#FightAgainstCovid-19: 200 ಹಾಸಿಗೆಯ ಐಸೋಲೇಷನ್‌ ವಾರ್ಡ್‌ ವ್ಯವಸ್ಥೆಗೊಳಿಸಿದ ಸೆಂಟ್‌ ಜಾನ್ಸ್‌ ಆಸ್ಪತ್ರೆ

"ಆಕ್ಸಿಜನ್‌ ಸೌಲಭ್ಯ ಸಹಿತ ಈ 200 ಹಾಸಿಗೆಯ  ಐಸೋಲೇಷನ್ ವಾರ್ಡ್‌ನಿಂದ ಅನುಕೂಲ ಆಗಲಿದೆ"- ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ  

Last Updated : Apr 1, 2020, 03:07 PM IST
#FightAgainstCovid-19: 200 ಹಾಸಿಗೆಯ ಐಸೋಲೇಷನ್‌ ವಾರ್ಡ್‌ ವ್ಯವಸ್ಥೆಗೊಳಿಸಿದ ಸೆಂಟ್‌ ಜಾನ್ಸ್‌ ಆಸ್ಪತ್ರೆ  title=

ಬೆಂಗಳೂರು: ಕರೋನಾವೈರಸ್ Covid-19) ಚಿಕಿತ್ಸೆಗೆ ಸರ್ಕಾರದ ಜತೆ ಕೈ ಜೋಡಿಸಿರುವ ಸೆಂಟ್‌ ಜಾನ್ಸ್‌ ಮೆಡಿಕಲ್‌ ಆಸ್ಪತ್ರೆ, 200 ಹಾಸಿಗೆಯ ಐಸೋಲೇಷೇನ್‌ ವಾರ್ಡ್‌ ಮೀಸಲಿಟ್ಟು ಸೇವೆ ಒದಗಿಸಲು ಮುಂದಾಗಿದೆ ಎಂದು ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ (CN Ashwathnarayana)  ತಿಳಿಸಿದ್ದಾರೆ. 

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಆಸ್ಪತ್ರೆಯ ನಿರ್ದೇಶಕ ಡಾ. ಪೌಲ್ ಪರತಜಮ್ ಅವರು ಕೊಟ್ಟ ಒಪ್ಪಿಗೆಯ ಪತ್ರ ಪಡೆದು ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ,  "ಆಕ್ಸಿಜನ್‌ ಸೌಲಭ್ಯ ಸಹಿತ ಈ 200 ಹಾಸಿಗೆಯ  ಐಸೋಲೇಷನ್ ವಾರ್ಡ್‌ನಿಂದ ಅನುಕೂಲ ಆಗಲಿದೆ," ಎಂದರು. 

ಲಾಕ್‌ಡೌನ್‌ನಿಂದ ರೈತರಿಗೆ ಆಗುತ್ತಿರುವ ಕಷ್ಟಗಳ ಬಗ್ಗೆ ಕಡೆಗೂ ಕಣ್ಣುಬಿಟ್ಟ ರಾಜ್ಯ ಸರ್ಕಾರ

"ಸರ್ಕಾರ ಈಗಾಗಲೇ ನಮ್ಮಲ್ಲಿರುವ ಸೌಲಭ್ಯದ ವಿವರ ನೀಡಿದೆ. ಇಟಲಿ ಮಾದರಿಯಲ್ಲಿ ಸೋಂಕಿತರ ಅಂದಾಜು ಸಂಖ್ಯೆಗೆ ಅನುಗುಣವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೂ, ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೆ ಹಾಸಿಗೆ ಸಮಸ್ಯೆ ಎದುರಾಗಬಹುದು ಎಂಬ ಚಿಂತೆ ಕಾಡಿತ್ತು. ಇಂಥ ಸಮಯದಲ್ಲಿ ಸೆಂಟ್‌ ಜಾನ್ಸ್‌ ಆಸ್ಪತ್ರೆ ನೆರವಿನ ಹಸ್ತ ಚಾಚಿದೆ,"ಎಂದರು. 

ಚಿಕ್ಕಬಳ್ಳಾಪುರ ಜಿಲ್ಲೆಗೆ 10 ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಲು ಡಿಸಿಎಂ ಸೂಚನೆ

"Covid-19 ಅಲ್ಲದೇ ಇತರ ಆರೋಗ್ಯ ಸಮಸ್ಯೆಗಳಿಗೆ ಅಗತ್ಯ ಇರುವ ರೋಗಿಗಳು ಆಸ್ಪತ್ರೆ ತಲುಪುವುದು ಕಷ್ಟವಾಗುತ್ತಿದೆ. ರಾಜ್ಯಮಟ್ಟದ ಸಹಾಯವಾಣಿ 104 ಅಡಿಯಲ್ಲಿ ತಂತ್ರಜ್ಞಾನದ ಬಳಕೆ ಮೂಲಕ  ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು," ಎಂದರು. 

ಸೆಂಟ್‌ ಜಾನ್ಸ್‌ನಲ್ಲಿ ಇಬ್ಬರಿಗೆ ಚಿಕಿತ್ಸೆ:
"ನಮ್ಮ ಆಸ್ಪತ್ರೆಯಲ್ಲಿ ಈಗಾಗಲೇ ಇಬ್ಬರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 15 ಐಸಿಯು ಹಾಸಿಗೆ ಜತೆಗೆ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ.  500 ವೈದ್ಯರು 1300 ದಾದಿಯರು, 1400 ಹಾಸಿಗೆ ವ್ಯವಸ್ಥೆ ಇದೆ. ಕೊವಿಡ್‌ ಚಿಕಿತ್ಸೆಗಾಗಿ ಐಸೋಲೇಷನ್‌ ವಾರ್ಡ್‌ ನಿರ್ಮಿಸಲಾಗಿದೆ. ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಲಾಗಿದೆ, " ಎಂದು ಸೆಂಟ್‌ ಜಾನ್ಸ್ ಆಸ್ಪತ್ರೆ ನಿರ್ದೇಶಕ ರೆವರೆಂಡ್ ಡಾ. ಪಾಲ್ ವಿವರಿಸಿದರು. 

