ಎಸ್‌ಐಟಿ ಅವರೇ ಕಾರ್ತಿಕ್‌ನನ್ನು ಸೇಫ್‌ಗಾರ್ಡ್ ಮಾಡಿ ಅವರ ಬಳಿ ಇಟ್ಟುಕೊಂಡಿರಬಹುದು : ಮಾಜಿ ಶಾಸಕ ಕೆ.ಎಸ್.ಲಿಂಗೇಶ್

ಈ ಕೇಸ್‌‌ಗಳಿಂದ ರೇವಣ್ಣ ಅವರು ಕ್ಲೀನ್ ಚಿಟ್ ಪಡೆದು ಮುಕ್ತರಾಗಿ ಬಂದ ನಂತರ ನಮಗೆ ನೆಮ್ಮದಿ ಎಂದು ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಹೇಳಿದ್ದಾರೆ.   

Written by - Zee Kannada News Desk | Last Updated : May 23, 2024, 03:28 PM IST
  • ಕಾರ್ತಿಕ್ ಒಂದು ಮಾಧ್ಯಮಕ್ಕೆ ಮಾತ್ರ ಸಿಗುತ್ತಾರೆ
  • ಎಸ್‌ಐಟಿಗೆ ಮಾತ್ರ ಸಿಗಲ್ಲ
  • ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಹೇಳಿಕೆ
ಎಸ್‌ಐಟಿ ಅವರೇ ಕಾರ್ತಿಕ್‌ನನ್ನು ಸೇಫ್‌ಗಾರ್ಡ್ ಮಾಡಿ ಅವರ ಬಳಿ ಇಟ್ಟುಕೊಂಡಿರಬಹುದು : ಮಾಜಿ ಶಾಸಕ ಕೆ.ಎಸ್.ಲಿಂಗೇಶ್ title=

ಹಾಸನ : ಹೆಚ್‌.ಡಿ.ರೇವಣ್ಣ ಅವರಿಗೆ ಎರಡು ಪ್ರಕರಣಗಳಲ್ಲಿ ಜಾಮೀನು ಸಿಕ್ಕಿರುವುದು ನಮಗೆ, ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಮಾಧಾನ ತಂದಿದೆ. ಆದರೆ ಈ ಕೇಸ್‌‌ಗಳಿಂದ ರೇವಣ್ಣ ಅವರು ಕ್ಲೀನ್ ಚಿಟ್ ಪಡೆದು ಮುಕ್ತರಾಗಿ ಬಂದ ನಂತರ ನಮಗೆ ನೆಮ್ಮದಿ ಎಂದು ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಹೇಳಿದ್ದಾರೆ. 

ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ರೇವಣ್ಣ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು, ದೇವರ ದಯೆಯಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ. ಮೊಬೈಲ್‌ನಿಂದ ವಿಡಿಯೋ, ಫೋಟೋ ಕದ್ದಿರುವ ಕಾರ್ತಿಕ್‌ ಗೌಡನನ್ನು ಇದುವರೆಗೂ ಬಂಧಿಸಿಲ್ಲ. ಎಸ್‌ಐಟಿ ಮೇಲೆ‌ ನಮಗೆ ಅನುಮಾನ ಮೂಡುತ್ತಿದೆ ಎಂದಿದ್ದಾರೆ.

ವೀರಪ್ಪನ್ ನಕೀರನ್ ಪತ್ರಿಕೆಗೆ ಮಾತ್ರ ಸಿಗುತ್ತಿದ್ದರು. ಪೊಲೀಸ್‌ಗೆ ಸಿಗದ ವೀರಪ್ಪನ್ ಪತ್ರಕರ್ತರೊಬ್ಬರಿಗೆ ಸಿಗುತ್ತಿದ್ದರು. ಅದೇ ರೀತಿ ಕಾರ್ತಿಕ್ ಒಂದು ಮಾಧ್ಯಮಕ್ಕೆ ಮಾತ್ರ ಸಿಗುತ್ತಾರೆ, ಎಸ್‌ಐಟಿಗೆ ಮಾತ್ರ ಸಿಗಲ್ಲ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಮೋದಿ ಅಲೆ ಕಾಣಲಿಲ್ಲ, ಎಲ್ಲೆಡೆ ಇರೋದು ಗ್ಯಾರಂಟಿ ಅಲೆ.. 20 ಸ್ಥಾನದಲ್ಲಿ ಗೆಲುವು ಖಚಿತ: ಈಶ್ವರ ಖಂಡ್ರೆ 

