ದೇವರಾಜೇಗೌಡ ಬಾಡಿನೇ ಕ್ಯಾಮರಾ, ವಾಕಿ ಟಾಕಿ ಇಟ್ಕೊಂಡು ಇರ್ತಾನೆ: ಮಾಜಿ ಸಂಸದ ಶಿವರಾಮೇಗೌಡ ಕಿಡಿ

ಬೆಂಗಳೂರು:ನಗರದ ಖಾಸಗಿ ಹೋಟೆಲ್’ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಅವರು, “ತಪ್ಪು ಮಾಡಿದರೆ ಶಿಕ್ಷೆಯಾಗಲಿ. ಸಂತ್ರಸ್ಥೆಯ ಭವಿಷ್ಯ ಮುಖ್ಯ. ದೇವರಾಜೇಗೌಡ ಬಾಡಿನೇ ಕ್ಯಾಮೆರಾ. ವಾಕಿ ಟಾಕಿ ಹಿಡ್ಕೊಂಡು ಇರ್ತಾನೆ” ಎಂದು ಗುಡುಗಿದರು.

Written by - Prashobh Devanahalli | Edited by - Bhavishya Shetty | Last Updated : May 8, 2024, 03:36 PM IST
    • ಡಿಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಆರೋಪ
    • ಸಂಸದ ಶಿವರಾಮೇಗೌಡ ವಿರುದ್ಧ ಆರೋಪ ಮಾಡಿದ್ದ ವಕೀಲ ದೇವರಾಜೇಗೌಡ
    • ದೇವರಾಜೇಗೌಡ ವಿರುದ್ಧ ಆಕ್ರೋಶ ಹೊರಹಾಕಿದ ಶಿವರಾಮೇಗೌಡ
ದೇವರಾಜೇಗೌಡ ಬಾಡಿನೇ ಕ್ಯಾಮರಾ, ವಾಕಿ ಟಾಕಿ ಇಟ್ಕೊಂಡು ಇರ್ತಾನೆ: ಮಾಜಿ ಸಂಸದ ಶಿವರಾಮೇಗೌಡ ಕಿಡಿ title=
File Photo

ಬೆಂಗಳೂರು: ಕಳೆದ ದಿನ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಆರೋಪ ಮಾಡಿದ್ದು, ಈ ಸಂಬಂಧ ಇಂದು ಶಿವರಾಮೇಗೌಡ ಸುದ್ದಿಗೋಷ್ಠಿ ನಡೆಸಿ ದೇವರಾಜೇಗೌಡ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಈ ಕ್ರಿಕೆಟರ್ ಹುಟ್ಟಿದ್ದು ಚೆನ್ನೈನಲ್ಲಿ… ಆದ್ರೆ IPLನಲ್ಲಿ ಆಡ್ತಿರೋದು RCB ಪರ!! 38 ವರ್ಷದ ಈ ಸ್ಟಾರ್ ಕ್ರಿಕೆಟರ್ ಯಾರೆಂದು ತಿಳಿಯಿತೇ?

ನಗರದ ಖಾಸಗಿ ಹೋಟೆಲ್’ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಅವರು, “ತಪ್ಪು ಮಾಡಿದರೆ ಶಿಕ್ಷೆಯಾಗಲಿ. ಸಂತ್ರಸ್ಥೆಯ ಭವಿಷ್ಯ ಮುಖ್ಯ. ದೇವರಾಜೇಗೌಡ ಬಾಡಿನೇ ಕ್ಯಾಮೆರಾ. ವಾಕಿ ಟಾಕಿ ಹಿಡ್ಕೊಂಡು ಇರ್ತಾನೆ” ಎಂದು ಗುಡುಗಿದರು.