ಟೆಲಿ ಕನ್ಸಲ್ಟೇಷನ್‌ಗೆ ಚಾಲನೆ
"ಕೊವಿಡ್ ಅಲ್ಲದೇ ಅಲರ್ಜಿ, ಅಸ್ತಮಾ, ಶೀತ, ಜ್ವರ, ಹಿರಿಯ ನಾಗರಿಕರ ಆರೋಗ್ಯ ಸಮಸ್ಯೆಗಳು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ  ಬಗ್ಗೆ ಮಾಹಿತಿ ಪಡೆಯಲು ಮತ್ತು ಸಂದೇಹಗಳನ್ನು ಬಗೆಹರಿಸಿಕೊಳ್ಳಲು ಜನರೇ ನೇರವಾಗಿ ವೈದ್ಯರೊಂದಿಗೆ ದೂರವಾಣಿ ಮೂಲಕ ಸಂವಹನ ನಡೆಸಲು  'ಟೆಲಿ ಕನ್ಸಲ್ಟೇಷನ್‌' ನಿಂದ ಸಾಧ್ಯವಾಗಲಿದೆ.  'ಟೆಲಿ ಮೆಡಿಸನ್‌' ಅಂದರೆ  ದೂರವಾಣಿ ಮೂಲಕ  ವೈದ್ಯರ ನಡುವೆ ಪರಸ್ಪರ ಮಾಹಿತಿ ವಿನಮಯಕ್ಕೆ ನಮ್ಮ ಕಾನೂನಿನಲ್ಲಿ ಅವಕಾಶ ಇತ್ತು. ಆದರೆ, ವೈದ್ಯರ ಜತೆ ಜನ ಸಾಮಾನ್ಯರು ದೂರವಾಣಿ ಸಮಾಲೋಚನೆ ನಡೆಸಲು ಅವಕಾಶ ಇರಲಿಲ್ಲ. ಈ ಸಂಬಂಧ ಕಾನೂನು ತಿದ್ದುಪಡಿ ತಂದು ಆದೇಶ ಹೊರಡಿಸಲಾಗಿದ್ದು, ವೈದ್ಯರ ಜತೆ ಜನರೇ ನೇರವಾಗಿ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ. ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8 ರಾತ್ರಿ 8ರವರೆಗೆ ಹಾಗೂ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಈ ಟೆಲಿಕನ್ಸಲ್ಟೇಷನ್‌ ಸೇವೆ ಲಭ್ಯವಿರಲಿದೆ,"ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದರು. 

ಈ ರೀತಿಯಾಗಿ ಪ್ರತಿ ಗಂಟೆಗೊಮ್ಮೆ ಕ್ವಾರಂಟೈನ್‌ನಲ್ಲಿ ಇರುವವರ ಮೇಲೆ ನಿಗಾ ಇಡಲಿದೆ ರಾಜ್ಯ ಸರ್ಕಾರ

ಪೋರ್ಟಿಯಾ ಮೆಡಿಕಲ್‌ ಸಂಸ್ಥೆ ಉಚಿತವಾಗಿ ಒದಗಿಸುತ್ತಿರುವ 'ಟೆಲಿ ಕನ್ಸಲ್ಟೇಷನ್‌' ಸೇವೆ ಪ್ರಾಯೋಗಿಕವಾಗಿ ಮಲ್ಲೇಶ್ವರದಲ್ಲಿ ಜಾರಿಯಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸುವ ಉದ್ದೇಶವಿದೆ.

ಸಭೆಯಲ್ಲಿ ಮೇಯರ್‌ ಗೌತಮ್ ಕುಮಾರ್ ಜೈನ್, ಬಿಬಿಎಂಪಿ ಕಮಿಷನರ್ ಅನಿಲ್‌ ಕುಮಾರ್, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ರಾಜು, ಸೆಂಟ್‌ ಜಾನ್ಸ್ ಆಸ್ಪತ್ರೆ ನಿರ್ದೇಶಕ ರೆವರೆಂಡ್ ಡಾ. ಪಾಲ್‌, ಪೋರ್ಟಿಯಾ ಸಂಸ್ಥೆಯ ಮುಖ್ಯಸ್ಥೆ ಮೀನಾ ಗಣೇಶ್‌ ಉಪಸ್ಥಿತರಿದ್ದರು. 

ಟೆಲಿ ಕನ್ಸಲ್ಟೇಷನ್‌ ವಿವರ
ಯಾವುದೇ ಆರೋಗ್ಯ ಸಮಸ್ಯೆ ಕುರಿತು ವೈದ್ಯರಿಂದ ಸಲಹೆ, ಮಾಹಿತಿ ಪಡೆಯಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 08066744788
ವೆಬ್‌ಸೈಟ್‌ಗೆ ಮೂಲಕ ವೈದ್ಯರ ಸಲಹೆ ಪಡೆಯಲು ಲಾಗಿನ್‌ ಆಗಿ:  https://t.co/LqPmTkiEnY https://t.co/VnCWprlIcD
http://lp.portea.com/free-doctor-malleshwaram/
lp.portea.com
 

Trending News