ಮಕ್ಕಳೊಂದಿಗೆ ಮತದಾನ ಮಾಡಿದ ಅಶ್ವಥ್‌ ನಾರಾಯಣ..!

Dr. C. N. Ashwath Narayan : ಹೈವೋಲ್ಟೇಜ್ ಕಣವಾಗಿದ್ದ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರ ಅಂತ್ಯವಾಗಿ, ಇಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ವೋಟಿಂಗ್ ನಡೆಯಲಿದ್ದು, ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಗೆಲುವಿನ ಆಶಾವಾದನ್ನು ಇಟ್ಟುಕೊಂಡಿವೆ.   

Written by - Zee Kannada News Desk | Last Updated : May 10, 2023, 08:26 AM IST
  • ಕರುನಾಡ ಕುರುಕ್ಷೇತ್ರದಲ್ಲಿ ಮತದಾನ ಆರಂಭವಾಗಿದ್ದು,
  • ರಾಜಕೀಯ ಮುಖಂಡರು, ಸಿನಿಮಾ ನಟ, ನಟಿಯರು ಕುಟುಂಬ ಸಮೇತವಾಗಿ ಮತಗಟ್ಟೆಗೆ ಹೋಗಿ ಮತ ಚಲಾವನೆ ಮಾಡುತ್ತಿದ್ದಾರೆ.
  • ಡಾ. ಸಿ. ಎನ್.‌ ಅಶ್ವಥ್‌ ನಾರಾಯಣ ಅವರು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತಹಾಕಲು ಸಹ ಕುಟುಂಬದೊಂದಿಗೆ ಸನ್ನದ್ಧರಾಗಿದ್ದಾರೆ.
ಮಕ್ಕಳೊಂದಿಗೆ ಮತದಾನ ಮಾಡಿದ ಅಶ್ವಥ್‌ ನಾರಾಯಣ..!  title=

Karnataka Asselmbly Election 2023 : ಕರುನಾಡ ಕುರುಕ್ಷೇತ್ರದಲ್ಲಿ ಮತದಾನ ಆರಂಭವಾಗಿದ್ದು, ರಾಜಕೀಯ ಮುಖಂಡರು, ಸಿನಿಮಾ ನಟ, ನಟಿಯರು ಕುಟುಂಬ ಸಮೇತವಾಗಿ ಮತಗಟ್ಟೆಗೆ ಹೋಗಿ ಮತ ಚಲಾವನೆ ಮಾಡುತ್ತಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಸಾಕಷ್ಟು ಬಾರಿ ಗೆಲುವು ಸಾಧಿಸಿರುವ ಡಾ. ಸಿ. ಎನ್.‌ ಅಶ್ವಥ್‌ ನಾರಾಯಣ ಅವರು 2019ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪುಟ ಸೇರುವ ಮೂಲಕ ಸಚಿವರಾದರು. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಇವರು ಸಚಿವರಾಗಿದ್ದಾರೆ.

ಇದೀಗ ಉನ್ನತ ಶಿಕ್ಷಣ ಸಚಿವರಾದಂತಹ ಡಾ. ಸಿ. ಎನ್.‌ ಅಶ್ವಥ್‌ ನಾರಾಯಣ ಅವರು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತಹಾಕಲು ಸಹ ಕುಟುಂಬದೊಂದಿಗೆ ಸನ್ನದ್ಧರಾಗಿದ್ದಾರೆ. ಅಶ್ವತ್‌ ನಾರಾಯಣ ಅವರ ಇಬ್ಬರು ಮಕ್ಕಳು ಸಹ ಮೊದಲ ಬಾರಿಗೆ ಮತದಾನ ಮಾಡಲು ಮುಂದಾಗಿದ್ದಾರೆ. ಸಹ ಕುಟುಂಬದೊದಿಗೆ ಮತಗಟ್ಟೆಗೆ ಹೋಗುವ ಮೊದಲು ದೇವರಿಗೆ ಪೂಜೆ ಸಲ್ಲಿಸಿ ಹೊರಟಿದ್ದಾರೆ.

