Exclusive: ರಾಜ್ಯ ಸರ್ಕಾರದಿಂದ ಸೈನಿಕರಿಗೆ ₹90 ಲಕ್ಷ ಬಾಕಿ: ಶೌರ್ಯ ಚಕ್ರ ಪಡೆದರು ಸಿಗದ ಅನುದಾನ!

ರಾಜ್ಯ ಸರ್ಕಾರ ಐದು ಸೈನಿಕರಿಗೆ ಒಟ್ಟು ತೊಂಬತ್ತು ಲಕ್ಷ ರೂಪಾಯಿ ಬಾಕಿ ಇಟ್ಟಿದ್ದು, ಕಳೆದ ವರ್ಷದ ಡಿಸೆಂಬರ್ ನಲ್ಲಿ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆ ಆದೇಶವಾದರೂ ಈವರೆಗೆ ಒಂದು ರೂಪಾಯಿ ಕೂಡ ಸೈನಿಕರಿಗೆ ಬರಲಿಲ್ಲ. ಈ ಪೈಕಿ ಒಬ್ಬ ಸೈನಿಕರಿಗೆ ಶೌರ್ಯ ಚಕ್ರ ಹಾಗೂ  ಮತ್ತೊಬ್ಬರಿಗೆ ಶೌರ್ಯ ಪ್ರಶಸ್ತಿ ದೊರಕಿದೆ.

Written by - Prashobh Devanahalli | Last Updated : Mar 5, 2024, 10:44 PM IST
  • ಡಿಸೆಂಬರ್ 2023ರಲ್ಲಿ ಐದು ಸೈನಿಕರಿಗೆ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆ ಒಟ್ಟು ₹95 ಲಕ್ಷ ಘೋಷಣೆ ಮಾಡಲಾಗಿತ್ತು.
  • ಆದರೆ ಸರ್ಕಾರದ ಆರ್ಥಿಕ ಇಲಾಖೆಗೆ ಕಡತಗಳು ಹೋಗಿ ಒಂದೊಂದು ಸಬೂಬು ಹೇಳಿ ಈವರೆಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ.
Exclusive: ರಾಜ್ಯ ಸರ್ಕಾರದಿಂದ ಸೈನಿಕರಿಗೆ ₹90 ಲಕ್ಷ ಬಾಕಿ: ಶೌರ್ಯ ಚಕ್ರ ಪಡೆದರು ಸಿಗದ ಅನುದಾನ!  title=

ಬೆಂಗಳೂರು : ರಾಜ್ಯ ಸರ್ಕಾರ ಐದು ಸೈನಿಕರಿಗೆ ಒಟ್ಟು ತೊಂಬತ್ತು ಲಕ್ಷ ರೂಪಾಯಿ ಬಾಕಿ ಇಟ್ಟಿದ್ದು, ಕಳೆದ ವರ್ಷದ ಡಿಸೆಂಬರ್ ನಲ್ಲಿ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆ ಆದೇಶವಾದರೂ ಈವರೆಗೆ ಒಂದು ರೂಪಾಯಿ ಕೂಡ ಸೈನಿಕರಿಗೆ ಬರಲಿಲ್ಲ. ಈ ಪೈಕಿ ಒಬ್ಬ ಸೈನಿಕರಿಗೆ ಶೌರ್ಯ ಚಕ್ರ ಹಾಗೂ  ಮತ್ತೊಬ್ಬರಿಗೆ ಶೌರ್ಯ ಪ್ರಶಸ್ತಿ ದೊರಕಿದೆ.

ಡಿಸೆಂಬರ್ 2023ರಲ್ಲಿ ಐದು ಸೈನಿಕರಿಗೆ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆ ಒಟ್ಟು ₹95 ಲಕ್ಷ ಘೋಷಣೆ ಮಾಡಲಾಗಿತ್ತು. ಆದರೆ ಸರ್ಕಾರದ ಆರ್ಥಿಕ ಇಲಾಖೆಗೆ ಕಡತಗಳು ಹೋಗಿ ಒಂದೊಂದು ಸಬೂಬು ಹೇಳಿ ಈವರೆಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ.No description available.

ಇದನ್ನೂ ಓದಿ- ದೇಶದ್ರೋಹ ಕೆಲಸದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇವೆ: ಡಿಸಿಎಂ ಡಿ.ಕೆ ಶಿವಕುಮಾರ್

ಶೌರ್ಯ ಚಕ್ರ ಪ್ರಶಸ್ತಿ ಪಡೆದ ಬೆಂಗಳೂರು ಗ್ರಾಮಾಂತರ ಮೂಲದ ಕ್ಯಾಪ್ಟನ್ ರಾಕೇಶ್ ಟಿ ಅವರಿಗೆ ₹50 ಲಕ್ಷ, ಬೆಳಗಾವಿಯ ಮಾಜಿ ಸಾಪರ್ ಯಮನಪ್ಪ ಹೊಸಟ್ಟಿ ಅವರಿಗೆ ನಿವೇಶನ ಬದಲಿಗೆ ₹15 ಲಕ್ಷ, ವಿಜಯಪುರದ ಶಾರದಾ ಲಿಂಗ ಹಳ್ಳಿ ಅವರಿಗೆ ನಿವೇಶನ ಬದಲಿಗೆ ₹15 ಲಕ್ಷ,ಮಡಿಕೇರಿಯ ಕ್ಯಾಪ್ಟನ್ ಭೀಮಯ್ಯ ಅವರಿಗೆ ಶೌರ್ಯ ಪ್ರಶಸ್ತಿ ಗೆ ₹13 ಲಕ್ಷ, ಗ್ರೂಪ್ ಕ್ಯಾಪ್ಟನ್ ಅಭಿಮಾನ್ ಗೆ ₹20 ಲಕ್ಷ ಸೇರಿದಂತೆ ಒಟ್ಟು ₹95 ಲಕ್ಷ ನೀಡಬೇಕು, ₹95 ಲಕ್ಷ ಪೈಕಿ ಡಿಸೆಂಬರ್ ನಿಂದ ₹492300 ನೀಡಲಾಗಿದ್ದು, ಇನ್ನು ₹90,07,700 ಬಾಕಿ ಇದೆ.

ವಿಳಂಬ ನೀತಿ ಕುರಿತಾಗಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿ : ಇತ್ತೀಚಿಗೆ ಜಮ್ಮು ನಲ್ಲಿ ಕರುನಾಡಿನ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮ ಸಂದರ್ಭದಲ್ಲಿ ಕೂಡ ಸರ್ಕಾರ ಇದೇ ರೀತಿ ವಿಳಂಬ ನೀತಿ ತೋರಿಸಿತ್ತು, ಈಗಲೂ ಈ ರೀತಿ ಮಾಡುತ್ತಿರುವುದು ಬಹಳ ದುಃಖ ಸಂಗತಿ. ಕೂಡಲೇ ಸರ್ಕಾರ 20 ವೀರನಾರಿಯರಿಗೆ ಸೇರಿದಂತೆ ಉಳಿದ ಬಾಕಿ ಹಣ ಕೂಡಲೇ ನೀಡಲು ಆಗ್ರಹ ಮಾಡುತ್ತೇನೆ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News