ಥ ಆಗುವುದಿಲ್ಲವೇ ? ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

Trending News