ಇದನ್ನೂ ಓದಿ-ಹುಲಿಗೆಮ್ಮ ದೇವಿ ಜಾತ್ರೆ: ಮದ್ಯ ಮಾರಾಟ ನಿಷೇಧ

 ಮಲ್ಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು  ಬುಧವಾರ ಬೆಳಿಗ್ಗೆ ಆರ್ ಎಂವಿ 2ನೇ ಸ್ಟೇಜ್ ಡಾಲರ್ಸ್ ಕಾಲೋನಿಯಲ್ಲಿರುವ ಶಿಕ್ಷಾ ಪ್ರೀ-ಸ್ಕೂಲ್ ಕೊಠಡಿ ಸಂಖ್ಯೆ 2ರ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು. 

ಚುನಾವಣೆಯಲ್ಲಿ ಮತಹಾಕುವುದು ಎಲ್ಲರ ಹಕ್ಕು ಮತ್ತು ಕರ್ತವ್ಯ ಅದನ್ನು ಎಲ್ಲರೂ ಸರಿಸಮಾನರಾಗಿ ಪಾಲಿಸಬೇಕು ಎನ್ನುವ ಸಂದೇಶವನ್ನು ಡಾ. ಸಿ. ಎನ್.‌ ಅಶ್ವಥ್‌ ನಾರಾಯಣ ನೀಡಿದ್ದಾರೆ. ಅವರ ಮಕ್ಕಳು ಅಮೋಘ ಹಾಗೂ ಆಕಾಂಕ್ಷ ಅವರದು ಇದು ಮೊದಲ ಮತದಾನವಾಗಿದ್ದು, ಡಾ. ಸಿ. ಎನ್.‌ ಅಶ್ವಥ್‌ ನಾರಾಯಣ ಅವರು ಅವರ ಸಮೇತವಾಗಿ ಮತಹಾಕಿದ್ದಾರೆ.

ಮತದಾನ ಎನ್ನುವುದು 18 ವರ್ಷ ತುಂಬಿದ ಪ್ರತಿಯೊಬ್ಬ ದೇಶದ ಪ್ರಜೆಯೂ ಕೂಡ ಮತದಾನ ಮಾಡಬೇಕು. ಇದು ಎಲ್ಲರ ಜವಾಬ್ದಾರಿಯ ಜೊತೆಗೆ ಹಕ್ಕು ಸಹ.  ಡಾ. ಸಿ. ಎನ್.‌ ಅಶ್ವಥ್‌ ನಾರಾಯಣ ಅವರು ಬೆಳಗಿನಜಾವ ಬೇಗನೆ ಮತಗಟ್ಟೆಗೆ ಹೋಗಿ ಮತ ಚಲಾವಣೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. 

ಮತ ಹಾಕಿ ಹೊರಬಂದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಶ್ವಥನಾರಾಯಣ ಅವರು,"ನಮ್ಮದು ಸಕ್ರಿಯ ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಮತ ಹಾಕುವುದೆಂದರೆ ನಾಡು ಕಟ್ಟುವ ಕೆಲಸದಲ್ಲಿ ಭಾಗಿಯಾದಂತೆ. ಪ್ರತಿಯೊಬ್ಬರೂ ತಪ್ಪದೇ ತಮ್ಮ ಹಕ್ಕು ಚಲಾಯಿಸಿ ಶೇಕಡ 100ರಷ್ಟು ಮತದಾನ ಆಗುವಂತೆ ಮಾಡಬೇಕು" ಎಂದು ಅಭಿಪ್ರಾಯಪಟ್ಟರು

ಇದನ್ನೂ ಓದಿ-ಬೆಂಗಳೂರಿನಲ್ಲಿ ಭಾರೀ ಮಳೆಗೆ ಕುಸಿದ ಮನೆಗಳು, ಕಾರುಗಳು ಜಖಂ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News