ಎಸ್‌ಐಟಿ ಅವರೇ ಕಾರ್ತಿಕ್‌ನನ್ನು ಸೇಫ್‌ಗಾರ್ಡ್ ಮಾಡಿ ಅವರ ಬಳಿ ಇಟ್ಟುಕೊಂಡು ಇನ್ನೂ ಬೇರೆ  ಆರೋಪ ಮಾಡಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂಬ ಅನುಮಾನ ಇದೆ. ದೇವರಾಜೇಗೌಡರು ಡಿ.ಕೆ.ಶಿವಕುಮಾರ್ ಮೇಲೆ ಆರೋಪ ಮಾಡಿದರು. ಆಡಿಯೋಗಳನ್ನು ಬಿಡುಗಡೆ ಮಾಡಿದರು. ದೇವರಾಜೇಗೌಡರ ಧ್ವನಿಯನ್ನು ಅಡಗಿಸಿಲು ಇಲ್ಲಸಲ್ಲದ ಕೇಸ್‌ಗಳನ್ನು ಹಾಕಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದಿದ್ದಾರೆ.

ಕರ್ನಾಟಕದ ಪೊಲೀಸ್ ಬಗ್ಗೆ ನಮಗೆ ಗೌರವವಿದೆ. ಎಸ್‌ಐಟಿ, ಪೊಲೀಸ್ ಇಲಾಖೆ ಇವರೆಲ್ಲರೂ ಸಿಎಂ, ಡಿಸಿಎಂ ಕೈಕೆಳಗೆ ಬರುತ್ತವೆ. ಉಪಮುಖ್ಯಮಂತ್ರಿ ಸಿಡಿ ಶಿವಣ್ಣ ಅವರ ಕೈಕೆಳಗೆ ಈ ಸಂಸ್ಥೆ ಬರುವುದರಿಂದ ನ್ಯಾಯ ಸಿಗಲ್ಲ, ತನಿಖೆ ಸರಿಯಾಗಿ ಆಗಲ್ಲ. ಮುಖ್ಯಮಂತ್ರಿಗಳು ಎಲ್ಲೋ ಒಂದು ಕಡೆ ಅಡಿಯಾಳಾಗಿ ಡಿ.ಕೆ.ಶಿವಕುಮಾರ್ ಅವರನ್ನು ಸೇಫ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಗೃಹಮಂತ್ರಿಗಳು ಇದರ ಬಗ್ಗೆ ಚಕಾರ ಎತ್ತಲ್ಲ. ಎಸ್‌ಐಟಿ ಸಿಡಿ ಶಿವಣ್ಣ ಅವರ ಕಂಟ್ರೋಲ್‌ನಲ್ಲಿ ಇದೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಕೇಳಿಬಂದಿದ್ದು ಕೂಡಲೇ ಅವರ ರಾಜೀನಾಮೆ ಪಡೆಯಬೇಕು. ಅವರ ಮೇಲೆಯೂ ಎಸ್‌ಐಟಿ ತನಿಖೆ ನಡೆಸಲಿ ಎಂದಿದ್ದಾರೆ. 

ಇದನ್ನೂ ಓದಿ: Bengaluru Weather: ಬೆಂಗಳೂರಿನಲ್ಲಿಂದು ಸಾಧಾರಣದಿಂದ ಭಾರೀ ಮಳೆ ಸಾಧ್ಯತೆ ಬಗ್ಗೆ ಐಎಂಡಿ ಎಚ್ಚರಿಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News