“ದೇವರಾಜೇಗೌಡ ನನ್ನನ್ನು ಭೇಟಿ ಮಾಡಿ ಹಣಕ್ಕಾಗಿ ಬೇಡಿಕೆ ಇಡುವ ಯತ್ನ ನಡೆದಿದೆ. ದುಡ್ಡು ಮಾಡುವ ಪ್ರವೃತ್ತಿ ಇದೆ ಎಂಬ ಭಾವನೆ ಇದೆ, ಪೆನ್ ಡ್ರೈವ್’ಗೂ ನನಗೂ ಸಂಬಂಧ ಇಲ್ಲ. ದೇವರಾಜೇಗೌಡ ನನ್ನ ಹೆಸರು ಬಳಸಿಕೊಂಡಿದ್ದು ಸರಿಯಲ್ಲ. ವಿಶ್ವಾಸದ ಮೇಲೆ ಸಂಪರ್ಕ ಮಾಡುವ ಪ್ರಯತ್ನದ ಭಾಗವಾಗಿ ಪೋನ್ ಮಾಡಿ ಕೊಟ್ಟಿದ್ದಷ್ಟೇ. ದೇವರಾಜೇಗೌಡ ಎಂಬುವವರು ಭೇಟಿ ಮಾಡಬೇಕು ಎಂದು ಪೋನ್ ನಂಬರ್ ತೆಗದುಕೊಂಡು ಮಾತನಾಡಿದ್ದೆ. ಮತ್ತೊಮ್ಮೆ ಹೊಟೇಲಿನಲ್ಲಿ ಭೇಟಿ ಮಾಡಿದೆ. ಎಂಜಿ ರೋಡ್ ಕಚೇರಿಯಲ್ಲಿ ಬಂದಿದ್ರು. ಡಿಕೆ ಶಿವಕುಮಾರ್ ಭೇಟಿಗೆ ಮನವಿ ಮಾಡಿಸಿದ್ದರು. ದೇವರಾಜೇಗೌಡನಿಗೆ ಪೋನ್ ಮಾಡಿ ಮಾತನಾಡಿದೆ. ಕಾರ್ತಿಕ್ ಗೌಡ ಹೇಳಿಕೆಯನ್ನು ಗಮನಿಸಿದ್ದೇನೆ. ಪೆನ್ ಡ್ರೈವ್ ಅಶ್ಲೀಲ ಚಿತ್ರ ಬಿಡುಗಡೆ ಮಾಡಿಲ್ಲ. ಮೆಮೋರಿ‌ ಚಿಪ್’ನಲ್ಲಿರುವುದು  ಬಿಡುಗಡೆಯಾಗಿದೆ. ದೇವರಾಜೇಗೌಡ ಬಂಧಿಸಿ ತನಿಖೆ ನಡೆಸಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ವೀಳ್ಯದೆಲೆ ಕೂದಲಿಗೆ ಅಮೃತವಿದ್ದಂತೆ… ಹೀಗೆ ಬಳಸಿದರೆ ಕೂದಲು ದಪ್ಪ-ಸಮೃದ್ಧವಾಗಿ ಸೊಂಟದವರೆಗೆ ಬೆಳೆಯುತ್ತೆ!

“ಡಿಕೆ ನಾನು ಒಂದೇ ಬಾರಿ ರಾಜಕೀಯಕ್ಕೆ ಬಂದವರು. ಅದಕ್ಕಿಂತ ಹೆಚ್ಚು ನಮ್ಮ‌ನಡುವೆ ಆತ್ಮೀಯತೆ ಇದೆ. ದೇವರಾಜೇಗೌಡ ಇಲ್ಲಿಗೆ ಬಂದಿದ್ದ. ಅವನೇ ತನಿಖೆ ಸರಿಯಾಗಿ ಮಾಡಲ್ಲ ಎಂದಿದ್ದ. ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದೆ. ಎಸ್ ಐಟಿಯನ್ನ ರಚನೆ ಮಾಡಿದೆ. ಎಸ್ ಐಟಿ ರಾಜ್ಯ ಸರ್ಕಾರದ ಕೈಗೊಂಬೆ ಆದರೆ ಸಿಬಿಐಗೆ ಕೊಟ್ರೆ ಕೇಂದ್ರದ ಕೈಗೊಂಬೆ ಅಂತ ಅನ್ನಲ್ಲ. ದೇವರಾಜೇಗೌಡ ಡಿಕೆಶಿ ಜೊತೆ ಏನು ಮಾತನಾಡಿಲ್ಲ. ಅವರು ಏನಪ್ಪ ದೇವರಾಜೇಗೌಡ ಅಂದ್ರು ಅಷ್ಟೇ. ಅಷ್ಟೇ ಫೋನಿನಲ್ಲಿ ಮಾತನಾಡಿದ್ದು. ಅದನ್ನ ಬಿಟ್ಟು ಬೇರೆ ಏನೂ ಮಾತನಾಡಿಲ್ಲ. ನಾನು ಐದಾರು ಬಾರಿ ಡಿಕೆಶಿ ಭೇಟಿ ಮಾಡಿದ್ದೆ. ರಾಣೆಬೆನ್ನೂರಿನಲ್ಲಿದ್ದಾಗಲೂ ಫೋನ್’ನಲ್ಲಿ ಮಾತಾಡ್ದೆ. ಎಷ್ಟು ಗಂಟೆಗೆ ಮನೆಗೆ ಬರ್ತೇನೆ ಅಂತ ಕೇಳಿದ್ದೆ. ಅವರು ರಾತ್ರಿ ಬರ್ತೇನೆ ಅಂದ್ರು. ಬಂದ ಮೇಲೆ ಅವರನ್ನ ಭೇಟಿ ಮಾಡಿದ್ದೆ. ದೇವರಾಜೇಗೌಡ ಇನ್ನೊಂದು ರೂಂನಲ್ಲಿದ್ದ. ಆದರೆ ಏನೂ‌ಮಾತನಾಡಲಿಲ್ಲ. ದೇವರಾಜೇಗೌಡ ಗ್ರಾ.ಪಂ ಅಧ್ಯಕ್ಷನಾಗೋಕೂ ಲಾಯಕ್ಕಿಲ್ಲ. ಅವನಿಗೆ ಯಾರು ಬೋರ್ಡ್ ಕೊಡಿಸ್ತೇನೆ ಅಂದಿದ್ರು” ಎಂದು ಗುಡುಗಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News